ಕಂಪ್ಲಿ; ಪಟ್ಟಣದಲ್ಲಿ ವಲಯ ಸಿಐಟಿಯುನಿಂದ, ಜಂಟಿ ಕೇಂದ್ರ ಕಾರ್ಮಿಕ ಸಂಘಟನೆಗಳ ಸಭೆ ಬುಧವಾರ ನಡೆಯಿತು.
ಸಿಪಿಐ(ಎಂ) ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್.ಎಸ್.ಬಸವರಾಜ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನತೆಯ ಹಿತಾಸಕ್ತಿ ಮರೆತು ಕೈಗಾರಿಕೋದ್ಯಮಿಗಳ, ಪ್ರಭಾವಿಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಜಿಲ್ಲಾ ಅಂಗನವಾಡಿ ಕಾರ್ಯಕರ್ತೆರ ಸಹಾಯಕಿಯರ ಫೆಡರೇಶನ್ ಅಧ್ಯಕ್ಷೆ ಕೆ.ನಾಗರತ್ನಮ್ಮ ಮಾತನಾಡಿ, ಇತ್ತೀಚಿನ ದಿನದಲ್ಲಿ ದುಡಿಮೆ ಹೆಚ್ಚು, ಕೂಲಿ ಕಡಿಮೆ ಎನ್ನುವಂತಾಗಿದೆ. ಸರಕಾರಗಳು ಗುತ್ತಿಗೆ ಆಧರಿತ ಕೆಲಸದ ಪದ್ಧತಿ ಬಿಟ್ಟು ಕಾಯಂ ಕೆಲಸದ ಪದ್ಧತಿ ಜಾರಿಗೆ ತರಬೇಕು ಎಂದರು. ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಂಡಿ ಬಸವರಾಜ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ದುರಾಡಳಿತ ಮತ್ತು ಜನವಿರೋಧಿ ನೀತಿ ವಿರೋಧಿಸಿ ಸೆ.2 ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಂಡಿದೆ ಎಂದರು. ಸಿಐಟಿಯು ಕಂಪ್ಲಿ ಘಟಕ ಅಧ್ಯಕ್ಷ ಡಿ.ಮುನಿಸ್ವಾಮಿ ಅಧ್ಯಕ್ಷ ತೆವಹಿಸಿದ್ದರು. ಪ್ರಮುಖರಾದ ನ್ಯಾಮದ್ಸಾಬ್, ಎ.ರೇಣುಕಪ್ಪ, ಮೌನುದ್ದೀನ್ ಚೌದ್ರಿ, ಗ್ರಾ.ಪಂ.ನೌಕರರಾದ ಎಚ್.ಹುಲುಗಪ್ಪ, ಕಟ್ಟಡ ಕಾರ್ಮಿಕ ಸಂಘದ ಎಲ್.ಹೊನ್ನೂರ್ಸಾಬ್, ರಾಜಭಕ್ಷಿ, ಶ್ರೀನಿವಾಸ, ಆಟೋ ಚಾಲಕ ಅಧ್ಯಕ್ಷ ಟಿ.ಮನ್ಸೂರ್ ಇದ್ದರು.