ಆ್ಯಪ್ನಗರ

ಬಳ್ಳಾರಿ: ಹಾಲಿ ಮೇಯರ್‌ರಿಂದಲೂ 'ಕಪ್ಪ' ಸಂದಾಯ ಎಂದ ಸೋಮಶೇಖರ್‌ ರೆಡ್ಡಿ

ಪಾಲಿಕೆ ಕಾಂಗ್ರೆಸ್‌ ಸದಸ್ಯ ಆಸೀಫ್‌ ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅದು ಅವರವರ ವೈಯಕ್ತಿಕ ವಿಚಾರ. ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ವೀರಭದ್ರ ಎಂಬಂತೆ, ಹಣ ಕೊಟ್ಟವರು, ಇಸ್ಕೊಂಡವರು ಕಾಂಗ್ರೆಸ್‌ನವರೇ.

Vijaya Karnataka Web 14 May 2022, 9:10 pm
ಬಳ್ಳಾರಿ: ''ಪಾಲಿಕೆ ಮೇಯರ್‌ ಸ್ಥಾನಕ್ಕಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಅವರ ಸಂಬಂಧಿ ಎರಿಸ್ವಾಮಿ ಅವರಿಗೆ ಪಾಲಿಕೆ ಕಾಂಗ್ರೆಸ್‌ ಸದಸ್ಯ ಆಸೀಫ್‌ 3.50 ಕೋಟಿ ರೂ. ನೀಡಿದ ಬಗ್ಗೆ ಪ್ರಕರಣ ದಾಖಲಾಗಿರುವುದು ಒಂದೆಡೆಯಾದರೆ, ಹಾಲಿ ಮೇಯರ್‌ರಿಂದಲೂ 3.50 ಕೋಟಿ ರೂ. ಪಡೆದ ಮಾತುಗಳು ಪಾಲಿಕೆ ಕಾಂಗ್ರೆಸ್‌ ಸದಸ್ಯರಿಂದಲೇ ಸದ್ಯ ಕೇಳಿಬರುತ್ತಿವೆ'' ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಆರೋಪಿಸಿದರು.
Vijaya Karnataka Web ಸೋಮಶೇಖರ್ ರೆಡ್ಡಿ
ಸೋಮಶೇಖರ್‌ ರೆಡ್ಡಿ


ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸೋಮಶೇಖರ್‌ ರೆಡ್ಡಿ ಮಾತನಾಡಿದರು.

ಸಿಡಿಲಿಗೆ ಗಣಿ ಜಿಲ್ಲೆ ಬಳ್ಳಾರಿ ತತ್ತರ! 4 ವರ್ಷದಲ್ಲಿ 14 ಜನ, 77 ಪ್ರಾಣಿಗಳು ಬಲಿ

''ಪಾಲಿಕೆ ಕಾಂಗ್ರೆಸ್‌ ಸದಸ್ಯ ಆಸೀಫ್‌ ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅದು ಅವರವರ ವೈಯಕ್ತಿಕ ವಿಚಾರ. ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ವೀರಭದ್ರ ಎಂಬಂತೆ, ಹಣ ಕೊಟ್ಟವರು, ಇಸ್ಕೊಂಡವರು ಕಾಂಗ್ರೆಸ್‌ನವರೇ. ಆದರೆ, ಇದಕ್ಕೆ ಬಿಜೆಪಿ ಹಾಗೂ ಸಚಿವ ಬಿ. ಶ್ರೀರಾಮುಲು ಅವರು ಬೆಂಬಲ ನೀಡಿದ್ದಾರೆ ಎಂಬುದು ಸರಿಯಲ್ಲ. ಬಿಜೆಪಿಯವರು ಮಟ್ಕಾ, ಕ್ಲಬ್‌ ನಡೆಸುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದು, ಇಂತಹ ಚಟುವಟಿಕೆಗಳನ್ನು ಕಾಂಗ್ರೆಸ್‌ನವರೇ ಮಾಡುತ್ತಿರಬಹುದು. ಇದಕ್ಕೆ ಕಾನೂನು ರೀತಿ ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಯಿದೆ'' ಎಂದರು.


ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸುವೆ

''ಬಿ. ಶ್ರೀರಾಮುಲು ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜತೆ ನಾನೂ ಕೈಜೋಡಿಸಿ ನಗರ ಹಾಗೂ ಜಿಲ್ಲೆಯ ಅಭಿವೃದ್ಧಿ ಕನಸನ್ನು ಈಡೇರಿಸಲು ಬದ್ಧನಿದ್ದೇನೆ. ಶ್ರೀರಾಮುಲು ಉಸ್ತುವಾರಿ ಸಚಿವರಾಗಿ ನಡೆಸಿರುವ ಅಭಿವೃದ್ಧಿ ಕಾರ್ಯಗಳಿಂದ ತಲ್ಲಣಗೊಂಡಿರುವ ಕಾಂಗ್ರೆಸ್‌, ಮುಂದಿನ ಚುನಾವಣೆ ಹೇಗೆ ಎದುರಿಸಬೇಕು ಎಂಬ ಭಯದಿಂದ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಬಿ.ಶ್ರೀರಾಮುಲು ಅವರು ಉಸ್ತುವಾರಿ ಸಚಿವರಾಗಿ ಬಂದ ನಂತರ ಕೆಎಂಆರ್‌ಸಿ, ಡಿಎಂಎಫ್‌, ಕೆಕೆಆರ್‌ಡಿಬಿ ಅನುದಾನ ತಂದು ಅಭಿವೃದ್ಧಿಗೆ ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ'' ಎಂದು ಭವಿಷ್ಯ ನುಡಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಸಚಿವ ಶ್ರೀರಾಮುಲು ಅವರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಈ ಕುರಿತು ಶ್ರೀ ರಾಮುಲು ಅವರು ಹೇಳಿಲ್ಲ. ಅವರು ರಾಜ್ಯ ಮಟ್ಟದ ನಾಯಕರು. ಎಲ್ಲಿಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಶ್ರೀರಾಮುಲು ವಿರುದ್ಧ ಎಸ್‌.ಆರ್‌.ಹಿರೇಮಠ ಅವರು ಮಾಡಿರುವ ಭೂ ಕಬಳಿಕೆ ಆರೋಪ ಸತ್ಯಕ್ಕೆ ದೂರವಾಗಿದೆ. ಆರೋಪ ಮಾಡುವುದೇ ಹಿರೇಮಠ ಅವರ ಕೆಲಸ.
ಜಿ.ಸೋಮಶೇಖರ್‌ ರೆಡ್ಡಿ, ಶಾಸಕ, ಬಳ್ಳಾರಿ ನಗರ

ಸೆಂಬರ್‌ ಒಳಗೆ ಕಾರ್ಖಾನೆ ಶುರು

ಮಾಜಿ ಶಾಸಕ ಟಿ. ಎಚ್‌.ಸುರೇಶ್‌ ಬಾಬು ಮಾತನಾಡಿ, ''ಕಂಪ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ ಕಾಮಗಾರಿಗೆ ಸಿದ್ಧತೆ ನಡೆಸಲಾಗಿದ್ದು, ಭೂಮಿ ಪೂಜೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಈಗಾಗಲೇ ಯಂತ್ರೋಪಕರಣ ಬಂದಿದ್ದು, ಡಿಸೆಂಬರ್‌ನೊಳಗೆ ಕಾರ್ಖಾನೆ ಆರಂಭಿಸಲಾಗುವುದು'' ಎಂದರು.

ಬಳ್ಳಾರಿ, ವಿಜಯನಗರದಲ್ಲಿ ಆಲಿಕಲ್ಲು ಮಳೆ, ಭಾರಿ ಪ್ರಮಾಣದಲ್ಲಿ ನಷ್ಟವಾಯ್ತು ಬೆಳೆ

'ಬಳ್ಳಾರಿ ರಿಪಬ್ಲಿಕ್‌ ಅಲ್ಲ, ಪಬ್ಲಿಕ್‌'

''ರಿಪಬ್ಲಿಕ್‌ ಬಳ್ಳಾರಿ ಎಂದು ಕಾಂಗ್ರೆಸ್‌ ಆರೋಪ ಮಾಡುತ್ತಿದೆ. ಇದು ರಿಪಬ್ಲಿಕ್‌ ಅಲ್ಲ, ಪಬ್ಲಿಕ್‌ ಬಳ್ಳಾರಿ. ಕಾಂಗ್ರೆಸ್‌ನವರು ಕಳೆದ ಬಾರಿ ನಗರದಲ್ಲಿ ಐದು ವರ್ಷ ಆಡಳಿತ ನಡೆಸಿದ್ದು, ಈ ಬಾರಿಯೂ ಅಧಿಕಾರದಲ್ಲಿದ್ದಾರೆ. ಅದಕ್ಕೂ ಮುನ್ನ ಬಿಜೆಪಿ ಆಡಳಿತ ನಡೆಸಿದ್ದು, ಈಗಲೂ ಶಾಸಕರ ಅನುದಾನದಡಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಬೇಕಾದರೆ ಅಭಿವೃದ್ಧಿ ವಿಚಾರದ ಬಗ್ಗೆ ಕಾಂಗ್ರೆಸ್‌ ಮುಖಂಡರು ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬರಲಿ'' ಎಂದು ಶಾಸಕ ಸೋಮಶೇಖರ್‌ ರೆಡ್ಡಿ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ