ಆ್ಯಪ್ನಗರ

ದೇವೇಗೌಡರು ಭಸ್ಮಾಸುರ, ಉಗ್ರಪ್ಪ ತಲೆ ಮೇಲೆ ಕೈ ಇಟ್ಟಿದ್ದಾರೆ: ಸೋಮಣ್ಣ

ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ತೊಳಲಾಟದಲ್ಲಿದ್ದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಆ ಪಕ್ಷ ದ ಉಸ್ತುವಾರಿಗಳಲ್ಲವೇ ಅಲ್ಲ, ಬದಲಾಗಿ ದೇವೇಗೌಡ ರೇವಣ್ಣರೇ ಈ ಸರಕಾರದ ಉಸ್ತುವಾರಿ.

Vijaya Karnataka 31 Oct 2018, 2:59 pm
ಕೂಡ್ಲಿಗಿ: ವಿ.ಎಸ್‌.ಉಗ್ರಪ್ಪ ಉತ್ತಮ ವ್ಯಕ್ತಿತ್ವವುಳ್ಳ ಸೂಕ್ತ ಅಭ್ಯರ್ಥಿ ಅವರ ಗೆಲವು ನಿಶ್ಚಿತ ಎಂದು ಹೇಳಿದ್ದಾರೆ. ದೇವೆಗೌಡರಿಗೆ ಉಗ್ರಪ್ಪ ಯಾವಾಗ ಒಳ್ಳೆಯವರಾದ್ರು? ಅವರ ಮುಖವನ್ನೇ ನೋಡಲ್ಲ ಎಂದು ದೇವೆಗೌಡ ಈ ಹಿಂದೆ ಹೇಳಿದ್ದರು. ಅವರು ಯಾರ ತಲೆ ಮೇಲೆ ಕೈ ಇಡುತ್ತಾರೊ ಅವರು ಭಸ್ಮವಾಗುತ್ತಾರೆ. ಈಗ ಉಗ್ರಪ್ಪನ ತಲೆಮೇಲೆ ಕೈ ಇಟ್ಟಿದ್ದಾರೆ ಮುಂದಿನದನ್ನು ನೀವೆ ಅರ್ಥಮಾಡಿಕೊಳ್ಳಿ ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ಹೇಳಿದರು.
Vijaya Karnataka Web somanna


ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಪಕ್ಷದಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ''ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ತೊಳಲಾಟದಲ್ಲಿದ್ದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಆ ಪಕ್ಷ ದ ಉಸ್ತುವಾರಿಗಳಲ್ಲವೇ ಅಲ್ಲ, ಬದಲಾಗಿ ದೇವೇಗೌಡ ರೇವಣ್ಣರೇ ಈ ಸರಕಾರದ ಉಸ್ತುವಾರಿ. ರಾಹುಲ್‌ ಗಾಂಧಿ ದೇವೆಗೌಡರ ಮಾತನ್ನು ಮಾತ್ರ ಕೇಳುತ್ತಾರೆ ಇಲ್ಲಿನ ಕಾಂಗ್ರೆಸ್‌ ಮುಖಂಡರು ಅವರಿಗೆ ಲೆಕ್ಕಕ್ಕಿಲ್ಲ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ