ಆ್ಯಪ್ನಗರ

‘ದೇವದಾಸಿಯರಿಗೆ ಸ್ವಾವಲಂಬನೆ ಬದಕು ಕಲ್ಪಿಸಿ’

ದೇವದಾಸಿಯರನ್ನು ಆರ್ಥಿಕ ಮುಖ್ಯವಾಹಿನಿಯಲ್ಲಿ ಗುರುತಿಸುವ ಉದ್ದೇಶ ಫಲಕಾರಿಯಾಗಬೇಕಿದೆ ಎಂದು ದೇವದಾಸಿ ವಿಮೋಚನೆ ಸಂಘದ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಅಭಿಪ್ರಾಯಪಟ್ಟರು.

Vijaya Karnataka 14 Dec 2018, 6:26 pm
ಹಗರಿಬೊಮ್ಮನಹಳ್ಳಿ : ದೇವದಾಸಿಯರನ್ನು ಆರ್ಥಿಕ ಮುಖ್ಯವಾಹಿನಿಯಲ್ಲಿ ಗುರುತಿಸುವ ಉದ್ದೇಶ ಫಲಕಾರಿಯಾಗಬೇಕಿದೆ ಎಂದು ದೇವದಾಸಿ ವಿಮೋಚನೆ ಸಂಘದ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಅಭಿಪ್ರಾಯಪಟ್ಟರು.
Vijaya Karnataka Web change self reliance to goddesses
‘ದೇವದಾಸಿಯರಿಗೆ ಸ್ವಾವಲಂಬನೆ ಬದಕು ಕಲ್ಪಿಸಿ’


ಪಟ್ಟಣದಲ್ಲಿ ದೇವದಾಸಿ ಸಹಕಾರಿ ಸಂಘ ಉದ್ಘಾಟಿಸಿ ಗುರುವಾರ ಮಾತನಾಡಿದರು. ದೇವದಾಸಿಯರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಬೇಕಿದೆ. ಆರ್ಥಿಕ ಪ್ರಗತಿಯಿಂದ ದೇವದಾಸಿಯರ ಶೋಷಣೆಗೆ ಮುಕ್ತಿ ನೀಡಲು ಸಾಧ್ಯ. ಪ್ರಮುಖವಾಗಿ ದೇವದಾಸಿಯರಿಗೆ ಸಕಾಲದಲ್ಲಿ ಸೂಕ್ತ ಸಾಲಸೌಲಭ್ಯ ಕಲ್ಪಿಸುವ ಮೂಲಕ ಮೀಟರ್‌ ಬಡ್ಡಿ ಹೊರೆ ತಪ್ಪಿಸುವ ಉದ್ದೇಶ ಸಹಕಾರಿ ಸಂಘಕ್ಕಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಶೋಷಣೆಯ ಸವಾಲುಗಳಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕಿದೆ, ಈ ನಿಟ್ಟಿನಲ್ಲಿ ರಾಜ್ಯದಲ್ಲೆ ಆರಂಭವಾದ ಮೊದಲ ಸಹಕಾರಿ ಸಂಘ ಪೂರಕ ಯೋಜನೆ ರೂಪಿಸಬೇಕಿದೆ ಎಂದರು.

ಸಂಘದ ರಾಜ್ಯ ಗೌರವ ಅಧ್ಯಕ್ಷ ಯು.ಬಸವರಾಜ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷ ್ಯದಿಂದಾಗಿ ದೇವದಾಸಿಯರು ಮತ್ತು ಅವರ ಮಕ್ಕಳ ಶೋಷಣೆ ನಿರಂತರವಾಗಿ ಮುಂದುವರಿದಿದೆ. ದೇವದಾಸಿಯರ ಆರ್ಥಿ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸರಕಾರ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಜಾಗೃತಗೊಂಡ ಸಂಘ ಸಮಸ್ಯೆಗೆ ಸ್ವಂತ ನೆಲೆಯಲ್ಲೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸುತ್ತಿರುವುದು ಸ್ವಾಗತಾರ್ಹ ಎಂದರು. ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್‌.ಎಸ್‌.ಬಸವರಾಜ, ಕಾರ್ಯದರ್ಶಿ ಸತ್ಯಬಾಬು, ಪ್ರಾಂತರೈತ ಸಂಘದ ವಿ.ಎಸ್‌.ಶಿವಶಂಕರ, ಹಮಾಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ತಿಪ್ಪಯ್ಯ, ರೈತಸಂಘದ ಗಾಳಿ ಬಸವರಾಜ, ಸಂಘದ ಅಧ್ಯಕ್ಷೆ ಮೈಲಮ್ಮ, ಪ್ರಧಾನ ಕಾರ್ಯದರ್ಶಿ ಚಾಂದ್‌ಭಿ. ಸಂಘದ ತಟ್ನೆಮ್ಮ, ಅಂಜಿನಮ್ಮ, ಜಿ.ಆರ್‌.ಮಲ್ಲಮ್ಮ, ಬಿ.ಜ್ಯೋತಿ, ಬರಹಗಾರರಾದ ಹುರುಕಡ್ಲಿ ಶಿವಕುಮಾರ್‌, ಮೇಟಿಕೊಟ್ರಪ್ಪ ಇತರರಿದ್ದರು. ಸಿಐಟಿಯುನ ಎಸ್‌.ಜಗನ್ನಾಥ್‌, ಮಹೇಶ್ವರ, ಜಿ.ಆರ್‌.ಮಲ್ಲಮ್ಮ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ