ಶಶಿಧರ ಮೇಟಿ
ಬಳ್ಳಾರಿ: ಲಾಕ್ಡೌನ್ ಸಡಿಲಿಕೆ ಮಧ್ಯೆ ಉತ್ತರಾಖಂಡ್ನಿಂದ ಬಂದ ಕೊರೊನಾ ವೈರಸ್ ಸೋಂಕಿತನೊಬ್ಬ ಹಂಚಿದ ಪ್ರಸಾದವನ್ನು ಶ್ರದ್ಧೆಯಿಂದ ಸ್ವೀಕರಿಸಿದ 64 ಮಂದಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಲಾಕ್ಡೌನ್ ಪೂರ್ವದಲ್ಲಿ ಉತ್ತರಾಖಂಡ್ ಪ್ರವಾಸಕ್ಕೆ ಹೋಗಿ ಸಿಕ್ಕಿಕೊಂಡಿದ್ದ ವ್ಯಕ್ತಿಯೊಬ್ಬರು ಪ್ರಸಾದ ಕೊಡುವ ನೆಪದಲ್ಲಿ ಒಂದೇ ದಿನ ಹಲವರನ್ನು ಸಂಪರ್ಕಿಸಿ, ಆತಂಕ ಮೂಡಿಸಿದ್ದಾನೆ. ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಈತನ ಒಂದು ದಿನದ ಟ್ರಾವೆಲ್ ಹಿಸ್ಟರಿಯಿಂದ ಈ ಸತ್ಯ ಬೆಳಕಿಗೆ ಬಂದಿದೆ. ಪ್ರಾಥಮಿಕ ಸಂಪರ್ಕ ಮಾಡಿರುವ ಎಲ್ಲರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಲಾಗಿದೆ. ಮನೆಯಲ್ಲಿಯೇ ಕ್ವಾರಂಟೈನ್ ಮಾಡಿದ್ದರೂ ನಿಯಮ ಮೀರಿ ವರ್ತಿಸಿದ್ದರಿಂದ ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಬರುವ ಪ್ರತಿಯೊಬ್ಬ ವ್ಯಕ್ತಿಗೂ ಜಿಲ್ಲಾಡಳಿತ 12 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಿದೆ.
ಯಾರಿವರು?:
ಕೊರೊನಾದಿಂದ ಇಡೀ ವಿಶ್ವವೇ ಬೆಚ್ಚಿಬಿದ್ದು ಗೃಹ ಬಂಧನಕ್ಕೆ ಒಳಗಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಲಾಕ್ಡೌನ್ ಪೂರ್ವದಲ್ಲಿ ಉತ್ತರಾಖಂಡ್ ಪ್ರವಾಸಕ್ಕೆ ಹೋಗಿ ಸಿಕ್ಕಿ ಹಾಕಿಕೊಂಡು ಫಜೀತಿ ಪಟ್ಟಿದ್ದರಿಂದ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನೆರವಿನಿಂದ ಬಳ್ಳಾರಿಗೆ ಬಂದಾಗ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿಡಲಾಗಿತ್ತು. ಆದರೆ, ಈ ವ್ಯಕ್ತಿಯು ಮನೆಯಲ್ಲಿಇರುವುದು ಬಿಟ್ಟು, ಪ್ರಸಾದ ಹಂಚಿಕೆ ಸೇರಿದಂತೆ ಇತರ ನೆಪದಲ್ಲಿ ಸುತ್ತಾಡಿರುವುದು ಎಷ್ಟು ಸರಿ? ಎಂಬ ಚರ್ಚೆಯು ಜಿಲ್ಲೆಯಲ್ಲಿ ಮುನ್ನಲೆಗೆ ಬಂದಿದೆ. ಜಿಲ್ಲಾಡಳಿತ, ಜಿಲ್ಲಾಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೊರೊನಾ ನಿಯಂತ್ರಣಕ್ಕೆ ಹಗಲು-ರಾತ್ರಿ ಎನ್ನದೇ ಕೆಲಸ ನಿರ್ವಹಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ಕೆಲವೊಬ್ಬರು ಅರಿತಂತೆ ಕಾಣುತ್ತಿಲ್ಲ. ಕೊರೊನಾ ಭೀತಿಯ ಮಧ್ಯೆಯೇ ಉತ್ತರಾಖಂಡದಲ್ಲಿ ಸುಮಾರು ಒಂದುವರೆ ತಿಂಗಳು ಸಿಕ್ಕಿ ಹಾಕಿಕೊಂಡು, ಸಮಸ್ಯೆ ಎದುರಿಸಿದ ಪರಿವೆಯೇ ಈ ವ್ಯಕ್ತಿಗೆ ಇದ್ದಂತೆ ಕಾಣುತ್ತಿಲ್ಲ.
ಕೊರೊನಾ ನಿಯಂತ್ರಣದಲ್ಲಿ ಬಳ್ಳಾರಿ ರಾಜ್ಯಕ್ಕೇ ಮಾದರಿ: ರೇಷನ್ ಮತ್ತು ಆಹಾರ ಕಿಟ್ ವಿತರಣೆಯಲ್ಲಿ ಅಗ್ರಸ್ಥಾನ!
ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್:
ಕೆಲವೊಬ್ಬರು ವಸತಿ ನಿಲಯಗಳ ಕ್ವಾರಂಟೈನ್ ಕೇಂದ್ರದಲ್ಲಿಇರಲು ನಿರಾಕರಿಸಿದರೆ ಅವರ ಸ್ವಂತ ವೆಚ್ಚದಲ್ಲಿ ಹೋಟೆಲ್ನಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಈಗಾಗಲೇ ಬಳ್ಳಾರಿಯಲ್ಲಿ ಎರಡು ಮತ್ತು ಹೊಸಪೇಟೆ ಒಂದು ಖಾಸಗಿ ಹೋಟೆಲ್ ಗುರುತಿಸಲಾಗಿದೆ. ಗುರುತಿಸಲಾದವರು ರೂಮಿನಲ್ಲಿಯೇ ಇರಬೇಕು. ಮುಂದಿನ ಎರಡು ದಿನಗಳಲ್ಲಿ ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ ಕೇಂದ್ರಗಳು ಆರಂಭವಾಗಲಿವೆ.
ಗುಡ್ ನ್ಯೂಸ್: ಬಳ್ಳಾರಿ ಕೋವಿಡ್-19 ಆಸ್ಪತ್ರೆಯಿಂದ ಗುಣ...
ಸಾರ್ವಜನಿಕರೇ ಇರಲಿ ಎಚ್ಚರ:
ಕೊರೊನಾ ಹರಡುವಿಕೆ ಸೂಕ್ಷ್ಮತೆಯಿಂದ ಕೂಡಿರುವುದರಿಂದ ಹೊರಗಿನ ಅಪರಿಚಿತ ಮತ್ತು ಪರಿಚಿತ ವ್ಯಕ್ತಿಗಳು ಅದರಲ್ಲೂಕ್ವಾರಂಟೈನ್ ಸೀಲ್ ಹಾಕಿಸಿಕೊಂಡಿರುವ ವ್ಯಕ್ತಿಗಳು ಬಂದು ಪ್ರಸಾದ ಸೇರಿದಂತೆ ಇತರ ವಸ್ತುಗಳ ಕೊಡಲು ಬಂದಾಗ ಎಚ್ಚರಿಕೆ ವಹಿಸುವುದು ಅಗತ್ಯ. ಅವರ ತಪ್ಪಿಗೆ ನೀವು ಕ್ವಾರಂಟೈನ್ ಒಳಪಡಬೇಕಾದ ಪರಿಸ್ಥಿತಿ ಬರಬಹುದು ಇಲ್ಲವೆ ತಮಗೆ ತಿಳಿಯದೆ ಕೊರೊನಾ ಸೋಂಕು ತಾಕಿದರೂ ಆಶ್ಚರ್ಯವಿಲ್ಲ. ಲಾಕ್ಡೌನ್ ಸಡಿಲಿಕೆ ಮಧ್ಯೆಯೇ ಬಳ್ಳಾರಿ ಆರೆಂಜ್ ಝೋನ್ನಲ್ಲಿದೆ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಒಬ್ಬರು ಮಾಡುವ ಅಚಾತುರ್ಯಕ್ಕೆ ಇಡೀ ಕೌಲ್ಬಜಾರ್ ಪ್ರದೇಶದ ಸೇರಿದಂತೆ ಸುತ್ತಮುತ್ತ ಪ್ರದೇಶಗಳು ಕಂಟೈನ್ಮೆಂಟ್ ಪ್ರದೇಶವಾಗಿ ಮಾರ್ಪಟ್ಟು, ಸಹಜ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.
ಶತಮಾನ ಹಿಂದಿನ ಪ್ಲೇಗ್ ನೆನಪಿಸಿದ ಕೊರೊನಾ, ಅಂದು ಬಳ್ಳಾ...
ಉತ್ತರಾಖಂಡ್ನಿಂದ ಬಂದು ಪಾಜಿಟಿವ್ ಬಂದಿರುವ ವ್ಯಕ್ತಿಯು ಒಂದೇ 64 ಜನರನ್ನು ಪ್ರಾಥಮಿಕ ಸಂಪರ್ಕ ಮಾಡಿದ್ದು, ಅವರೆಲ್ಲರನ್ನು ಕ್ವಾರಂಟೈನಲ್ಲಿಡಲಾಗಿದೆ. ಅಂತಾರಾಜ್ಯದಿಂದ ಬರುವ ವ್ಯಕ್ತಿಗಳನ್ನು ಕಡ್ಡಾಯವಾಗಿ 12 ದಿನಗಳ ಕಾಲ ವಸತಿ ನಿಲಯಗಳ ಕ್ವಾರಂಟೈನನಲ್ಲಿಡಲಾಗುತ್ತದೆ. ಕ್ವಾರಂಟೈನ್ ಸೀಲು ಹಾಕಿಸಿಕೊಂಡಿರುವ ವ್ಯಕ್ತಿಗಳು ಏನಾದರೂ ಕೊಟ್ಟರೂ ಸ್ವೀಕರಿಸಬಾರದು. ಅಂತಹ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಜಿಲ್ಲಾಡಳಿತದ ವಸತಿ ನಿಲಯಗಳ ಕ್ವಾರಂಟೈನ್ ಕೇಂದ್ರದಲ್ಲಿ ಇರಲು ಆಸಕ್ತಿ ಪಡದ ವ್ಯಕ್ತಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಹೋಟೆಲ್ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿಯಲ್ಲಿ ಎರಡು ಹೋಟೆಲ್, ಹೊಸಪೇಟೆಯಲ್ಲಿ ಒಂದು ಹೋಟೆಲ್ ವ್ಯವಸ್ಥೆ ಮಾಡಲಾಗಿದೆ. 12 ದಿನ ಕ್ವಾರಂಟೈನ್ನಲ್ಲಿರಬೇಕು.
-ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ, ಬಳ್ಳಾರಿ
ಬಳ್ಳಾರಿ: ಲಾಕ್ಡೌನ್ ಸಡಿಲಿಕೆ ಮಧ್ಯೆ ಉತ್ತರಾಖಂಡ್ನಿಂದ ಬಂದ ಕೊರೊನಾ ವೈರಸ್ ಸೋಂಕಿತನೊಬ್ಬ ಹಂಚಿದ ಪ್ರಸಾದವನ್ನು ಶ್ರದ್ಧೆಯಿಂದ ಸ್ವೀಕರಿಸಿದ 64 ಮಂದಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಯಾರಿವರು?:
ಕೊರೊನಾದಿಂದ ಇಡೀ ವಿಶ್ವವೇ ಬೆಚ್ಚಿಬಿದ್ದು ಗೃಹ ಬಂಧನಕ್ಕೆ ಒಳಗಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಲಾಕ್ಡೌನ್ ಪೂರ್ವದಲ್ಲಿ ಉತ್ತರಾಖಂಡ್ ಪ್ರವಾಸಕ್ಕೆ ಹೋಗಿ ಸಿಕ್ಕಿ ಹಾಕಿಕೊಂಡು ಫಜೀತಿ ಪಟ್ಟಿದ್ದರಿಂದ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನೆರವಿನಿಂದ ಬಳ್ಳಾರಿಗೆ ಬಂದಾಗ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿಡಲಾಗಿತ್ತು. ಆದರೆ, ಈ ವ್ಯಕ್ತಿಯು ಮನೆಯಲ್ಲಿಇರುವುದು ಬಿಟ್ಟು, ಪ್ರಸಾದ ಹಂಚಿಕೆ ಸೇರಿದಂತೆ ಇತರ ನೆಪದಲ್ಲಿ ಸುತ್ತಾಡಿರುವುದು ಎಷ್ಟು ಸರಿ? ಎಂಬ ಚರ್ಚೆಯು ಜಿಲ್ಲೆಯಲ್ಲಿ ಮುನ್ನಲೆಗೆ ಬಂದಿದೆ. ಜಿಲ್ಲಾಡಳಿತ, ಜಿಲ್ಲಾಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೊರೊನಾ ನಿಯಂತ್ರಣಕ್ಕೆ ಹಗಲು-ರಾತ್ರಿ ಎನ್ನದೇ ಕೆಲಸ ನಿರ್ವಹಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ಕೆಲವೊಬ್ಬರು ಅರಿತಂತೆ ಕಾಣುತ್ತಿಲ್ಲ. ಕೊರೊನಾ ಭೀತಿಯ ಮಧ್ಯೆಯೇ ಉತ್ತರಾಖಂಡದಲ್ಲಿ ಸುಮಾರು ಒಂದುವರೆ ತಿಂಗಳು ಸಿಕ್ಕಿ ಹಾಕಿಕೊಂಡು, ಸಮಸ್ಯೆ ಎದುರಿಸಿದ ಪರಿವೆಯೇ ಈ ವ್ಯಕ್ತಿಗೆ ಇದ್ದಂತೆ ಕಾಣುತ್ತಿಲ್ಲ.
ಕೊರೊನಾ ನಿಯಂತ್ರಣದಲ್ಲಿ ಬಳ್ಳಾರಿ ರಾಜ್ಯಕ್ಕೇ ಮಾದರಿ: ರೇಷನ್ ಮತ್ತು ಆಹಾರ ಕಿಟ್ ವಿತರಣೆಯಲ್ಲಿ ಅಗ್ರಸ್ಥಾನ!
ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್:
ಕೆಲವೊಬ್ಬರು ವಸತಿ ನಿಲಯಗಳ ಕ್ವಾರಂಟೈನ್ ಕೇಂದ್ರದಲ್ಲಿಇರಲು ನಿರಾಕರಿಸಿದರೆ ಅವರ ಸ್ವಂತ ವೆಚ್ಚದಲ್ಲಿ ಹೋಟೆಲ್ನಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಈಗಾಗಲೇ ಬಳ್ಳಾರಿಯಲ್ಲಿ ಎರಡು ಮತ್ತು ಹೊಸಪೇಟೆ ಒಂದು ಖಾಸಗಿ ಹೋಟೆಲ್ ಗುರುತಿಸಲಾಗಿದೆ. ಗುರುತಿಸಲಾದವರು ರೂಮಿನಲ್ಲಿಯೇ ಇರಬೇಕು. ಮುಂದಿನ ಎರಡು ದಿನಗಳಲ್ಲಿ ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ ಕೇಂದ್ರಗಳು ಆರಂಭವಾಗಲಿವೆ.
ಗುಡ್ ನ್ಯೂಸ್: ಬಳ್ಳಾರಿ ಕೋವಿಡ್-19 ಆಸ್ಪತ್ರೆಯಿಂದ ಗುಣ...
ಸಾರ್ವಜನಿಕರೇ ಇರಲಿ ಎಚ್ಚರ:
ಕೊರೊನಾ ಹರಡುವಿಕೆ ಸೂಕ್ಷ್ಮತೆಯಿಂದ ಕೂಡಿರುವುದರಿಂದ ಹೊರಗಿನ ಅಪರಿಚಿತ ಮತ್ತು ಪರಿಚಿತ ವ್ಯಕ್ತಿಗಳು ಅದರಲ್ಲೂಕ್ವಾರಂಟೈನ್ ಸೀಲ್ ಹಾಕಿಸಿಕೊಂಡಿರುವ ವ್ಯಕ್ತಿಗಳು ಬಂದು ಪ್ರಸಾದ ಸೇರಿದಂತೆ ಇತರ ವಸ್ತುಗಳ ಕೊಡಲು ಬಂದಾಗ ಎಚ್ಚರಿಕೆ ವಹಿಸುವುದು ಅಗತ್ಯ. ಅವರ ತಪ್ಪಿಗೆ ನೀವು ಕ್ವಾರಂಟೈನ್ ಒಳಪಡಬೇಕಾದ ಪರಿಸ್ಥಿತಿ ಬರಬಹುದು ಇಲ್ಲವೆ ತಮಗೆ ತಿಳಿಯದೆ ಕೊರೊನಾ ಸೋಂಕು ತಾಕಿದರೂ ಆಶ್ಚರ್ಯವಿಲ್ಲ. ಲಾಕ್ಡೌನ್ ಸಡಿಲಿಕೆ ಮಧ್ಯೆಯೇ ಬಳ್ಳಾರಿ ಆರೆಂಜ್ ಝೋನ್ನಲ್ಲಿದೆ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಒಬ್ಬರು ಮಾಡುವ ಅಚಾತುರ್ಯಕ್ಕೆ ಇಡೀ ಕೌಲ್ಬಜಾರ್ ಪ್ರದೇಶದ ಸೇರಿದಂತೆ ಸುತ್ತಮುತ್ತ ಪ್ರದೇಶಗಳು ಕಂಟೈನ್ಮೆಂಟ್ ಪ್ರದೇಶವಾಗಿ ಮಾರ್ಪಟ್ಟು, ಸಹಜ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.
ಶತಮಾನ ಹಿಂದಿನ ಪ್ಲೇಗ್ ನೆನಪಿಸಿದ ಕೊರೊನಾ, ಅಂದು ಬಳ್ಳಾ...
ಉತ್ತರಾಖಂಡ್ನಿಂದ ಬಂದು ಪಾಜಿಟಿವ್ ಬಂದಿರುವ ವ್ಯಕ್ತಿಯು ಒಂದೇ 64 ಜನರನ್ನು ಪ್ರಾಥಮಿಕ ಸಂಪರ್ಕ ಮಾಡಿದ್ದು, ಅವರೆಲ್ಲರನ್ನು ಕ್ವಾರಂಟೈನಲ್ಲಿಡಲಾಗಿದೆ. ಅಂತಾರಾಜ್ಯದಿಂದ ಬರುವ ವ್ಯಕ್ತಿಗಳನ್ನು ಕಡ್ಡಾಯವಾಗಿ 12 ದಿನಗಳ ಕಾಲ ವಸತಿ ನಿಲಯಗಳ ಕ್ವಾರಂಟೈನನಲ್ಲಿಡಲಾಗುತ್ತದೆ. ಕ್ವಾರಂಟೈನ್ ಸೀಲು ಹಾಕಿಸಿಕೊಂಡಿರುವ ವ್ಯಕ್ತಿಗಳು ಏನಾದರೂ ಕೊಟ್ಟರೂ ಸ್ವೀಕರಿಸಬಾರದು. ಅಂತಹ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಜಿಲ್ಲಾಡಳಿತದ ವಸತಿ ನಿಲಯಗಳ ಕ್ವಾರಂಟೈನ್ ಕೇಂದ್ರದಲ್ಲಿ ಇರಲು ಆಸಕ್ತಿ ಪಡದ ವ್ಯಕ್ತಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಹೋಟೆಲ್ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿಯಲ್ಲಿ ಎರಡು ಹೋಟೆಲ್, ಹೊಸಪೇಟೆಯಲ್ಲಿ ಒಂದು ಹೋಟೆಲ್ ವ್ಯವಸ್ಥೆ ಮಾಡಲಾಗಿದೆ. 12 ದಿನ ಕ್ವಾರಂಟೈನ್ನಲ್ಲಿರಬೇಕು.
-ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ, ಬಳ್ಳಾರಿ