ಆ್ಯಪ್ನಗರ

ಯಡಿಯೂರಪ್ಪ ಪ್ರಶ್ನಾತೀತ ನಾಯಕರು, ನಮ್ಮಲ್ಲಿ ಸೂಪರ್‌ ಸಿಎಂ ಕಾನ್ಸೆಪ್ಟ್‌ ಇಲ್ಲ: ಸೋಮಣ್ಣ

ವದಂತಿಗಳನ್ನು ಹಬ್ಬಿಸುವುದರಲ್ಲಿ ಸಿಎಂ ಇಬ್ರಾಹಿಂ ನಿಸ್ಸೀಮರು. ಅವರು ನಸಿಪುಡಿ ಹಾಕುತ್ತಿದ್ದಾಗನಿಂದಲೂ ನೋಡುತ್ತಿದ್ದೇನೆ. ನಸಿಪುಡಿ ನೆತ್ತಿಗೇರಿದಾಗ ಏನಾದರೂ ಮಾತನಾಡುತ್ತಾರೆ ಎಂದು ಸಚಿವ ವಿ ಸೋಮಣ್ಣ ತಿರುಗೇಟು ನೀಡಿದರು.

Vijaya Karnataka Web 25 Feb 2020, 5:21 pm
ಬಳ್ಳಾರಿ: ರಾಜ್ಯದಲ್ಲಿ ಬಿಎಸ್‌ ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಕರ್ನಾಟಕದಲ್ಲಿ ಸೂಪರ್‌ ಸಿಎಂ ಪ್ರಶ್ನೆಯೇ ಇಲ್ಲ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
Vijaya Karnataka Web ಸೋಮಣ್ಣ
ಸೋಮಣ್ಣ


ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ವಿ. ಸೋಮಣ್ಣ ಮಾತನಾಡಿದರು.

ನಾನು 40 ವರ್ಷ ರಾಜಕೀಯದಲ್ಲಿ ಇದ್ದೇನೆ. ಅವರು ರಾಜ್ಯದ ಪ್ರಶ್ನಾತೀತ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹಿಂದಿನಿಂದಲೂ ಯಡಿಯೂರಪ್ಪ ಬಗ್ಗೆ ಭಾರಿ ಜನಪ್ರಿಯತೆ, ಗೌರವ ಇದೆ ಎಂದರು.

ಯಡಿಯೂರಪ್ಪ ಅವರ ಮಗ ಮುನ್ನಲೆಗೆ ಬರುತ್ತಾರೆ ಎಂಬುದು ಸದ್ಯ ಇಲ್ಲ. ಬಿಎಸ್‌ವೈ ಪುತ್ರ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಬೇರೆ ಯಾವ ರೀತಿಯ ಅರ್ಥವನ್ನೂ ಕಲ್ಪಿಸಬೇಕಾಗಿಲ್ಲ ಎಂದರು.

ವದಂತಿಗಳನ್ನು ಹಬ್ಬಿಸುವುದರಲ್ಲಿ ಸಿಎಂ ಇಬ್ರಾಹಿಂ ನಿಸ್ಸೀಮರು. ಅವರು ನಶ್ಯ ಪುಡಿ ಹಾಕುತ್ತಿದ್ದಾಗನಿಂದಲೂ ನೋಡುತ್ತಿದ್ದೇನೆ. ನಶ್ಯ ಪುಡಿ ನೆತ್ತಿಗೇರಿದಾಗ ಏನಾದರೂ ಮಾತನಾಡುತ್ತಾರೆ ಎಂದು ಸೋಮಣ್ಣ ತಿರುಗೇಟು ನೀಡಿದರು.

ಇನ್ನು ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಉತ್ತರಾಧಿಕಾರಿಯೂ ಇಲ್ಲ. ಯಾರೂ ಇಲ್ಲ. ಇಲ್ಲಿ ಪಕ್ಷವೇ ಅಂತಿಮ. ಹೈಕಮಾಂಡ್‌ ನಾಯಕರ ನಿರ್ಧಾರ ಮಾಡಿದಂತೆ ಎಲ್ಲವೂ ನಡೆಯುತ್ತದೆ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ