ಆ್ಯಪ್ನಗರ

ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ: ಬಂಗಾರು ಹನುಮಂತು

ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದ ಡಿ.ಮಂಜುನಾಥ(ರಾಘವೇಂದ್ರ) ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದೆ ಟಿಕೆಟ್‌ ಗಿಟ್ಟಿಸಿದ್ದಕ್ಕೆ ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಒಮ್ಮತದ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಚಿತ್ರನಟ ಬಂಗಾರು ಹನುಮಂತು ಹೇಳಿದರು.

Vijaya Karnataka Web 11 Apr 2018, 5:00 am
ಸಂಡೂರು : ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದ ಡಿ.ಮಂಜುನಾಥ(ರಾಘವೇಂದ್ರ) ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದೆ ಟಿಕೆಟ್‌ ಗಿಟ್ಟಿಸಿದ್ದಕ್ಕೆ ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಒಮ್ಮತದ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಚಿತ್ರನಟ ಬಂಗಾರು ಹನುಮಂತು ಹೇಳಿದರು.
Vijaya Karnataka Web bjp rebel candidate field bangaru hanumanthu
ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ: ಬಂಗಾರು ಹನುಮಂತು


ಪಟ್ಟಣದ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.

3 ತಿಂಗಳ ಹಿಂದೆ ಬಿಜೆಪಿಗೆ ಜಿಗಿದ ಡಿ.ಮಂಜುನಾಥರನ್ನು ಜಿಲ್ಲಾ ಮಂತ್ರಿ ಸಂತೋಷ್‌ಲಾಡ್‌, ತಿಂಗಳ ಹಿಂದೆ ಸಂಡೂರಿನಲ್ಲಿ ಡಿಎಂಎಫ್‌ ನಿಧಿ ಹಂಚಿಕೆ ಕಾರ್ಯಕ್ರಮದಲ್ಲಿ ನಮ್ಮ ಗರಡಿಯಲ್ಲಿ ಪಳಗಿದ ಹುಡುಗ, ಚುನಾವಣೆಯಲ್ಲಿ ಯಾರು ಗೆದ್ದರೇನು ಎಂದಿರುವುದು ಮಂಜುನಾಥನಿಗೆ ಬಿಜೆಪಿ ಟಿಕೆಟ್‌ ಸಿಗುವುದು ಲಾಡ್‌ಗೆ ಮೊದಲೇ ತಿಳಿದಿತ್ತು ಎಂಬುದಕ್ಕೆ ಸಾಕ್ಷಿ ಮತ್ತು ಮಂಜುನಾಥ, ಶಾಸಕ ಈ.ತುಕಾರಾಮ ಇಬ್ಬರೂ ಒಂದೇ ಎಂಬಾರ್ಥದಲ್ಲಿ ಮಾತನಾಡಿದ್ದಾರೆ ಎಂದರು.

ಗೆಲ್ಲಿಸುವ ಹುನ್ನಾರ: ಬಿಜೆಪಿ ಪಕ್ಷ ಕಟ್ಟಲು ಶ್ರಮಿಸಿದ ಆಕಾಂಕ್ಷಿಗಳಾದ ತಮ್ಮನ್ನು ಹಾಗೂ ಡಾ.ಟಿ.ಆರ್‌.ಶ್ರೀನಿವಾಸ, ದಿವಾಕರರನ್ನು ಗಣನೆಗೆ ತೆಗೆದುಕೊಳ್ಳದೆ, ವರ್ಷದ ಹಿಂದೆ ನಡೆದ ಪಕ್ಷ ದ ಆಂತರಿಕ ಸಮೀಕ್ಷೆಯನ್ನೂ ಮೀರಿ ಬೇರೊಂದು ಪಕ್ಷ ದಿಂದ ಚುನಾವಣೆ ಸಂದರ್ಭದಲ್ಲಿ ಜಿಗಿದ ಮಂಜುನಾಥನ ಹಿನ್ನೆಲೆ ಗಮನಿಸದೆ ಕಾರ್ತಿಕೇಯ ಘೋರ್ಪಡೆ ಹೇಳಿದರು ಎಂಬ ಒಂದೇ ಕಾರಣಕ್ಕೆ ಟಿಕೆಟ್‌ ಘೋಷಣೆ ಮಾಡಿರುವುದರ ಹಿಂದೆ ಕಾಂಗ್ರೆಸ್‌ನ ಶಾಸಕ ತುಕಾರಾಮರನ್ನು ಗೆಲ್ಲಿಸುವ ಹುನ್ನಾರ ಅಡಗಿದೆ. ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಂಜುನಾಥ ನಾನು ಈ ಬಾರಿ ಸೋತು, ಮುಂದಿನ ಬಾರಿ ಗೆಲ್ಲುವೆ ಎಂದಿರುವುದು ಇದಕ್ಕೆ ಸಾಕ್ಷಿಯಾಗುತ್ತದೆ. ಚುನಾವಣೆಗೂ ಮೊದಲೇ ಸೋಲೊಪ್ಪಿಕೊಳ್ಳುವವರಿಗೆ ಟಿಕೆಟ್‌ ಕೊಡುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಕೂಡ್ಲಿಗಿಯ ನಾಗೇಂದ್ರ, ಹೊಸಪೇಟೆಯ ಆನಂದ್‌ಸಿಂಗ್‌ ಕಾಂಗ್ರೆಸ್‌ ಸೇರಿದಾಗ ಕಾಂಗ್ರೆಸಿನಲ್ಲಿ ಗೆಲ್ಲುವ ಗಂಡುಗಳಿಲ್ಲದ್ದಕ್ಕೆ ಬಿಜೆಪಿಯವರನ್ನು ಕರೆದೊಯ್ದಿದರು ಎಂದು ಇತ್ತೀಚೆಗೆ ಶ್ರೀರಾಮುಲು ಮೂದಲಿಸಿದ್ದರು. ಇದೀಗ ಸಂಡೂರು ಕ್ಷೇತ್ರದ ಬಿಜೆಪಿಯಲ್ಲಿ ದುಡಿದ ಮತ್ತು ಗೆಲ್ಲುವ ಗಂಡುಗಳು ಇದ್ದರೂ ಕಾಂಗ್ರೆಸ್‌ನಿಂದ ಬಂದ ಮಂಜುನಾಥನಿಗೆ ಟಿಕೆಟ್‌ ಕೊಟ್ಟಿದ್ದು ಯಾವ ನ್ಯಾಯ. ಒಂದೆ ಕುಟುಂಬಕ್ಕೆ 3-4 ಬಿಜೆಪಿ ಟಿಕೆಟ್‌ ಸಿಗುವುದಾದರೆ ಉಳಿದ ಎಸ್ಟಿ ಮುಖಂಡರು ಜಿಲ್ಲೆಯಲ್ಲಿ ಬೆಳೆಯಬಾರದೇ ಎಂದು ಪ್ರಶ್ನಿಸಿದರು.

ಏ.11 ರಂದು ಸಭೆ: ಒಮ್ಮತದ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸುವ ಸಲುವಾಗಿ ಏ.11 ರಂದು ಪಟ್ಟಣದಲ್ಲಿ ಬಿಜೆಪಿಯ ಟಿಕೆಟ್‌ ವಂಚಿತರು, ಜಿ.ಪಂ., ತಾ.ಪಂ., ಪುರಸಭೆ ಸದಸ್ಯರು, ತಾಲೂಕು ಬಿಜೆಪಿ ಅಧ್ಯಕ್ಷ ರು ಸೇರಿ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ