ಆ್ಯಪ್ನಗರ

‘ಹಂಪಿ ಉತ್ಸವಕ್ಕೆ ಬಸ್‌ ಸೌಕರ್ಯ’

ಹಂಪಿ ಉತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಬಸ್‌ ಸೌಕರ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾತ್‌ ಮನೋಹರ ಹೇಳಿದರು.

Vijaya Karnataka 23 Feb 2019, 5:00 am
ಹೊಸಪೇಟೆ : ಹಂಪಿ ಉತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಬಸ್‌ ಸೌಕರ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾತ್‌ ಮನೋಹರ ಹೇಳಿದರು.
Vijaya Karnataka Web bus facility for hampi festival
‘ಹಂಪಿ ಉತ್ಸವಕ್ಕೆ ಬಸ್‌ ಸೌಕರ್ಯ’


ನಗರದ ತಾಲೂಕು ಕ್ರೀಡಾಂಗಣದ ಒಳಾಂಗಣ ಸಭಾಂಗಣದಲ್ಲಿ ಶುಕ್ರವಾರ ಹಂಪಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಉತ್ಸವದ ದಿನದಂದು ಹೊಸಪೇಟೆ, ಕಮಲಾಪುರ ಮಾರ್ಗವಾಗಿ ಉಚಿತ ಬಸ್‌ಗಳು ಸಂಚರಿಸಲಿವೆ. ಉತ್ಸವದಲ್ಲಿ ಟಗರಿನ ಮತ್ತು ಹುಂಜದ ಸ್ಪರ್ಧೆ ಇರುತ್ತದೆ. ಗ್ರಾಮೀಣ ಜನರ ಆಸಕ್ತಿಯನ್ನು ಪರಿಗಣಿಸಿ ಈ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಜಯನಗರದ ವೈಭವದ ಒಂಟೆ ಮೆರವಣಿಗೆ ಇರುತ್ತದೆ ಎಂದರು.

ತಾಲೂಕಿನ ಕಮಲಾಪುರದಲ್ಲಿ ಫೆ.23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ಗೋಡೆ ಬರಹ ಚಿತ್ರಕಲಾ ಉತ್ಸವ ಇರುತ್ತದೆ. ಬಳಿಕ ಹಂಪಿಯಲ್ಲಿ ಪಾರಂಪರಿಕ ಸ್ಮಾರಕಗಳ ಚಿತ್ರಣ ಮತ್ತು ಸ್ವಚ್ಛತಾ ಜಾಗೃತಿಯ ಶಿಕ್ಷ ಣ ಕಾರ್ಯಕ್ರಮ ನಡೆಯಲಿದೆ. ಫೆ.27 ರಿಂದ 28 ರವರೆಗೆ ಬೆಳಗ್ಗೆ 10 ಗಂಟೆಗೆ ಹಂಪಿ ಹೇಮಕೂಟದಲ್ಲಿ ಚಿತ್ರಕಲಾ ಶಿಬಿರ. ಫೆ. 26 ರಂದು ಸಂಜೆ 6-30 ಕ್ಕೆ ವಿರೂಪಾಕ್ಷೇಶ್ವರ ದೇವಸ್ಥಾನ ಬಳಿಯ ಪುಷ್ಕರಣೆ ಆವರಣದಲ್ಲಿ ತುಂಗಭದ್ರಾ ಆರತಿ ಮಹೋತ್ಸವ. ಫೆ. 28 ರಿಂದ ಮಾ.6 ರವರೆಗೆ ಬೆಳಗ್ಗೆ 8-30 ರಿಂದ ಸಂಜೆ 5-30 ರವರೆಗೆ ಕಮಲಾಪುರದ ಹೋಟೆಲ್‌ ಮಯೂರ ಭುವನೇಶ್ವರಿ ಆವರಣದಲ್ಲಿ ಹೆಲಿಕಾಪ್ಟರ್‌ ಮೂಲಕ ಹಂಪಿ ಸ್ಮಾರಕಗಳ ವೀಕ್ಷಿಸುವ ಹಂಪಿ ಬೈಸ್ಕೈ ಕಾರ್ಯಕ್ರಮ. ಫೆ. 28 ರಂದು ಬೆಳಗ್ಗೆ 7 ಗಂಟೆಗೆ ಹಂಪಿಯ ಅಕ್ಕ-ತಂಗಿಯರ ಗುಡ್ಡ ಪ್ರದೇಶದಲ್ಲಿ ಪಾರಂಪರಿಕ ನಡಿಗೆ ಇರಲಿದೆ ಎಂದರು.

ನಗರಸಭೆಯ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ, ಉಪವಿಭಾಗಾಧಿಕಾರಿ ಲೋಕೇಶ, ತಹಸೀಲ್ದಾರ್‌ ಎಚ್‌.ವಿಶ್ವನಾಥ, ನಗರಸಭೆ ಆಯಕ್ತ ವಿ.ರಮೇಶ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಮ್ಮ, ಹಂಪಿ ಡಿವೈಎಸ್ಪಿ ಸಿಮಿ ಮರಿಯಂ ಜಾರ್ಜ್‌, ಮುಖಂಡರಾದ ಚಂದ್ರಕಾಂತ ಕಾಮತ್‌, ಧರ್ಮೇಂದ್ರ ಸಿಂಗ್‌, ಎಚ್‌.ಎನ್‌.ಎಫ್‌.ಇಮಾಮಾ ನಿಯಾಜಿ, ಅಶ್ವಿನ್‌ ಕೋತಂಬರಿ, ಡಾ.ಮುನಿವಾಸುದೇವ ರೆಡ್ಡಿ ಇನ್ನಿತರರಿದ್ದರು.

---
ಉಚಿತ ಬಸ್‌ ಸಂಚಾರ ಮಾರ್ಗಸೂಚಿ

ಹಂಪಿ ಉತ್ಸವಕ್ಕೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾರಿಗೆ ಮುಂದಾಗಿದ್ದು, ಉತ್ಸವದ ಸಮಯದಲ್ಲಿ ಹೊಸಪೇಟೆಯಿಂದ ಕಮಲಾಪುರ ಮಾರ್ಗವಾಗಿ ಉಚಿತ ಬಸ್‌ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಪಾಪಿನಾಯಕನ ಹಳ್ಳಿಯಿಂದ 5 ಬಸ್‌ಗಳ ಸಂಚಾರ ಹಾಗೂ ಕಂಪ್ಲಿಯಿಂದ ಉತ್ಸವದ ಸಮಯದಲ್ಲಿ ವಿಶೇಷ ಬಸ್‌ ಸಂಚರಿಸಲಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ