ಆ್ಯಪ್ನಗರ

ಕೊರೊನಾ ಭೀತಿ: ಲಾಕ್ ಡೌನ್ ಇದ್ದರೂ ಕಾರ್ಯನಿರ್ವಹಿಸುತ್ತಿದೆ ಜಿಂದಾಲ್ ಕಂಪನಿ, ಗ್ರಾಮಸ್ಥರ ಆಕ್ರೋಶ

ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಪ್ರಧಾನಿ ನರೇಂದ್ರ ಮೋದಿ ಭಾರತ ಲಾಕ್‍ಡೌನ್ ಎಂದು ಘೋಷಿಸಿದ್ದರೂ, ಬಳ್ಳಾರಿಯ ಜಿಂದಾಲ್ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕಾರ್ಮಿಕರನ್ನು ಬಸ್ಸಿನಲ್ಲಿ ಕರೆದುಕೊಂಡು ಬರಲಾಗುತ್ತಿದೆ. ಇದರಿಂದಾಗಿ ಕುಡಿತಿನಿ ಬಳಿ 12ಕ್ಕೂ ಅಧಿಕ ಬಸ್ ಗಳನ್ನ ಗ್ರಾಮಸ್ಥರು ತಡೆದು ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka Web 25 Mar 2020, 10:48 am
ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಜಿಲ್ಲೆಯ ತೋರಣಗಲ್ಲಿಯಲ್ಲಿರುವ ಜಿಂದಾಲ್ ಕಾರ್ಖಾನೆಗೆ ಯಾಕೆ ಲಾಕ್ ಡೌನ್ ಇಲ್ಲ ಎಂದು ಪ್ರಶ್ನಿಸಿ ಕುಡಿತಿನಿ ಬಳಿ 12ಕ್ಕೂ ಅಧಿಕ ಬಸ್ ಗಳನ್ನ ಗ್ರಾಮಸ್ಥರು ತಡೆದು ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web jindal company


ಕೊರೊನಾ ವೈರಸ್ ಭೀತಿಯಿಂದಾಗಿ ದೇಶ ಹಾಗೂ ರಾಜ್ಯವೇ ಲಾಕ್ ಡೌನ್ ಆಗಿದೆ. ಆದರೂ ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆ ಮಾತ್ರ ಎಂದಿನಂತೆ ಕಾರ್ಯವನ್ನು ನಿರ್ವಹಿಸುತ್ತಿದೆ. ನೌಕರರನ್ನ ಕರೆತರಲು ಬೆಳ್ಳಂಬೆಳಿಗ್ಗೆಯೇ ಜೆಎಸ್ ಡಬ್ಲ್ಯು ಬಸ್ ಗಳನ್ನ ಜಿಲ್ಲೆಯ ಹೊಸಪೇಟೆ ಹಾಗೂ ಬಳ್ಳಾರಿ ನಗರಗಳತ್ತ ಕಳಿಸಿ ಕೊಡುತ್ತಿದೆ.

ದೇಶದ ದೊಡ್ಡ ದೊಡ್ಡ ಕೈಗಾರಿಕಾ ಕಾರ್ಖಾನೆಗಳೇ ಲಾಕ್ ಡೌನ್ ಆದಾಗ, ಇಲ್ಲಿನ‌ ಜಿಂದಾಲ್ ಉಕ್ಕು ಕಾರ್ಖಾನೆಯು ಯಾಕೆ ಲಾಕ್ ಡೌನ್‌ ಮಾಡುತ್ತಿಲ್ಲ‌ ಎಂದು ಕುಡಿತಿನಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಹೊರಡಿಸಿದ ಆದೇಶವನ್ನೇ ಜಿಂದಾಲ್ ಕಂಪನಿಯವರು ಧಿಕ್ಕರಿಸಿ ಸಾವಿರಾರು ಜನರ ಜೀವನದ ಜೊತೆಗೆ ಚೆಲ್ಲಾಟವನ್ನಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಜಿಂದಾಲ್ ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ