ಆ್ಯಪ್ನಗರ

ಬಳ್ಳಾರಿ ವಿಮ್ಸ್ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿಎಂ ಅಶ್ವತ್ಥ್‌ ನಾರಾಯಣ ಸೂಚನೆ

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಗಾಲಿ ಕುರ್ಚಿಯಿಲ್ಲದೇ ತಂದೆ ಮಗಳನ್ನು ಹೊತ್ತೊಯ್ದ ಪ್ರಕರಣ ಸದ್ದು ಮಾಡಿದೆ. ಈ ಹಿನ್ನೆಲೆ ಈ ಸಂಬಂಧ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್‌ ನಾರಾಯಣ ವರದಿ ಕೇಳಿದ್ದಾರೆ.

Vijaya Karnataka Web 23 Jan 2020, 1:14 pm
ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ತುರ್ತು ನಿಗಾಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ಗಾಲಿ ಕುರ್ಚಿ ನೀಡದ ಕಾರಣ ಬುಧವಾರ, ಆನಾರೋಗ್ಯ ಪೀಡಿತ ಮಗಳನ್ನು ತಂದೆಯೇ ಹೆಗಲ ಮೇಲೆ ಹೊತ್ತೊಯ್ದ ಘಟನೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣದ ಬಗ್ಗೆ ಡಿಸಿಎಂ ಅಶ್ವತ್ಥ್‌ ನಾರಾಯಣ ಸಹ ಪ್ರತಿಕ್ರಿಯೆ ನೀಡಿದ್ದಾರೆ.
Vijaya Karnataka Web bellary vims wheel chair


ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೋಗಿಯನ್ನು ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸಲು ಗಾಲಿ ಕುರ್ಚಿ ನೀಡದಿರುವ ಪ್ರಕರಣದ ಕುರಿತು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್‌ ನಾರಾಯಣ ಅವರು ವರದಿ ಕೇಳಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್‌ ನಾರಾಯಣ ಸಿ.ಎನ್‌ ಅವರು ಈ ಸಂಬಂಧ ವರದಿ ಕೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕಾಲೇಜಿನ ಡೀನ್‌ಗೆ ಸೂಚನೆ ನೀಡಿದ್ದಾರೆ. ಘಟನೆಯ ಬಗ್ಗೆ ವಿಜಯ ಕರ್ನಾಟಕ ಸುದ್ದಿ ಪ್ರಕಟ ಮಾಡಿತ್ತು.

ಆರೋಗ್ಯ ಸಚಿವರ ತವರಲ್ಲೇ ಗಾಲಿ ಕುರ್ಚಿ ಸಿಗದೆ ಮಗಳನ್ನು ಹೊತ್ತು ಆಸ್ಪತ್ರೆ ಸುತ್ತಿದ ತಂದೆ

ಇನ್ನೊಂದೆಡೆ, ವಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಮಗಳ ಚಿಕಿತ್ಸೆಗಾಗಿ ಹೆಗಲ ಮೇಲೆ ಹೊತ್ತುಕೊಂಡು ಪರದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಡಾ.ದೇವಾನಂದ್ ಪ್ರತಿಕ್ರಿಯಿಸಿದ್ದಾರೆ. ವಿಮ್ಸ್ ಆಸ್ಪತ್ರೆಯಲ್ಲಿ ತಂದೆಯೊಬ್ಬರು ಮಗಳಿಗೆ ಚಿಕಿತ್ಸೆಗೆ ಕರೆತರಲು ಗಾಲಿ ಕುರ್ಚಿ ನೀಡಲಿಲ್ಲ ಎನ್ನುವ ವಿಷಯ ಗಮನಕ್ಕೆ ಬಂದಿದೆ.

ವಿಶೇಷಚೇತನರ ನೆರವಿಗೆ ವ್ಹೀಲ್‌ಚೇರ್‌, ಸ್ವಯಂ ಸೇವಕರು ಸಿದ್ಧ

ಈ ಬಗ್ಗೆ ಇಂದು ಡಿಸಿಎಂ ಅಶ್ವತ್ಥ್‌ ನಾರಾಯಣ್‌ ಅವರ ಬೆಂಗಳೂರು ಕಚೇರಿಯಿಂದ ಕರೆ ಮಾಡಿ ಮಾಹಿತಿ ಸಹ ಪಡೆಯಲಾಗಿದೆ. ಮುಂದೆ ಈ ತರ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ವಿಮ್ಸ್ ಸಿಬ್ಬಂದಿ, ವೈದ್ಯರಿಗೆ ಸಹ ಸೂಚನೆ ನೀಡಲಾಗಿದೆ. ವಿಮ್ಸ್ ಆಸ್ಪತ್ರೆಯ ನಾನಾ ವಿಭಾಗಳಲ್ಲಿ ನಾಮಫಲಕ ಅಳವಡಿಸುವುದರೊಂದಿಗೆ ಚಿಕಿತ್ಸೆಗೆ ಕರೆತರಲು ಎರಡು ಗಾಲಿ ಕುರ್ಚಿಗಳನ್ನು ಕಾಯಂ ಆಗಿ ಕಾಯ್ದಿರಿಸಲಾಗುವುದು. ತುರ್ತು ಚಿಕಿತ್ಸೆ ನೀಡುವ ಬಗ್ಗೆ, ರೋಗಿಗಳಿಗೆ ಕೂಡಲೇ ಸ್ಪಂದಿಸಲು ನಾಮ ಫಲಕದಲ್ಲಿ ವೈದ್ಯರ ಮಾಹಿತಿ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ವಿಜಯ ಕರ್ನಾಟಕಕ್ಕೆ ವಿಮ್ಸ್ ನಿರ್ದೇಶಕ ಡಾ.ದೇವಾನಂದ್‌ ತಿಳಿಸಿದರು.

ವಯೋಶ್ರೀ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಿ; ಎಸ್‌.ಮುನಿಸ್ವಾಮಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ