ಹೂವಿನಹಡಗಲಿ (ಬಳ್ಳಾರಿ); ಇದು ನಾಡಿನ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ದೈವವಾಣಿ ಕಾರಣಿಕದ ನುಡಿ. ಸುಕ್ಷೇತ್ರದ ಡೆಂಕನ ಮರಡಿಯಲ್ಲಿ ನಾಡಿನ ನಾನಾ ಕಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ನಡುವೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಅನುರಣಿಸಿತು.
11 ದಿನ ಉಪವಾಸ ವ್ರತ ಆಚರಿಸಿದ ಗೊರವಪ್ಪನನ್ನು ಡೆಂಕನಮರಡಿಯ ಸಿಂಹಾಸನ ಕಟ್ಟೆಯಿಂದ ಕಾರಣೀಕದ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ದೇಗುಲದ ವಂಶಪಾರಂಪರ್ಯ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್ ಅಶ್ವರೂಢರಾಗಿ ಡೆಂಕನ ಮರಡಿಗೆ ಬರುತ್ತಿದ್ದಂತೆಯೇ ಏಳು ಕೋಟಿ ಏಳು ಕೋಟಿಗೋ .... ಛಾಂಗ್ಬಲೋ.... ಎಂಬ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಬಳಿಕ ವಿಜಯನಗರ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ ಮೂರ್ತಿಗಳನ್ನು ಭವ್ಯ ಮೆರವಣಿಗೆ ಮೂಲಕ ಡೆಂಕನಮರಡಿಗೆ ತರಲಾಯಿತು.
ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ರಿಂದ ಭಂಡಾರದ ಆಶೀರ್ವಾದ ಪಡೆದ ಗೊರವಪ್ಪ ಸಂಪ್ರದಾಯ ಮತ್ತು ಪರಂಪರೆಯ ಸಂಕೇತವಾಗಿರುವ 15 ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲಕ್ಷ ಣ ಆಕಾಶದತ್ತ ಶೂನ್ಯವನ್ನು ದಿಟ್ಟಿಸಿ, ಸದ್ದಲೇ ಎಂದಾಗ ಇಡೀ ಭಕ್ತ ಸಮೂಹದಲ್ಲಿ ನಿಶಬ್ಧ ವಾತಾವರಣ ಮೂಡಿತು. ಈ ಸಂದರ್ಭದಲ್ಲಿ ಆಕಾಶಕ್ಕೆ ಸಿಡಿಲು ಬಡಿತಲೇ ಪರಾಕ್ ಎಂಬ ದೈವವಾಣಿಯನ್ನು ನುಡಿದ ಕೆಳಕ್ಕೆ ಬಿದ್ದನು.
ಈ ಬಾರಿಯ ಕಾರಣಿಕದ ದೈವವಾಣಿ ಸಾಮಾಜಿಕ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯನ್ನು ಸೂಚಿಸುತ್ತದೆ. ಹಾಲಿ ರಾಜಕೀಯ ವಿದ್ಯಾಮಾನದಲ್ಲೂ ಗಂಭೀರ ಬೀರುವುದಾಗಿ ನೆರೆದ ಭಕ್ತರು ವಿಶ್ಲೇಷಿಸಿದರು.
ಗೊಂದಲ: ಈ ಬಾರಿಯ ಕಾರ್ಣಿಕದ ನುಡಿ ಸಾಕಷ್ಟು ಗೊಂದಲಮಯವಾಗಿತ್ತು. ಎಂದಿನಂತೆ ಗೊರವಪ್ಪ ಸದ್ದಲೇ ಎಂದಾಗ ಇಡೀ ಭಕ್ತ ಸಮೂಹ, ಪಕ್ಷಿಗಳ ಕಲರವ ನಿಶಬ್ಧವಾಗುತ್ತಿತ್ತು. ಈ ಬಾರಿ ಸದ್ದಲೇ ಎಂದ ಕ್ಷ ಣದಲ್ಲೇ ಕಾರಣಿಕ ಹೇಳಿರುವುದು, ಕಾರಣಿಕದ ನುಡಿ ಅಸ್ಪಷ್ಟವಾಗಿತ್ತು. ಇದರಿಂದ ನೆರೆದಿದ್ದ ಲಕ್ಷಾಂತರ ಭಕ್ತರು ಕೆಲ ಕಾಲ ಸ್ಥಬ್ದರಾಗಿ ನಿಂತಿದ್ದರು. ಬಳಿಕ ಮುಜರಾಯಿ ಇಲಾಖೆ ಸಿಬ್ಬಂದಿ ಕಾರಣಿಕದ ನುಡಿಯನ್ನು ಸ್ಪಷ್ಟಪಡಿಸಿದ ನಂತರವೇ ಭಕ್ತರು ಅಲ್ಲಿಂದ ತೆರಳಿದರು.
ಕಾರಣಿಕ ಉತ್ಸವದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ,ಸಂಸದ ಶ್ರೀರಾಮುಲು, ಮಾಜಿ ಶಾಸಕ ಚಂದ್ರನಾಯ್ಕ, ಜಿಲ್ಲಾಧಿಕಾರಿ ರಾಮ್ಪ್ರಸಾತ್ ಮನೋಹರ್, ಎಸ್ಪಿ ಆರ್.ಚೇತನ್, ಮುಜರಾಯಿ ಇಲಾಖೆ ಎಸಿ ಎಸ್ಪಿಬಿ ಮಹೇಶ, ಇಒ ಹಾಲಪ್ಪ, ಡಿಸಿಸಿ ಅಧ್ಯಕ್ಷ ಬಿ.ವಿಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಅಟವಾಳಿಗಿ ಕೊಟ್ರೇಶ,ಕೆ.ಎಂ.ಹಾಲಪ್ಪ, ಇತರರಿದ್ದರು.