ಆ್ಯಪ್ನಗರ

ಇದು ಪಕ್ಷ ನಿಷ್ಠರು V/S ಪಕ್ಷ ದ್ರೋಹಿಗಳ ನಡುವಣ ಉಪ ಚುನಾವಣಾ 'ಸಮರ': ಉಗ್ರಪ್ಪ

'ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ದೊರೆತಿರಬಹುದು. ಆದರೆ, ಜನತಾ ನ್ಯಾಯಾಲಯದಲ್ಲಿ ಎಲ್ಲ ಅನರ್ಹ ಶಾಸಕರಿಗೆ ಸೋಲು ಖಚಿತ' - ವಿ. ಎಸ್. ಉಗ್ರಪ್ಪ

Vijaya Karnataka 13 Nov 2019, 5:45 pm
ಬಳ್ಳಾರಿ: ಮುಂದಿನ ತಿಂಗಳು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆ, ಪಕ್ಷನಿಷ್ಠರು, ಪಕ್ಷದ್ರೋಹಿಗಳು, ಅವಕಾಶವಾದಿಗಳು ಹಾಗೂ ಜನಪರ ಕಾಳಜಿ ಇರುವವರ ಮಧ್ಯೆ ನಡೆಯುವ ಸಂಘರ್ಷ ಎಂದು ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ ಬಣ್ಣಿಸಿದ್ದಾರೆ.
Vijaya Karnataka Web congress leader vs ugrappa takes on disqualified mlas
ಇದು ಪಕ್ಷ ನಿಷ್ಠರು V/S ಪಕ್ಷ ದ್ರೋಹಿಗಳ ನಡುವಣ ಉಪ ಚುನಾವಣಾ 'ಸಮರ': ಉಗ್ರಪ್ಪ


ಸುಪ್ರೀಂ ಕೋರ್ಟ್‌ನಿಂದಲೂ 'ಅನರ್ಹ'ರೆನಿಸಿಕೊಂಡ 17 ಅನರ್ಹ ಶಾಸಕರ ಪರಿಚಯ

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, 'ಈ ಉಪಚುನಾವಣೆ ಅನಗತ್ಯವಾಗಿದೆ. ಆದರೆ, ಜನಾದೇಶಕ್ಕೆ ದ್ರೋಹಮಾಡಿದ್ದ ಕೆಲವು ಶಾಸಕರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಗೆ ಕಾರಣವಾಗಿರುವುದು ಸಂವಿಧಾನ ಬಾಹಿರ. ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ದೊರೆತಿರಬಹುದು. ಆದರೆ, ಜನತಾ ನ್ಯಾಯಾಲಯದಲ್ಲಿ ಎಲ್ಲ ಅನರ್ಹ ಶಾಸಕರಿಗೆ ಸೋಲು ಖಚಿತ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆ : ಸಿಎಂ ಬಿಎಸ್‌ವೈ ಘೋಷಣೆ

ಜನವಿರೋಧಿ ಸರಕಾರ: 'ಕೇವಲ ಭಾವನಾತ್ಮಕ ವಿಷಯಗಳ ಮೇಲೆ ಕಾಲಹರಣ ಮಾಡುತ್ತಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ನಿರುದ್ಯೋಗ ಹೋಗಲಾಡಿಸಲು, ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಯಾವುದೇ ಕಾರ್ಯಯೋಜನೆ ರೂಪಿಸಿಲ್ಲ. ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿ ಶೇ.8ರಷ್ಟಿದ್ದ ಜಿಡಿಪಿ, ಈಗ 4ಕ್ಕೆ ಕುಸಿದಿದೆ. ದಿನದಿಂದ ದಿನಕ್ಕೆ ಕೈಗಾರಿಕೆಗಳು ಮುಚ್ಚುತ್ತಿವೆ. ಶೇ.13ರಷ್ಟು ವಿದ್ಯುತ್‌ ಬಳಕೆ ಆಗುತ್ತಿಲ್ಲವೆಂದರೆ, ಕೈಗಾರಿಕಾ ಉತ್ಪನ್ನ ಕುಸಿದಿರುವುದನ್ನು ತೋರಿಸುತ್ತದೆ. ದೇಶದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಜನವಿರೋಧಿ ಆರ್ಥಿಕ ನೀತಿಗಳೇ ಇದಕ್ಕೆಲ್ಲಾ ಕಾರಣ'' ಎಂದು ಉಗ್ರಪ್ಪ ಟೀಕಿಸಿದರು.

'ಅನರ್ಹರ' ಕುರಿತಾದ ಸುಪ್ರೀಂ ತೀರ್ಪು: ಇದು ನೈತಿಕ ಸೋಲೆಂದ ಸಿದ್ದರಾಮಯ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ