ಆ್ಯಪ್ನಗರ

ಬೆಳೆ ಹಾನಿ ಪರಿಹಾರ: ಇನ್ನು ರೈತರ ಕೈ ಸೇರಿಲ್ಲ

ಇನ್ನು ರೈತರ ಕೈ ಸೇರಿಲ್ಲ ಶಶಿಧರ ಮೇಟಿ, ಬಳ್ಳಾರಿ ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬರದಿಂದಾಗಿ ಉಂಟಾದ ಬೆಳೆ ಹಾನಿಗೆ ಈವರೆಗೂ ಪರಿಹಾರ ದೊರೆಯದ್ದರಿಂದ ರೈತರು ...

Vijaya Karnataka 18 Nov 2017, 5:00 am

ಶಶಿಧರ ಮೇಟಿ, ಬಳ್ಳಾರಿ

ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬರದಿಂದಾಗಿ ಉಂಟಾದ ಬೆಳೆ ಹಾನಿಗೆ ಈವರೆಗೂ ಪರಿಹಾರ ದೊರೆಯದ್ದರಿಂದ ರೈತರು ನಿರೀಕ್ಷೆಯಲ್ಲೇ ದಿನದೂಡುವಂತಾಗಿದೆ.

ಪ್ರಸಕ್ತ ವರ್ಷದ ಮುಂಗಾರು ಕಳೆದು ಹಿಂಗಾರು ಆರಂಭವಾದರೂ ಪರಿಹಾರ ದೊರೆಯದ್ದರಿಂದ ಅನ್ನದಾತರಲ್ಲಿ ನಿರಾಸೆ ಮನೆ ಮಾಡಿದೆ. ಜಿಲ್ಲೆಯ 4800 ರೈತರು ತಬರರಂತೆ ಕಾದು ಕುಳಿತಿದ್ದಾರೆ. ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ಕೈಗೊಂಡು ಬೆಳೆ ಹಾನಿಗೆ ಒಳಗಾದವರನ್ನು ಗುರುತಿಸಿದ್ದಾರೆ. ಹಲವರೆಗೆ ಈಗಾಗಲೇ ನೇರವಾಗಿ ಖಾತೆಗೆ ರಾಜ್ಯ ಸರಕಾರದಿಂದ ಬರ ಪರಿಹಾರದ ಹಣ ಬಂದಿದೆ. ಇನ್ನು ಕೆಲವರು, ಹಣಕ್ಕೆ ಎದುರು ನೋಡುವಂತಾಗಿದೆ. ವರ್ಷ ಕಳೆದರೂ ಪರಿಹಾರ ಸಿಗದ್ದರಿಂದ ತಾಲೂಕು ಕಚೇರಿಗೆ ಅಲೆದಾಡಿದ ರೈತರು ಸುಸ್ತಾಗಿದ್ದಾರೆ. ಪರಿಹಾರ ಪಟ್ಟಿಯಿಂದಲೇ ಹೆಸರು ಬಿಟ್ಟು ಹೋಗಿದೆ ಏನೋ? ಎಂಬ ಅನುಮಾನವೂ ಕೆಲವರನ್ನು ಕಾಡಲಾರಂಭಿಸಿದೆ.

ಪರಿಹಾರಕ್ಕೆ ಕಾದಿರುವ ರೈತರು: ಮುಂಗಾರಿನಲ್ಲಿ ಜಂಟಿ ಸರ್ವೆ ನಡೆಸಿ ಜಿಲ್ಲೆಯಲ್ಲಿ ಬೆಳೆ ಪರಿಹಾರಕ್ಕೆ ಅರ್ಹರಾಗಿರುವ 1,40,692 ಜನರನ್ನು ಗುರುತಿಸಲಾಗಿದೆ. ಅದರಲ್ಲಿ 1,33,684 ರೈತರಿಗೆ 71.88 ಕೋಟಿ ರೂ.ಗಳ ಪರಿಹಾರದ ಹಣವನ್ನು ಅವರ ಖಾತೆ ಹಾಕಲಾಗಿದೆ. ಹಿಂಗಾರಿನಲ್ಲಿ ಗುರುತಿಸಿದಂತೆ ದಾಖಲಾತಿ ನೀಡಿರುವ 9726 ರೈತರ ಪೈಕಿ 8074 ರೈತರಿಗೆ ಸುಮಾರು 5.70 ಕೋಟಿ ರೂ.ಗಳ ಪರಿಹಾರದ ಹಣವನ್ನು ಕೊಡಲಾಗಿದೆ. ಇನ್ನುಳಿದ ರೈತರಿಗೆ ಹಣ ನೀಡದೇ ಸತಾಯಿಸಲಾಗುತ್ತಿದೆ.

ಕೂಡ್ಲಿಗಿಯಲ್ಲಿ 2 ಸಾವಿರ ರೈತರು: ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರಿನಲ್ಲಿ ಪರಿಹಾರ ಪಡೆಯಲು ಅರ್ಹರಾಗಿ ಅಗತ್ಯ ದಾಖಲೆಗಳನ್ನು ನೀಡಿರುವ ಸುಮಾರು 4846 ರೈತರಿಗೆ ಪರಿಹಾರ ದಕ್ಕಬೇಕಿದೆ. ಹಡಗಲಿ ತಾಲೂಕಿನ ವ್ಯಾಪ್ತಿಯಲ್ಲಿ 929, ಹಗರಿಬೊಮ್ಮನಹಳ್ಳಿ ತಾಲೂಕಿನ 1167, ಹೊಸಪೇಟೆ ತಾಲೂಕಿನ 149, ಸಿರುಗುಪ್ಪ ತಾಲೂಕಿನ 298, ಬಳ್ಳಾರಿ ತಾಲೂಕಿನ 46, ಸಂಡೂರು ತಾಲೂಕಿನ 106 ಹಾಗೂ ಕೂಡ್ಲಿಗಿ ತಾಲೂಕಿನ 2087, ಕುರುಗೋಡು ವ್ಯಾಪ್ತಿಯ 64 ರೈತರಿಗೆ ಇನ್ನು ಪರಿಹಾರ ದೊರಕಿಲ್ಲ. ಇವರೆಲ್ಲ ಅರ್ಹರಾಗಿಯೂ ವರ್ಷದಿಂದ ಪರಿಹಾರ ಎದುರು ನೋಡುತ್ತಿದ್ದಾರೆ.

ಅಧಿಕಾರಿಗಳಿಗೆ ತಲೆನೋವು: ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ರೈತರಿಂದ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿದ್ದರು. ಗ್ರಾಮದ ಕೆಲವರಿಗೆ ಬರ ಪರಿಹಾರದ ಹಣ ಬಂದು, ಕೆಲವರಿಗೆ ಬಾರದಿರುವುದರಿಂದ ರೈತರು ಗ್ರಾಮ ಲೆಕ್ಕಾಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇವರು ತಾಲೂಕು ಕಚೇರಿಗೆ ತೆರಳಿ ಸಂಬಂಧಿಸಿದ ಅಧಿಕಾರಿಗಳ ದುಂಬಾಲು ಬೀಳುತ್ತಿದ್ದಾರೆ. ಆದರೆ, ರಾಜ್ಯ ಸರಕಾರದ ಪರಿಹಾರ ತಂತ್ರಾಂಶದಲ್ಲಿ ಮಾಹಿತಿ ಸಂಗ್ರಹಿಸಿ, ದಾಖಲು ಮಾಡಿರುವುದರಿಂದ ರಾಜ್ಯ ಸರಕಾರದಿಂದಲೇ ನೇರವಾಗಿ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗುತ್ತದೆ. ಹೀಗಿರುವಾಗ, ನಾವೇನು ಹೇಳಬೇಕು? ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

...

ಹೊಸ ತಂತ್ರಾಂಶ ಜಾರಿಗೆ ತಂದಿರುವುದರಿಂದ ಬರ ಪರಿಹಾರ ನೀಡುವುದರಲ್ಲಿ ಸಮಸ್ಯೆಗಳು ಇಲ್ಲ. ನಾವು ಬರ ಪರಿಹಾರ ಪಡೆಯಲು ಅರ್ಹತೆ ಪಡೆದಿದ್ದೇವೆ.

ವರ್ಷವಾದರೂ ಪರಿಹಾರದ ಹಣ ನಮ್ಮ ಖಾತೆಗೆ ಬಂದಿಲ್ಲ. ಸರಕಾರ ಉಳಿದ ರೈತರ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.

-ಬಸವರಾಜ್‌, ರೈತರು, ಬಳ್ಳಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ