ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಬಳ್ಳಾರಿಯ ಐತಿಹಾಸಿಕ ಉಜ್ಜಯಿನಿ ರಥೋತ್ಸವ ರದ್ದು

ಕೊರೊನಾ ಹಿನ್ನೆಲೆ ಯಾರು ಕೂಡ ಉಜ್ಜಯಿನಿಗೆ ಬರಬೇಡಿ. ರಥೋತ್ಸವ , ತೈಲಾಭಿಷೇಕ ಎಲ್ಲವನ್ನೂ ರದ್ದು ಗೊಳಿಸಲಾಗಿದೆ. ಈ ವರ್ಷ ಭಕ್ತರು ಸಹಕರಿಸಬೇಕು ಎಂದು ಉಜ್ಜಯಿನಿ ಶ್ರೀಗಳು ಮನವಿ ಮಾಡಿದ್ದಾರೆ.

Vijaya Karnataka Web 27 Apr 2020, 2:15 pm
ಬಳ್ಳಾರಿ: ಐತಿಹಾಸಿಕ ಉಜ್ಜಯಿನಿ ತೈಲಾಭಿಷೇಕಕ್ಕೆ ಕೊರೊನಾ ಭೀತಿ ಎದುರಾಗಿದೆ. ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಐತಿಹಾಸಿಕ ರಥೋತ್ಸವ, ತೈಲಾಭಿಷೇಕವನ್ನು ರದ್ದು ಮಾಡಲಾಗಿದೆ.
Vijaya Karnataka Web ಉಜ್ಜಯಿನಿ ರಥೋತ್ಸವ (ಸಂಗ್ರಹ ಚಿತ್ರ)
ಉಜ್ಜಯಿನಿ ರಥೋತ್ಸವ (ಸಂಗ್ರಹ ಚಿತ್ರ)


ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆಯದ ವಿಶಿಷ್ಟವಾದ ತೈಲಾಭಿಷೇಕ ಆಚರಣೆ ಜಾತ್ರೆ ಉಜ್ಜಯಿನಿಯಲ್ಲಿ ನಡೆಯುತ್ತಿತ್ತು.

ಪ್ರತಿ ವರ್ಷ ಲಕ್ಷಾಂತರ ಭಕ್ತರ ಮಧ್ಯೆ ಉಜ್ಜಯಿನಿಯ ಮರುಳ ಸಿದ್ದೇಶ್ವರ ದೇಗುಲದ ಶಿಖರಕ್ಕೆ ತೈಲಾಭಿಷೇಕ ನಡೆಯುತ್ತಿತ್ತು.

ಕೊರೊನಾ ಭೀತಿ ಹಿನ್ನೆಲೆ ನಾಳೆ ನಡೆಯಲಿರೋ ತೈಲಾಭಿಷೇಕ ಮತ್ತು ರಥೋತ್ಸವ ರದ್ದು ಮಾಡಲಾಗಿದೆ. ಉಜ್ಜೈನಿ ಪೀಠದ ಜಗದ್ಗುರುಗಳು ಅಧಿಕೃತ ಪ್ರಕಟಣೆ ನೀಡಿದ್ದಾರೆ.

ಕೊರೊನಾ ಹಿನ್ನೆಲೆ ಯಾರು ಕೂಡ ಉಜ್ಜಯಿನಿಗೆ ಬರಬೇಡಿ. ರಥೋತ್ಸವ , ತೈಲಾಭಿಷೇಕ ಎಲ್ಲವನ್ನೂ ರದ್ದು ಗೊಳಿಸಲಾಗಿದೆ. ಈ ವರ್ಷ ಭಕ್ತರು ಸಹಕರಿಸಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

ಲಕ್ಷಾಂತರ ಭಕ್ತರು ಬರೋ ಹಿನ್ನೆಲೆ ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ರಥೋತ್ಸವ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ