ಆ್ಯಪ್ನಗರ

ಕೈ ನಾಯಕರ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ: ಕಾಂಗ್ರೆಸ್‌ ಶಾಸಕ ನಾಗೇಂದ್ರ

ಕಾಂಗ್ರೆಸ್‌ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದಕ್ಕೆ ಆರೋಪ, ಪ್ರತ್ಯಾರೋಪಗಳು ಕೇಳಿಬಂದಿವೆ. ಕಾಂಗ್ರೆಸ್ ಶಾಸಕರೊಬ್ಬರು ಇದಕ್ಕೆ ನೀಡಿರುವ ಪ್ರತಿಕ್ರಿಯೆ ಹೀಗಿದೆ.

Vijaya Karnataka Web 10 Oct 2019, 4:24 pm
ಬಳ್ಳಾರಿ: ಕಾಂಗ್ರೆಸ್‌ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದಕ್ಕೆ ಭಾರಿ ವಿರೋದ ವ್ಯಕವಾಗಿದೆ. ಕಾಂಗ್ರೆಸ್‌ ನಾಯಕರು ಇದೊಂದು ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪಿಸುತ್ತಿದ್ದಾರೆ. ಆದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ ನಾಗೇಂದ್ರ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
Vijaya Karnataka Web ಬಿ ನಾಗೇಂದ್ರ
ಬಿ ನಾಗೇಂದ್ರ


ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆಯುತ್ತಿರುವುದು ರಾಜಕೀಯ ಪ್ರೇರಿತವಲ್ಲ. ಇದೊಂದು ಪ್ರೊಸೆಸ್‌ ಎಂದು ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೈ ಶಾಸಕ ಬಿ.ನಾಗೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಪರಂ, ಜಾಲಪ್ಪಗೆ ಐಟಿ ಶಾಕ್! ಅಧಿವೇಶನದ ಹೊತ್ತಲ್ಲೇ 'ಕೈ' ಕಟ್, ಬಾಯ್ ಮುಚ್?

ಪರಂ,ಜಾಲಪ್ಪ ಕೋಟೆಗೆ ಐಟಿ ಲಗ್ಗೆ- ಹಾರ್ಡ್ ಡಿಸ್ಕ್‌ನಲ್ಲಿದ್ಯಾ ಟಾಪ್ ಸೀಕ್ರೆಟ್!

ಜಾಲಪ್ಪ, ಪರಮೇಶ್ವರ್‌ಗೆ ಐಟಿ ಶಾಕ್‌: ದಿನದ ಪ್ರಮುಖ ಬೆಳವಣಿಗೆಗಳು


ಇದೆಲ್ಲ. ಪ್ರೋಸಸ್, ರಾಜಕೀಯ ಪ್ರೇರಿತವಲ್ಲ. ನಾನು ಕೂಡ ಉದ್ಯಮಿ. ಸಿದ್ಧಾರ್ಥ್ ಕಾಲೇಜು ಮೇಲೆ ದಾಳಿ ಮಾಡಿದ್ದು ಇದೇ ರೀತಿಯ ಪ್ರಕ್ರಿಯೆ ಎಂದು ನಾಗೇಂದ್ರ ಹೇಳಿದರು.

ಡಾ.ಜಿ.ಪರಮೇಶ್ವರ ಅವರು ಪಾರದರ್ಶಕವಾಗಿ ಕೆಲಸ ಮಾಡಿದ್ದಾರೆ. ಐಟಿ ದಾಳಿಯಿಂದ ಅವರಿಗೆ ಸಮಸ್ಯೆಯಾಗೋಲ್ಲ ಎಂದು ತಿಳಿಸಿದರು.

ನಾನು ಬಿಜೆಗೆ ಹೋಗೋದು ಕೇವಲ ಊಹಾಪೋಹದ ಸುದ್ದಿ. ನಾನು ಗೆದ್ದಾಗಿನಿಂದ ಇದೇ ವಿಚಾರವಿದೆ. ಅದು ಊಹಾಪೋಹಗಳಾಗಿಯೇ ಉಳಿಯಲಿ. ನನಗೆ ಕಳೆದ ಮೂರು ತಿಂಗಳಿಂದ ಆರೋಗ್ಯ ಸರಿಯಲ್ಲ. ನಾನು ಈಗ ರಿಕವರಿಯಾಗಿ ಓಡಾಡುತ್ತಿರುವೆ ಎಂದು ಶಾಸಕ ಬಿ ನಾಗೇಂದ್ರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ