ಆ್ಯಪ್ನಗರ

ಮಕ್ಕಳ ಸಹಾಯವಾಣಿ ಸಲಹಾ ಸಮಿತಿ ಸಭೆ

ಪಟ್ಟಣದ ತಹಸಿಲ್‌ ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್‌ ಎಲ್‌.ಕೃಷ್ಣಮೂರ್ತಿ ಅಧ್ಯಕ್ಷ ತೆಯಲ್ಲಿ ಮಕ್ಕಳ ಸಹಾಯವಾಣಿ ಕುರಿತ ಸಲಹಾ ಸಮಿತಿ ಸಭೆ ಶನಿವಾರ ನಡೆಯಿತು.

Vijaya Karnataka 16 Sep 2018, 5:00 am
ಕೂಡ್ಲಿಗಿ : ಪಟ್ಟಣದ ತಹಸಿಲ್‌ ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್‌ ಎಲ್‌.ಕೃಷ್ಣಮೂರ್ತಿ ಅಧ್ಯಕ್ಷ ತೆಯಲ್ಲಿ ಮಕ್ಕಳ ಸಹಾಯವಾಣಿ ಕುರಿತ ಸಲಹಾ ಸಮಿತಿ ಸಭೆ ಶನಿವಾರ ನಡೆಯಿತು.
Vijaya Karnataka Web BLR-BLY15KDL-2


ಮಕ್ಕಳ ಸಹಾಯವಾಣಿಯ ಸಂಯೋಜಕ ರುದ್ರಪ್ಪ ಮಾತನಾಡಿ, ಮಕ್ಕಳ ಕಾನೂನು ಹಾಗೂ ಇತರ ಪೋಷಣೆ, ಸಂರಕ್ಷ ಣೆ ಕುರಿತಂತೆ ಸಮಿತಿಯ ಮಾರ್ಗದರ್ಶನದಂತೆ ಈಗಾಗಲೇ ತಾಲೂಕಿನಲ್ಲಿ ಕೆಲಸ ಮಾಡಲಾಗುತ್ತಿದ್ದು, ಕೆಲವು ಪ್ರಕರಣಗಳು ಪತ್ತೆಯಾಗಿದ್ದು, ಈ ಬಗ್ಗೆ ಸಮಿತಿಯ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ನಂತರ ನಡೆದ ಚರ್ಚೆಯಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸುವುದು, ಪೋಷಣೆ ಮತ್ತು ರಕ್ಷ ಣೆ ಅವಶ್ಯಕತೆ ಇರುವ, ಅಂದರೆ ಅತ್ಯಾಚಾರಕ್ಕೆ ಒಳಗಾದ ಮಗು, ಬಾಲಕಾರ್ಮಿಕ ಮಗು, ಭಿಕ್ಷಾಟನೆ ಮಾಡುವ ಮಕ್ಕಳು, ವಸತಿ ನಿಲಯದ ಅವಶ್ಯಕತೆ ಇರುವ ಮಕ್ಕಳ ಬಗ್ಗೆ ಸಮಿತಿ ಸದಸ್ಯರು ನಾನಾ ಚರ್ಚೆ ನಡೆಸಿದರು. ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿಯ ಲೋಗೊ-1,098 ಮತ್ತು ಗೋಡೆ ಬರಹ ಬರೆಸುವ ಕುರಿತು ರಾಜ್ಯ ಮಕ್ಕಳ ಸಹಾಯವಾಣಿ ಸಲಹಾ ಸಮಿತಿಯ ಸಭೆಯ ನಿರ್ಧಾರದ ಬಗ್ಗೆ ಚರ್ಚಿಸಲಾಯಿತು. ಆಸ್ಪತ್ರೆಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಸಹಾಯವಾಣಿ ಬಗ್ಗೆ ಗೋಡೆ ಬರಹ ಬರೆಸಲು ನಿರ್ಧರಿಸಲಾಯಿತು. ಮಗುವಿನ ರಕ್ಷ ಣೆಯಲ್ಲಿ ಮಕ್ಕಳ ಸಹಾಯವಾಣಿಯ ಗಮನಕ್ಕೆ ಬಂದಾಗ ಸಂಬಂಧಿಸಿದ ಇಲಾಖೆಗಳು ಯಾವ ರೀತಿಯಲ್ಲಿ ಸಹಕಾರ ನೀಡಬೇಕು ಮತ್ತು ಪಡೆಯಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಲಾಯಿತು. ಪಟ್ಟಣ ಪಂಚಾಯಿತಿ ಕರ್ಮಚಾರಿಗಳು ಹಾಗೂ ಮೇಲ್ವಿಚಾರಕರಿಗೆ ಮಕ್ಕಳ ಸಹಾಯವಾಣಿ ಕುರಿತು ಒಂದು ದಿನದ ಕಾರ್ಯಾಗಾರ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಧ್ಯಕ್ಷ ತೆ ವಹಿಸಿದ್ದ ತಹಸೀಲ್ದಾರ್‌ ಎಲ್‌.ಕೃಷ್ಣಮೂರ್ತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಣಿಕ್ಯಾಚಾರ್‌ ಮಕ್ಕಳ ಸಹಾಯವಾಣಿ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಪಿಎಸ್ಸೈ ಹಾಲೇಶ್‌ ಪೊಲೀಸ್‌ ಇಲಾಖೆಯಿಂದ ಸಿಗುವ ನೆರವು ಮತ್ತು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಸಂಜೀವಪ್ಪ, ಎರ್ರಿಸ್ವಾಮಿ, ಆರ್‌.ಜಿ.ಮಹಾದೇವಿ, ಬಸವರಾಜ, ಡಾನ್‌ ಬೋಸ್ಕೊ ಸಂಸ್ಥೆಯ ಸಂಯೋಜಕ ಗೋಣಿ ಬಸವರಾಜ, ಬಿಸಿಎಂ ಇಲಾಖೆ ಅಧಿಕಾರಿ ಪಂಪಾಪತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್‌.ಕೆ.ಹಿರೇಮಠ, ಆರೋಗ್ಯ ಇಲಾಖೆಯ ಜಗದೀಶ್‌ನಾಯ್ಕ್‌ ಹಾಗೂ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ