ಆ್ಯಪ್ನಗರ

ಗುಂಡಿಯಲ್ಲಿ ಬಿದ್ದ ಹೋರಿ ರಕ್ಷಣೆ

ನಗರದ ಕುಮಾರಸ್ವಾಮಿ ದೇವಸ್ಥಾನದ ಮುಖ್ಯರಸ್ತೆ ಬಳಿ ಇರುವ ಕುರುಬರ ಸಂಘದ ಆವರಣದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಅಗೆದಿದ್ದ ಅಂದಾಜು 10 ಅಡಿ ಆಳದ ಬುನಾದಿಯಲ್ಲಿ ಬಿದ್ದ ಹೋರಿಯನ್ನು ಅಗ್ನಿಶಾಮಕದಳ ಸಿಬ್ಬಂದಿ ಭಾನುವಾರ ರಕ್ಷಿಸಿದರು.

Vijaya Karnataka 11 Jun 2018, 5:00 am
ಬಳ್ಳಾರಿ : ನಗರದ ಕುಮಾರಸ್ವಾಮಿ ದೇವಸ್ಥಾನದ ಮುಖ್ಯರಸ್ತೆ ಬಳಿ ಇರುವ ಕುರುಬರ ಸಂಘದ ಆವರಣದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಅಗೆದಿದ್ದ ಅಂದಾಜು 10 ಅಡಿ ಆಳದ ಬುನಾದಿಯಲ್ಲಿ ಬಿದ್ದ ಹೋರಿಯನ್ನು ಅಗ್ನಿಶಾಮಕದಳ ಸಿಬ್ಬಂದಿ ಭಾನುವಾರ ರಕ್ಷಿಸಿದರು.
Vijaya Karnataka Web BLR-BLY10GK8


ವಸತಿ ನಿಲಯ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಿಸಲು ಆಳ ಮತ್ತು ಅಗಲವಾದ ಬುನಾದಿಯನ್ನು ತೋಡಲಾಗಿದೆ. ಮೇವು ಅರಸಿ ಬಂದ ಆ ಹೋರಿಯು ದಿಢೀರ್‌ ಬುನಾದಿ ಗುಂಡಿಯ ಆಳಕ್ಕೆ ಬಿದ್ದಿದೆ. ಕೆಲಕಾಲ ತನ್ನಷ್ಟಕ್ಕೆ ತಾನೇ ಮೇಲೇರಲು ಹರಸಾಹಸ ಪಟ್ಟಿದೆ. ಮೂಕ ಪ್ರಾಣಿಯ ರೋದನೆ ಕಂಡು ಮಮ್ಮಲ ಮರಗಿದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಗುಂಡಿಯ ಆಳದಲ್ಲಿದ್ದ ಹೋರಿಯನ್ನು ಪೈಪ್‌ ಸಹಾಯದೊಂದಿಗೆ ಮೇಲೆತ್ತಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ