ಆ್ಯಪ್ನಗರ

ಆನಂದ್‌ ಸಿಂಗ್‌ ಖಾತೆ ಮತ್ತೆ ಬದಲಾವಣೆ? ಬಳ್ಳಾರಿಯಲ್ಲಿ ಏನು ಹೇಳಿದರು ಸಿಂಗ್‌?

​ ಸಚಿವ ಆನಂದ್ ಸಿಂಗ್ ಖಾತೆ ಬದಲಾವಣೆ ಸುದ್ದಿ ಹರಿದಾಡುತ್ತಿರುವ ಮಧ್ಯೆ, ಶಾಸಕ ರಾಜೂಗೌಡ ಹಾಗೂ ಆನಂದ್ ಸಿಂಗ್ ಭೇಟಿ ಭಾರೀ ಕುತೂಹಲ ಕೆರಳಿಸಿದೆ. ಕಾಮಗಾರಿ ಪರಿಶೀಲನೆ ಸ್ಥಳದಿಂದ ಶಾಸಕರ ಕಚೇರಿಗೆ ಆನಂದ್ ಸಿಂಗ್, ಶಾಸಕ ರಾಜೂಗೌಡ ತೆರಳಿದ್ದಾರೆ. ಚರ್ಚೆ ನಡೆಸಿದ್ದಾರೆ. ಈ ವಿಚಾರ ಈಗ ಕುತೂಹಲ ಕೆರಳಿಸಿದೆ.

Vijaya Karnataka Web 25 Jan 2021, 12:57 pm
ಬಳ್ಳಾರಿ: ಖಾತೆ ಬದಲಾವಣೆ ಆಗಲಿದೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ. ತಾಂತ್ರಿಕ ಒತ್ತಡ ಮುಖ್ಯಮಂತ್ರಿ ಅವರಿಗೆ ಇರಬಹುದು. ಆದರೆ ಅವರು ನನ್ನ ಬೇಡಿಕೆಗಳನ್ನು ಅವರು ಈಡೇರಿಸಿದ್ದಾರೆ. ನನ್ನನ್ನು ಶಾಸಕನಾಗಿರಿಸಿ ಸಾಕು ಎಂದಿದ್ದೇನೆ, ದೊಡ್ಡ ಹುದ್ದೆ ನೀಡಿ ಪುನಃ ಸಣ್ಣ ಖಾತೆ ನೀಡಿರುವುದಕ್ಕೆ ನನ್ನ ಕಾರ್ಯವೈಖರಿ ಬಗ್ಗೆ ಇನ್ನೊಬ್ಬರಿಗೆ ಉತ್ತರಿಸಬೇಕಿದೆ ಅದಕ್ಕೆ ನನ್ನ ಶಾಸಕನಾಗಿಸಿ ಎಂದು ಸಿಎಂ ಬಳಿ ಮನವಿಯನ್ನು ಸಲ್ಲಿಸಿದ್ದೇನೆ ಎಂದರು.
Vijaya Karnataka Web Anand singh


ಜ. 26 ಬರಲು ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗಳ ಆದೇಶ ಪಾಲಿಸುತ್ತೇನೆ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಬ್ಯೂಸಿಯಾಗಿದ್ದರಿಂದ, ನಾಡಿದ್ದು ಸಿಎಂ ಭೇಟಿಯಾಗುತ್ತೇನೆ ಎಂದು ತಿಳಿಸಿದರು. ಸಚಿವ ಆನಂದ್ಸಿಂಗ್ರಿಂದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಹಿಂಪಡೆಯುವ ಬಗ್ಗೆ ಯೋಚಿಸಿದ್ದಾರೆ. ಹಾಗೇ ಆನಂದ್ ಸಿಂಗ್ಗೆ ಹಜ್, ವಕ್ಫ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲು ನಿರ್ಧರಿಸಿದ್ದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಸಂಜೆ ಅಧಿಕೃತವಾಗಿ ಆದೇಶ ಹೊರಬೀಳಲಿದೆ. ಈ ಸಂಬಂಧ ಆನಂದ್‌ ಸಿಂಗ್‌ ಮುನಿಸುಗೊಂಡಿದ್ದಾರೆ.

ಶಾಸಕ ರಾಜುಗೌಡ ಭೇಟಿ!
ಸಚಿವ ಆನಂದ್ ಸಿಂಗ್ ಖಾತೆ ಬದಲಾವಣೆ ಸುದ್ದಿ ಹರಿದಾಡುತ್ತಿರುವ ಮಧ್ಯೆ, ಶಾಸಕ ರಾಜೂಗೌಡ ಹಾಗೂ ಆನಂದ್ ಸಿಂಗ್ ಭೇಟಿ ಭಾರೀ ಕುತೂಹಲ ಕೆರಳಿಸಿದೆ. ಕಾಮಗಾರಿ ಪರಿಶೀಲನೆ ಸ್ಥಳದಿಂದ ಶಾಸಕರ ಕಚೇರಿಗೆ ಆನಂದ್ ಸಿಂಗ್, ಶಾಸಕ ರಾಜೂಗೌಡ ತೆರಳಿದ್ದಾರೆ. ಚರ್ಚೆ ನಡೆಸಿದ್ದಾರೆ.

ಗಣಿ ಜಿಲ್ಲೆ ಬಳ್ಳಾರಿಗೆ ಒಲಿದ 'ಪ್ರವಾಸೋದ್ಯಮ'..! ಹಂಪಿ ಅಭಿವೃದ್ಧಿಗೆ ಸಿಗುತ್ತಾ ಹೆಚ್ಚಿನ ಮಾನ್ಯತೆ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ