ಬಳ್ಳಾರಿ: ನಗರದಲ್ಲಿ ಬಿಜೆಪಿಯಿಂದ ನವೆಂಬರ್ 20 ರಂದು ನಡೆಯುವ ರಾಜ್ಯ ಎಸ್ಟಿ ಮೋರ್ಚಾ ಸಮಾವೇಶಕ್ಕೆ ರಾಜ್ಯದ ಎಲ್ಲ ಕಡೆಯಿಂದ 10 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳುವ ಜನತೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ರಾಜ್ಯ ಮಟ್ಟದ ಬಿಜೆಪಿ ಎಸ್ಟಿ ಮೋರ್ಚಾ ಬೃಹತ್ ಸಮಾವೇಶದ ಹಿನ್ನೆಲೆ ನಗರದ ಎಸ್ಪಿ ವೃತ್ತದಲ್ಲಿನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿಆರಂಭವಾದ ಕಾಲ್ ಸೆಂಟರ್ ಕಾರ್ಯಾಲಯ ಉದ್ಘಾಟನೆ ಮಾಡಿ ಶುಕ್ರವಾರ ಮಾತನಾಡಿದರು. ನಗರದ ಟಿಬಿ ಸ್ಯಾನಿಟೋರಿಯಂ ಬಳಿಯ ಬೃಹತ್ ಮೈದಾನದಲ್ಲಿ ನವೆಂಬರ್ 20 ರಂದು ಸಮಾವೇಶ ನಡೆಯಲಿದ್ದು, ಸಿದ್ಧತೆಗಾಗಿ 40 ನಾನಾ ಸಮಿತಿ ರಚಿಸಲಾಗಿದೆ. ಈಗಾಗಲೇ ಮೈದಾನ ಸ್ವಚ್ಛತೆ, ಊಟದ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ಬಸ್ಗಳ ವ್ಯವಸ್ಥೆ ಸೇರಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಮಾವೇಶಕ್ಕೆ ರಾಜ್ಯದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರನ್ನು, ಎಸ್ಸಿ, ಎಸ್ಟಿ ಸಮುದಾಯದವರನ್ನು ಆಹ್ವಾನಿಸಲು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾಲ್ ಸೆಂಟರ್ ಆರಂಭಿಸಿದ್ದು, 50 ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸಮಾವೇಶಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಲಾಗಿದ್ದು, ಮೂವರ ಪೈಕಿ ಒಬ್ಬರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ, ಎಂದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳು ಮುರಹರಗೌಡ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಮುಖಂಡರಾದ ವೀರಶೇಖರ ರೆಡ್ಡಿ, ಗಾಳಿ ಶಂಕ್ರಪ್ಪ, ಬಿ.ರಾಮಕೃಷ್ಣ, ಸುನಿಲ್ ಪ್ರಲ್ಹಾದ್, ಸುಗುಣ, ಜ್ಯೋತಿ ಪ್ರಕಾಶ್, ಪ್ರಕಾಶ್ ಗೌಡ, ರಾಜಿವ್ ತೋಗರಿ ಇತರರಿದ್ದರು.
ರೆಡ್ಡಿ ಸಹೋದರರ ವಿರುದ್ಧ ಬಿಜೆಪಿ ಮುಖಂಡನ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಶೇಖರ್ ರೆಡ್ಡಿ, ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ನಿರ್ಧರಿಸುವುದು ಜನತೆ ಎಂದು ತಿರುಗೇಟು ನೀಡಿದರು. ಅದಲ್ಲದೇ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಪರ್ಧೆ, ಹೊಸ ಪಕ್ಷ ಕಟ್ಟುವ ಕುರಿತು ನನಗೆ ಗೊತ್ತಿಲ್ಲ ಎಂದರು.
ಸೋಮಶೇಖರ್ ರೆಡ್ಡಿ ವಿರುದ್ಧ ಕಿಡಿಕಾರಿದ್ದ ರಾಮಲಿಂಗಪ್ಪ!ಸೋಮಶೇಖರ ರೆಡ್ಡಿ ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಗೆಲ್ಲುವುದು ಕಷ್ಟವಿದೆ. ಅದಕ್ಕಾಗಿ ಈ ಬಾರಿ ಲಿಂಗಾಯತ, ಕುರುಬ, ಕಮ್ಮ, ಬಲಿಜ ಸಮಾಜದಿಂದ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡಿದರೆ ಒಳಿತು. ನಾನೂ ಸ್ಪರ್ಧೆಗೆ ರೆಡಿಯಾಗಿರುವೆ. ಕಾರ್ಯಕರ್ತರನ್ನು ರಕ್ಷಿಸಿ, ಕುಟುಂಬ ರಾಜಕೀಯ ನಿಲ್ಲಿಸಿ, ಬಿಜೆಪಿಯನ್ನು ಗೆಲ್ಲಿಸಿ ಎಂದು ಬಿಜೆಪಿ ಮುಖಂಡ ರಾಮಲಿಂಗಪ್ಪ ಗುರುವಾರ ಮನವಿ ಮಾಡಿದ್ದರು. ಕಳೆದ ವರ್ಷ ಕನಕ ಜಯಂತಿಯಂದು ಶಾಸಕ ಸೋಮಶೇಖರ ರೆಡ್ಡಿ ರಾಮಲಿಂಗಪ್ಪನವರಿಂದಲೇ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದಿದ್ದರು. ಆದರೆ, ಜಾತಿ ಆಧಾರದ ಮೇಲೆ ಬುಡಾ ಅಧ್ಯಕ್ಷನಾಗಿದ್ದ ನನ್ನನ್ನು ತೆಗೆಸಿದ್ದರು ಎಂದು ಕಿಡಿಕಾರಿದ್ದರು.
ಸಮಾವೇಶಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಲಾಗಿದ್ದು, ಮೂವರ ಪೈಕಿ ಒಬ್ಬರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ, ಎಂದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳು ಮುರಹರಗೌಡ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಮುಖಂಡರಾದ ವೀರಶೇಖರ ರೆಡ್ಡಿ, ಗಾಳಿ ಶಂಕ್ರಪ್ಪ, ಬಿ.ರಾಮಕೃಷ್ಣ, ಸುನಿಲ್ ಪ್ರಲ್ಹಾದ್, ಸುಗುಣ, ಜ್ಯೋತಿ ಪ್ರಕಾಶ್, ಪ್ರಕಾಶ್ ಗೌಡ, ರಾಜಿವ್ ತೋಗರಿ ಇತರರಿದ್ದರು.
ರೆಡ್ಡಿ ಸಹೋದರರ ವಿರುದ್ಧ ಬಿಜೆಪಿ ಮುಖಂಡನ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಶೇಖರ್ ರೆಡ್ಡಿ, ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ನಿರ್ಧರಿಸುವುದು ಜನತೆ ಎಂದು ತಿರುಗೇಟು ನೀಡಿದರು. ಅದಲ್ಲದೇ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಪರ್ಧೆ, ಹೊಸ ಪಕ್ಷ ಕಟ್ಟುವ ಕುರಿತು ನನಗೆ ಗೊತ್ತಿಲ್ಲ ಎಂದರು.
ಸೋಮಶೇಖರ್ ರೆಡ್ಡಿ ವಿರುದ್ಧ ಕಿಡಿಕಾರಿದ್ದ ರಾಮಲಿಂಗಪ್ಪ!ಸೋಮಶೇಖರ ರೆಡ್ಡಿ ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಗೆಲ್ಲುವುದು ಕಷ್ಟವಿದೆ. ಅದಕ್ಕಾಗಿ ಈ ಬಾರಿ ಲಿಂಗಾಯತ, ಕುರುಬ, ಕಮ್ಮ, ಬಲಿಜ ಸಮಾಜದಿಂದ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡಿದರೆ ಒಳಿತು. ನಾನೂ ಸ್ಪರ್ಧೆಗೆ ರೆಡಿಯಾಗಿರುವೆ. ಕಾರ್ಯಕರ್ತರನ್ನು ರಕ್ಷಿಸಿ, ಕುಟುಂಬ ರಾಜಕೀಯ ನಿಲ್ಲಿಸಿ, ಬಿಜೆಪಿಯನ್ನು ಗೆಲ್ಲಿಸಿ ಎಂದು ಬಿಜೆಪಿ ಮುಖಂಡ ರಾಮಲಿಂಗಪ್ಪ ಗುರುವಾರ ಮನವಿ ಮಾಡಿದ್ದರು. ಕಳೆದ ವರ್ಷ ಕನಕ ಜಯಂತಿಯಂದು ಶಾಸಕ ಸೋಮಶೇಖರ ರೆಡ್ಡಿ ರಾಮಲಿಂಗಪ್ಪನವರಿಂದಲೇ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದಿದ್ದರು. ಆದರೆ, ಜಾತಿ ಆಧಾರದ ಮೇಲೆ ಬುಡಾ ಅಧ್ಯಕ್ಷನಾಗಿದ್ದ ನನ್ನನ್ನು ತೆಗೆಸಿದ್ದರು ಎಂದು ಕಿಡಿಕಾರಿದ್ದರು.