ಆ್ಯಪ್ನಗರ

ಜಿ.ಪಂ.ಸಿಇಒ ಭೇಟಿ; ಕಡತ ಪರಿಶೀಲನೆ

ತಾಲೂಕಿನ ತೋರಣಗಲ್ಲು ಹೋಬಳಿಯ ವಿಠಲಾಪುರ ಮತ್ತು ಅಂತಾಪುರ ಗ್ರಾ.ಪಂ.ಗಳಿಗೆ ಜಿ.ಪಂ.ಸಿಇಒ ಡಾ.ಕೆ.ವಿ.ರಾಜೇಂದ್ರ, ಯೋಜನಾ ನಿರ್ದೇಶಕ ಚಂದ್ರಶೇಖರ್‌ಗುಡಿ ಸೋಮವಾರ ದಢೀರ್‌ ಭೇಟಿ ನೀಡಿದರು.

Vijaya Karnataka 5 Jun 2018, 5:00 am
ಸಂಡೂರು : ತಾಲೂಕಿನ ತೋರಣಗಲ್ಲು ಹೋಬಳಿಯ ವಿಠಲಾಪುರ ಮತ್ತು ಅಂತಾಪುರ ಗ್ರಾ.ಪಂ.ಗಳಿಗೆ ಜಿ.ಪಂ.ಸಿಇಒ ಡಾ.ಕೆ.ವಿ.ರಾಜೇಂದ್ರ, ಯೋಜನಾ ನಿರ್ದೇಶಕ ಚಂದ್ರಶೇಖರ್‌ಗುಡಿ ಸೋಮವಾರ ದಢೀರ್‌ ಭೇಟಿ ನೀಡಿದರು.
Vijaya Karnataka Web ceo visit file verification
ಜಿ.ಪಂ.ಸಿಇಒ ಭೇಟಿ; ಕಡತ ಪರಿಶೀಲನೆ


ಜಿ.ಪಂ.ಸಿಇಒ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, 2011-12 ರ ಬೇಸ್‌ ಲೈನ್‌ ಸರ್ವೆ ಪ್ರಕಾರ ತಾಲೂಕಿನಲ್ಲಿ 4,265 ಕುಟುಂಬಗಳು ಶೌಚಾಲಯ ಹೊಂದಬೇಕಿದೆ.

ಈ ಪೈಕಿ ವಿಠಲಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ 501, ಅಂತಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ 400 ಕುಟುಂಬಗಳು ಶೌಚಾಲಯಗಳನ್ನು ಪೂರ್ಣಗೊಳಿಸಿದಲ್ಲಿ ಬಯಲು ಶೌಚ ಮುಕ್ತ ಗ್ರಾ.ಪಂ.ಗಳಾಗಲು ಸಾದ್ಯವಿದೆ. ಜೂನ್‌ 20 ರೊಳಗೆ ಗ್ರಾ.ಪಂ.ಗಳು ಬಯಲು ಶೌಚ ಮುಕ್ತವಾದಲ್ಲಿ ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮದಿಂದ ಗ್ರಾಮೀಣ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ತಲಾ 25 ಲಕ್ಷ ರೂ. ಜಿಲ್ಲಾ ಖನಿಜ ನಿಧಿಯಿಂದ ತಲಾ 25 ಲಕ್ಷ ರೂ. ಪ್ರತ್ಯೇಕ ಅನುದಾನ ನೀಡಲಾಗುವುದು ಎಂದರು.

ವಿಠಲಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಶುದ್ಧ ಕುಡಿವ ನೀರಿನ ಘಟಕದಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ಶುದ್ಧ ಘಟಕಕ್ಕೆ ಭೇಟಿ ನೀಡಿದ ಸಿಇಒ ನೀರು ಸೇವಿಸಿ, ನೀರಿನ ಪರಿಶುದ್ಧತೆ ಮತ್ತು ಫೊ್ಲೕರೈಡ್‌ ಅಂಶವಿರುವ ಬಗ್ಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಿ ವರದಿ ಪಡೆದು ಜಿ.ಪಂ.ಗೆ ಸಲ್ಲಿಕೆ ಮಾಡುವಂತೆ ತಾ.ಪಂ.ಇಒ ಸತೀಶರೆಡ್ಡಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಸೌಭಾಗ್ಯ ತಿರುಮಲ, ತಾ.ಪಂ.ಸದಸ್ಯ ಶಂಕರಪ್ಪ, ತಾ.ಪಂ.ಎಡಿ(ನರೇಗಾ) ಎಂ.ಬಸವರಾಜ, ಸ್ವಚ್ಛ ಭಾರತ ಮಿಷನ್‌ ತಾಲೂಕು ಸಂಯೋಜಕ ಶಶಿಧರ್‌, ಅಂತಾಪುರ ಗ್ರಾ.ಪಂ.ಅಧ್ಯಕ್ಷ ಅಂಜೀನಪ್ಪ, ಪಿಡಿಒ ಗುರುಪ್ರಸಾದ್‌, ವಿಠಲಾಪುರ ಗ್ರಾ.ಪಂ.ಅಧ್ಯಕ್ಷ ಬಸವರಾಜ, ಗ್ರಾ.ಪಂ.ಸದಸ್ಯರು, ಗುತ್ತಿಗೆದಾರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ