ಹೊಸಪೇಟೆ: ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು 120 ಎಕರೆ ಜಮೀನು ಖರೀದಿ ಮಾಡಿರುವುದು ನಿಜ. ಇದನ್ನು ರೈತರೇ ಉಳುಮೆ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ವಿಷಯ ಕುರಿತು ರಾಜಕೀಯ ಪಿತೂರಿ ನಡೆಸಲಾಗಿದೆ'' ಎಂದ ಅವರು, ''ಹೊಸಪೇಟೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದವರು ನನ್ನ ಬೆಂಬಲಿಗರಲ್ಲ. ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಯಾವ ಪೊಲೀಸ್ ಠಾಣೆಗೂ ಕರೆಮಾಡಿ ಲಾಬಿ ನಡೆಸಿಲ್ಲ. ಪೊಲೀಸರು ಕಾನೂನು ಪ್ರಕಾರ ಕ್ರಮಕೈಗೊಳ್ಳಲಿದ್ದಾರೆ'' ಎಂದು ತಿಳಿಸಿದರು.