ಆ್ಯಪ್ನಗರ

ಹಂಪಿ ಬೈ ಸ್ಕೈಗೆ ಸಂಸದ ಚಾಲನೆ

ತಾಲೂಕಿನ ಕಮಲಾಪುರ ಭುವನೇಶ್ವರಿ ಹೋಟೆಲ್‌ನಲ್ಲಿ ಶುಕ್ರವಾರ ಹಂಪಿ ಬೈ ಸ್ಕೈಗೆ ಪಾರಿವಾಳ ಹಾರಿ ಬಿಡುವ ಮೂಲಕ ಸಂಸದ ವಿ.ಎಸ್.ಉಗ್ರಪ್ಪ ಚಾಲನೆ ನೀಡಿದರು.

Vijaya Karnataka 2 Mar 2019, 12:00 am
ಹೊಸಪೇಟೆ: ತಾಲೂಕಿನ ಕಮಲಾಪುರ ಭುವನೇಶ್ವರಿ ಹೋಟೆಲ್‌ನಲ್ಲಿ ಶುಕ್ರವಾರ ಹಂಪಿ ಬೈ ಸ್ಕೈಗೆ ಪಾರಿವಾಳ ಹಾರಿ ಬಿಡುವ ಮೂಲಕ ಸಂಸದ ವಿ.ಎಸ್.ಉಗ್ರಪ್ಪ ಚಾಲನೆ ನೀಡಿದರು.
Vijaya Karnataka Web BLR-BLR01HPT-03


ಬಳಿಕ ಮಾತನಾಡಿ, ಹಂಪಿಯ ಸೊಬಗನ್ನು ಆಗಸದಿಂದ ಅದರ ಅಂದವನ್ನು ಸವಿಯಲು ಹಂಪಿ ಬೈ ಸ್ಕೈ ಏರ್ಪಡಿಸಲಾಗಿದೆ. ಹಂಪಿಯನ್ನು ನೋಡಲು 100 ದಿನವಾದರೂ ಸಾಲದು. ಆದರೆ, ಹಂಪಿ ಬೈ ಸ್ಕೈನಿಂದ ಹತ್ತು ನಿಮಿಷ ಸೌಂದರ‌್ಯವನ್ನು ನೋಡಬಹುದು ಎಂದರು.

ಆಗಸದಿಂದ ಹಂಪಿಯ ಮಹಾನವಮಿ ದಿಬ್ಬ, ಕಮಲಮಹಲ್, ಆನೆಸಾಲು, ಮಾತಂಹ ಪರ್ವತ, ಅಚ್ಯುತ್ ದೇವಸ್ಥಾನ, ರಾಮಲಕ್ಷ್ಮಣ ದೇವಸ್ಥಾನ, ಕಲ್ಲಿನ ತೇರು, ವಿಜಯವಿಠ್ಠಲ ದೇವಸ್ಥಾನ, ವಿರೂಪಾಕ್ಷೇಶ್ವರ ದೇವಸ್ಥಾನ, ಕಷ್ಣ ದೇವಸ್ಥಾನ, ಬಡವಿ ಲಿಂಗ ಸೇರಿದಂತೆ ಆಗಸದಿಂದ ನೋಡುವುದೇ ಒಂದು ಖುಷಿ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ.ರಾಮಪ್ರಸಾತ್ ಮನೋಹರ್ ಮಾತನಾಡಿ, ಪ್ರವಾಸಿಗರ ಬೇಡಿಕೆಯ ಹಿನ್ನೆಲೆಯಲ್ಲಿ ಹಂಪಿ ಬೈ ಸ್ಕೈ ಹಮ್ಮಿಕೊಳ್ಳಲಾಗಿದೆ. ಇದನ್ನು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಪ್ರವಾಸೋದ್ಯಮ ಇಲಾಖೆ ಏರ್ಪಡಿಸಲಾಗಿದೆ. ಹಂಪಿ ಬೈ ಸ್ಕೈ ಮಾ.6ರವರೆಗೆ ಇರಲಿದೆ. ಒಬ್ಬರಿಗೆ 2,500 ರೂ.ಎಂದರು.

ಉಪವಿಭಾಗಾಧಿಕಾರಿ ಪಿ.ಎನ್.ಲೋಕೇಶ್, ಪ್ರವಾಸೋದ್ಯಮದ ಇಲಾಖೆಯ ಉಪ ನಿರ್ದೇಶಕ ಮೋತಿಲಾಲ್ ಲಮಾಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ತಹಶೀಲ್ದಾರ್ ಎಚ್.ವಿಶ್ವನಾಥ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ