ಆ್ಯಪ್ನಗರ

ಬಳ್ಳಾರಿ: ನದಿಗೆ ತೆರಳಿದ್ದ ವ್ಯಕ್ತಿ ಮೊಸಳೆಗೆ ಬಲಿ

ನದಿಯಲ್ಲಿ ಈಜಾಡಲು ಮುಂದಾದಾಗ ದಿಢೀರ್‌ ಕಾಣಿಸಿಕೊಂಡ ಮೊಸಳೆ, ರೆಹಮತ್‌ ಅಲಿ ಅವರ ಕಾಲನ್ನು ಹಿಡಿದು ಎಳೆದಿದೆ. ಸಮೀಪದಲ್ಲಿದ್ದ ಮೀನುಗಾರರು, ಸಂಜೆ ವೇಳೆ ಶವ ಹೊರತೆಗೆದರು.

Vijaya Karnataka Web 17 Mar 2020, 9:20 pm
ಸಿರುಗುಪ್ಪ (ಬಳ್ಳಾರಿ): ತಾಲೂಕಿನ ವಿನಾಯಕ ನಗರ ಕ್ಯಾಂಪ್‌ ಸಮೀಪದ ತುಂಗಭದ್ರಾ ನದಿಯ ಹರಿಗೋಲು ಘಾಟ್‌ಗೆ ಮಂಗಳವಾರ ಸ್ನಾನಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು, ಮೊಸಳೆಗೆ ಬಲಿಯಾಗಿದ್ದಾರೆ.
Vijaya Karnataka Web ಮೊಸಳೆ (ಸಂಗ್ರಹ)
ಮೊಸಳೆ (ಸಂಗ್ರಹ)


ನಗರದ 25ನೇ ವಾರ್ಡ್‌ ನಿವಾಸಿ ರೆಹಮತ್‌ ಅಲಿ (35) ಮೃತರು. ಅವರು ತನ್ನಿಬ್ಬರು ಮಕ್ಕಳೊಂದಿಗೆ ನದಿಗೆ ತೆರಳಿದ್ದರು. ಮಕ್ಕಳನ್ನು ತೆಪ್ಪದಲ್ಲಿ ಕುಳ್ಳರಿಸಿಕೊಂಡು ನದಿಯ ಮತ್ತೊಂದು ದಂಡೆ ತಲುಪಿದ್ದರು.

ನಂತರ ನದಿಯಲ್ಲಿ ಈಜಾಡಲು ಮುಂದಾದಾಗ ದಿಢೀರ್‌ ಕಾಣಿಸಿಕೊಂಡ ಮೊಸಳೆ, ರೆಹಮತ್‌ ಅಲಿ ಅವರ ಕಾಲನ್ನು ಹಿಡಿದು ಎಳೆದಿದೆ. ಸಮೀಪದಲ್ಲಿದ್ದ ಮೀನುಗಾರರು, ಸಂಜೆ ವೇಳೆ ಶವ ಹೊರತೆಗೆದರು. ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ