ಆ್ಯಪ್ನಗರ

ಸಂವಿಧಾನ ಅಪಮಾನವೆಸಗಿದವರನ್ನು ಬಂಧಿಸಲು ಆಗ್ರಹ

ಹೊಸದಿಲ್ಲಿಯಲ್ಲಿ ಸಂವಿಧಾನದ ಪ್ರತಿಸುಟ್ಟು ಅಪಮಾನ ಮಾಡಿದವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ, ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

Vijaya Karnataka 15 Aug 2018, 5:00 am
ಕಂಪ್ಲಿ : ಹೊಸದಿಲ್ಲಿಯಲ್ಲಿ ಸಂವಿಧಾನದ ಪ್ರತಿಸುಟ್ಟು ಅಪಮಾನ ಮಾಡಿದವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ, ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
Vijaya Karnataka Web BLR-14KMP1


ಪುರಸಭೆ ಬಳಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಅಂಬೇಡ್ಕರ್‌ ವೃತ್ತದಲ್ಲಿ ಸಮಾವೇಶಗೊಂಡು ಧರಣಿ ನಡೆಸಲಾಯಿತು. ಪುರಸಭೆ ಸದಸ್ಯ ಸಿ.ಆರ್‌.ಹನುಮಂತ ಮಾತನಾಡಿ, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ ರದ್ದುಗೊಳಿಸುವಂತೆ ಇತ್ತೀಚೆಗೆ ಹೊಸದಿಲ್ಲಿಯ ಜಂತರ್‌-ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವರು ಸಂವಿಧಾನದ ಪ್ರತಿಯನ್ನು ಸುಡುವ ಮೂಲಕ ದೇಶದ್ರೋಹದ ಕೃತ್ಯ ಎಸಗಿದ್ದಾರೆ ಎಂದು ದೂರಿದರು. ಇಂತಹವರ ಮತ್ತು ಸಂವಿಧಾನ ವಿರುದ್ಧ ಮಾತನಾಡುವವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪುರಸಭೆ ಸ್ಥಾಯಿ ಸಮಿತಿ ಮಾಜಿ ಜಿ.ರಾಮಣ್ಣ, ಮಾಜಿ ಸದಸ್ಯ ಎಂ.ಸಿ.ಮಾಯಪ್ಪ, ಮುಖಂಡ ಕರಿಯಪ್ಪ ಗುಡಿಮನಿ ಮಾತನಾಡಿದರು. ಬಳಿಕ ಮನವಿಯನ್ನು ಉಪ ತಹಸೀಲ್ದಾರ್‌ ಬಿ.ರವೀಂದ್ರಕುಮಾರ್‌ ಅವರಿಗೆ ಸಲ್ಲಿಸಿಸಲಾಯಿತು. ಪುರಸಭೆ ಅಧ್ಯಕ್ಷ ಎಂ.ಸುಧೀರ್‌, ಪ್ರಮುಖರಾದ ಬಿ.ನಾರಾಯಣಪ್ಪ, ಎನ್‌.ಹಬೀಬ್‌ ರೆಹಮಾನ್‌, ಕೆ.ಮನೋಹರ, ಸಿ.ವೆಂಕಟೇಶ, ಕೆ.ಲಕ್ಷ ್ಮಣ, ವಸಂತರಾಜ್‌ ಕಹಳೆ, ಎ.ರೇಣುಕಪ್ಪ, ಆರ್‌.ಎಂ.ರಾಮಯ್ಯ, ರವಿ ಮಣ್ಣೂರು, ಕೆ.ಮೆಹೆಬೂಬ್‌, ಬಿ.ವೆಂಕಟೇಶ, ಬಿ.ನಾಗೇಂದ್ರ, ಬಿ.ದೇವೇಂದ್ರ, ಬಿ.ಚನ್ನಬಸಪ್ಪ, ಸಿ.ಬುಜ್ಜಿ ಕುಮಾರ್‌, ಸಿ.ಫ್ರಾನ್ಸಿಸ್‌, ಕೆ.ತಿಮ್ಮಯ್ಯ, ಶಾಂತಪ್ಪ ಪೂಜಾರ್‌, ಬಿ.ಅಂಬಣ್ಣ, ಎನ್‌.ವೀರೇಶ್‌, ಮೊಹಿದ್ದೀನ್‌ ಚೌಧರಿ, ವಿ.ವೆಂಕಟೇಶ, ವಲಿ ಅಹ್ಮದ್‌, ಯು.ಜಿಲಾನ್‌, ಶಿವಪ್ಪ ನಾಯಕ, ಎ.ಹುಲುಗಪ್ಪ, ಎಂ.ಗೋಪಾಲ್‌, ವಿ.ವೆಂಕಟರಮಣ, ತಿಪ್ಪೇಶ್‌, ಗಂಗಣ್ಣ, ಕೆ.ರಾಜು, ಆರ್‌.ಇಮಾಮ್‌ಸಾಬ್‌, ಹೊನ್ನೂರಪ್ಪ, ಟೈಲರ್‌ ಸಿದ್ದಪ್ಪ, ರಾಮಾಂಜಿನಿ, ದೇವರಮನಿ ಯಲ್ಲಪ್ಪ, ಸಂತೋಷ್‌.ಎಚ್‌.ಎಂ, ಡಾ.ವೆಂಕಟೇಶ ಸೇರಿದಂತೆ ದಲಿತ ಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ