ಆ್ಯಪ್ನಗರ

ಹಂಪಿ ಉತ್ಸವ ಅದ್ಧೂರಿಯಾಗಿ ಆಚರಿಸಿ; ವಾಟಾಳ್‌ ಆಗ್ರಹ

ಹಂಪಿ ಉತ್ಸವನ್ನು ಅದ್ಧೂರಿಯಾಗಿ ಮೂರು ದಿನ ಆಚರಣೆ ಮಾಡಬೇಕು. ಇಲ್ಲದಿದ್ದರೇ ಕರ್ನಾಟಕ ಬಂದ್‌ ಮಾಡಬೇಕಾಗುತ್ತದೆ ಎಂದು ವಾಟಾಳ್‌ ಪಕ್ಷ ದ ವಾಟಾಳ್‌ ನಾಗರಾಜ್‌ ಹೇಳಿದರು.

Vijaya Karnataka 10 Dec 2018, 5:31 pm
ಹೊಸಪೇಟೆ : ಹಂಪಿ ಉತ್ಸವನ್ನು ಅದ್ಧೂರಿಯಾಗಿ ಮೂರು ದಿನ ಆಚರಣೆ ಮಾಡಬೇಕು. ಇಲ್ಲದಿದ್ದರೇ ಕರ್ನಾಟಕ ಬಂದ್‌ ಮಾಡಬೇಕಾಗುತ್ತದೆ ಎಂದು ವಾಟಾಳ್‌ ಪಕ್ಷ ದ ವಾಟಾಳ್‌ ನಾಗರಾಜ್‌ ಹೇಳಿದರು.
Vijaya Karnataka Web celebrate hampi festival vatican demand
ಹಂಪಿ ಉತ್ಸವ ಅದ್ಧೂರಿಯಾಗಿ ಆಚರಿಸಿ; ವಾಟಾಳ್‌ ಆಗ್ರಹ


ತಾಲೂಕಿನ ಹಂಪಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರು ಉತ್ಸವಕ್ಕೆ ಬರ ಸನ್ನಿವೇಶ ಎದುರಾಗುವುದಿಲ್ಲ. ಆದರೆ, ಹಂಪಿ ಉತ್ಸವಕ್ಕೆ ಬರ ಏಕೆ ಅಡ್ಡಿ ಬರುತ್ತಿದೆ? ಕಳೆದ ನಾಲ್ಕು ವರ್ಷಗಳಿಂದ ಬಳ್ಳಾರಿಯಲ್ಲಿ ಬರಗಾಲ ಆವರಿಸಿತ್ತು. ಆದರೆ, ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಜಿಲ್ಲಾಡಳಿತ ಸರಕಾರಕ್ಕೆ ಎರಡು ದಿನ ಸರಳವಾಗಿ ಆಚರಿಸಲಾಗುವುದು ಎಂದು ಪ್ರಸ್ತಾವನೆ ಸಲ್ಲಿಸಿದೆ. ಇದು ಸೂಕ್ತ ನಿರ್ಧಾರವಲ್ಲ. ಇದನ್ನು ವಿರೋಧಿಸಿ ಡಿ.24 ರಂದು ಹಂಪಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಸಿದ ವಾಟಾಳ್‌ ನಾಗರಾಜ್‌, ಹಂಪಿ ಉತ್ಸವ ವಿಜಯನಗರ ಸಾಮ್ರಾಜ್ಯವನ್ನು ನೆನಪಿಸುವಂತದ್ದು. ಅದು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಆದರೆ, ಮುಖ್ಯಮಂತ್ರಿ, ಜಿಲ್ಲಾ ಸಚಿವರು ಹಾಗೂ ಸಂಸದರು ನಾನಾ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಬರ ಇದೆ ಎಂದು ಯಾರಾದರೂ ಮಸಲಾ ದೋಸೆ ತಿನ್ನಲು ಬಿಟ್ಟಿದ್ದಾರೆಯೇ? ಸರಕಾರ ನೆಪ ಹೇಳುವ ಪದ್ದತಿ ಬಿಡಬೇಕು ಎಂದರು.

ತುಂಗಭದ್ರಾ ಜಲಾಶಯದಿಂದ ಜಳ್ಳತನದ ಮೂಲಕ ನೀರು ಪೂರೈಸಲಾಗುತ್ತದೆ ಆದರೆ ರೈತರ ಬೆಳೆಗೆ ನೀರು ಬಿಡುವಲ್ಲಿ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಕೈಗಾರಿಕೆಗಳಿಗೆ ನೀರು ಮಾರಿಕೊಳ್ಳುವವರನ್ನು ಜೈಲುಗಿ ಕಳುಹಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ವಿರೂಪಾಕ್ಷೇಶ್ವರ ದೇವಸ್ಥಾನ ಮುಂದೆ ತೆಂಗಿನಕಾಯಿ ಹೊಡೆದು ಹಂಪಿ ಉತ್ಸವ ಅದ್ದೂರಿಯಾಗಿ ಆಚರಿಸಬೇಕು ಎಂದು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ವಿರೂಪಾಕ್ಷೇಶ್ವರ ದರ್ಶನ ಪಡೆದರು. ಇದೇ ವೇಳೆಯಲ್ಲಿ ವಿದೇಶಿ ಮಹಿಳೆಗೆ ಕನ್ನಡ ಕಲಿಸಲು ಯತ್ನಿಸಿದರು.

ಕರ್ನಾಟಕ ರಕ್ಷ ಣಾ ವೇದಿಕೆಯ ಯುವಶಕ್ತಿಯ ರಾಜ್ಯ ಘಟಕದ ಅಧ್ಯಕ್ಷ ವಿಜಯಕುಮಾರ, ಮುಖಂಡರಾದ ಸೈಯದ್‌ ಜಿಲಾನ್‌ ಪಾಷಾ, ಸೋಮಶೇಖರ್‌, ಪಾರ್ಥಸಾರಥಿ, ಜಿ.ಎಂ.ರಾಮು, ಈಶ್ವರ್‌, ಮಾಣಿಕ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ