ಆ್ಯಪ್ನಗರ

'ಇದು ಪಕ್ಷ ನಿಷ್ಠರು ವರ್ಸಸ್‌ ಪಕ್ಷ ದ್ರೋಹಿಗಳ ನಡುವಣ ಚುನಾವಣಾ ಸಮರ': ಉಗ್ರಪ್ಪ ಬಣ್ಣನೆ

ವಿಜಯನಗರ ಹೊಸ ಜಿಲ್ಲೆ ರಚನೆ ವಿಚಾರವನ್ನು ಮೂರು ಬಾರಿ ಶಾಸಕರಾಗಿದ್ದಾಗ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಆನಂದ್ ಸಿಂಗ್‌ ಮಾತನಾಡಿರಲಿಲ್ಲ. ಈಗ ಚುನಾವಣೆಯ ಸ್ಟಂಟ್‌ಗೋಸ್ಕರ ಮಾತನಾಡುತ್ತಿದ್ದಾರೆ ಎಂದು ಉಗ್ರಪ್ಪ ಕಿಡಿಕಾರಿದರು.

Vijaya Karnataka 18 Nov 2019, 5:55 pm
ಬಳ್ಳಾರಿ: ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪಕ್ಷ ಒಡೆಯುವ ಪ್ರವೃತ್ತಿಯಿದೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಟೀಕಿಸಿದ್ದಾರೆ. ಬಳ್ಳಾರಿಯ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಉಗ್ರಪ್ಪ, ಹುಬ್ಬಳ್ಳಿಯಲ್ಲಿ ಬಿಎಸ್‌ವೈ ಆಡಿದ ಮಾತು ರೆಕಾರ್ಡ್‌ ಮಾಡಿದವರ ಹೆಸರು ಬಹಿರಂಗವಾಗಲಿ ಎಂದು ಆಗ್ರಹಿಸಿದರು.
Vijaya Karnataka Web congress leader ugrappa takes on bjp
'ಇದು ಪಕ್ಷ ನಿಷ್ಠರು ವರ್ಸಸ್‌ ಪಕ್ಷ ದ್ರೋಹಿಗಳ ನಡುವಣ ಚುನಾವಣಾ ಸಮರ': ಉಗ್ರಪ್ಪ ಬಣ್ಣನೆ


ಅನರ್ಹ ಎಂಟಿಬಿ ನಾಗರಾಜ್ ಗೆದ್ದರೆ 24 ಗಂಟೆಯಲ್ಲೇ ಸಚಿವ ಸ್ಥಾನ! ಹೊಸಕೋಟೆಯಲ್ಲಿ ಯಡಿಯೂರಪ್ಪ ಆಫರ್..!

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಪತನವಾಗಲಿದೆ ಎಂಬ ಕಾರಣಕ್ಕೆ ಆನಂದ್‌ ಸಿಂಗ್‌ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಲು ಬಿಜೆಪಿಯಲ್ಲಿ ಸಂಘರ್ಷವಿದೆ. ವಿಜಯನಗರ ಹೊಸ ಜಿಲ್ಲೆ ರಚನೆ ವಿಚಾರವನ್ನು ಮೂರು ಬಾರಿ ಶಾಸಕರಾಗಿದ್ದಾಗ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಆನಂದ್ ಸಿಂಗ್‌ ಮಾತನಾಡಿರಲಿಲ್ಲ. ಈಗ ಚುನಾವಣೆಯ ಸ್ಟಂಟ್‌ಗೋಸ್ಕರ ಮಾತನಾಡುತ್ತಿದ್ದಾರೆ ಎಂದು ಉಗ್ರಪ್ಪ ಕಿಡಿಕಾರಿದರು.

ಬಿಸಿ ಪಾಟೀಲ್‌ಗೆ ಬಿಸಿ ಮುಟ್ಟಿಸಿದ ಸ್ವಾಮೀಜಿ! ಜೆಡಿಎಸ್ ತಂತ್ರಕ್ಕೆ ಬೆದರಿ ಶ್ರೀಗಳ ಸಂಧಾನಕ್ಕೆ ಸಿಎಂ ಪುತ್ರ ದೌಡು!

ಈ ಹಿಂದೆ ರೈತ ವಿರೋಧಿಯೆಂದು ಟೀಕಿಸಿದ್ದ ಬಿ.ಶ್ರೀರಾಮುಲು ಈಗ ಅವರ ಮತ ಕೇಳುತ್ತಾರೆ. ಡಿಸಿಎಂ, ಸಿಎಂ ಆಗಬೇಕೆಂಬ ಮಹತ್ವಕಾಂಕ್ಷೆ ಹೊಂದಿರುವ ಬಿ.ಶ್ರೀರಾಮುಲು, ಮುತ್ಸದ್ದಿತನ ಮೆರೆಯಬೇಕು ಎಂದು ಉಗ್ರಪ್ಪ ಕುಟುಕಿದರು. ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ ಬದ್ಧತೆಯಿರುವ ರಾಜಕಾರಣಿ. ಅನೇಕ ದಶಕಗಳಿಂದ ರಾಜಕೀಯದಲ್ಲಿದ್ದಾರೆ ಎಂದು ಉಗ್ರಪ್ಪ ಹೊಗಳಿದರು. ಈ ಚುನಾವಣೆ ಪಕ್ಷ ನಿಷ್ಠರು ವರ್ಸಸ್‌ ಪಕ್ಷ ದ್ರೋಹಿಗಳ ಸ್ಪರ್ಧೆ ಎಂದು ಉಗ್ರಪ್ಪ ಬಣ್ಣಿಸಿದರು.

ಸರಕಾರದ ಭವಿಷ್ಯ ಕಾದು ನೋಡಿ : ಕೋಡಿಹಳ್ಳಿ ಶ್ರೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ