ಆ್ಯಪ್ನಗರ

‘ಧಾರ್ಮಿಕ ಕಾರ್ಯಕ್ಕೆ ಕೋಟಿ ರೂ.ಠೇವಣಿ’ '

ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ವಸುಧೇಂದ್ರ ತೀರ್ಥರ ಮೂಲ ಬಂದಾವನದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯ ಕೈಗೊಳ್ಳುವುದಕ್ಕಾಗಿ 1 ಕೋಟಿ ರೂ.ಗಳನ್ನು ಕರ್ನಾಟಕ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ ಎಂದು ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು ಪ್ರಕಟಿಸಿದರು.

Vijaya Karnataka 3 Nov 2018, 12:00 am
ಸಿರುಗುಪ್ಪ: ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ವಸುಧೇಂದ್ರ ತೀರ್ಥರ ಮೂಲ ಬಂದಾವನದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯ ಕೈಗೊಳ್ಳುವುದಕ್ಕಾಗಿ 1 ಕೋಟಿ ರೂ.ಗಳನ್ನು ಕರ್ನಾಟಕ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ ಎಂದು ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು ಪ್ರಕಟಿಸಿದರು.
Vijaya Karnataka Web BLR-BLY2SGP5


ವಸುಧೇಂದ್ರ ತೀರ್ಥರ ಆರಾಧನೆ ಮಹೋತ್ಸವದ ವೇಳೆ ಗುರುವಾರ ಮಾತನಾಡಿ, ನಿತ್ಯ ಪೂಜೆ ಕೈಂಕರ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಠೇವಣಿ ಇಡಲಾಗುತ್ತಿದೆ. ಕೆಂಚನಗುಡ್ಡದ ಸನ್ನಿಧಾನದಲ್ಲಿ ಈಗಾಗಲೇ ವೇದಪಾಠ ಶಾಲೆ, ಗೋಶಾಲೆ, ಉದ್ಯಾನ ಸೇರಿದಂತೆ ಕಲ್ಯಾಣ ಮಂಟಪ ನಿರ್ಮಾಣ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಲಾಗುವುದು. ಮಧ್ವ ಪರಂಪರೆಯಲ್ಲಿ ಬರುವ ಶ್ರೀಮಠದ ಮೊದಲ ಯತಿಗಳಾದ ಆನಂದ ತೀರ್ಥರಿಂದ ನಮ್ಮ ಗುರುಗಳವರೆಗೆ ಎಲ್ಲ ಯತಿಗಳ ಮೂಲ ಬೃಂದಾವನ ಅಭಿವೃದ್ಧಿಪಡಿಸಲು ಶ್ರೀಮಠ ಯೋಜನೆ ರೂಪಿಸಲಾಗಿದೆ. ಪದ್ಮನಾಭ ತೀರ್ಥರ ಮೂಲ ಬೃಂದಾವನ, ಭುವನೇಂದ್ರ ತೀರ್ಥರು, ವರಧೇಂದ್ರ ತೀರ್ಥರು, ಸುಮತೇಂದ್ರ ತೀರ್ಥರು, ರಾಘವೇಂದ್ರ ತೀರ್ಥರ ಬೃಂದಾವನಗಳಲ್ಲಿ ಪೂಜೆ ನಡೆಯಲು 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಪ್ರತ್ಯೇಕವಾಗಿ 40 ಕೋಟಿ ರೂ.ನಿಶ್ಚಿತ ಠೇವಣಿ ಇಡಲಾಗಿದೆ ಎಂದರು.

ಮುಂಬಯಿನಲ್ಲಿ ಮಠ ನಿರ್ಮಾಣ: ಶ್ರೀಮಠದ ಅಭಿವೃದ್ಧಿ ಯೋಜನೆಯಡಿ ಮುಂಬಯಿನಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಮಠ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜೋಗೇಶ್ವರದಲ್ಲಿ ಹಿಂದಿನ ಪೀಠಾಧಿಪತಿಗಳು ಖರೀದಿಸಿದ ನಿವೇಶನ 800 ಕೋಟಿ ರೂ.ಮೌಲ್ಯ ಹೊಂದಿದೆ. ಅಲ್ಲಿ ವ್ಯವಸ್ಥಿತ ಮಠ ನಿರ್ಮಾಣ ಮಾಡಲಾಗುತ್ತಿದೆ. ಹರಿದ್ವಾರದ ಗಂಗಾನದಿಯ ದಡದಲ್ಲಿ 7.5 ಕೋಟಿ ರೂ.ವೆಚ್ಚದಲ್ಲಿ ನಿವೇಶನ ಖರೀದಿ ಮಾಡಲಾಗಿದೆ. ಬದರಿ ಕ್ಷೇತ್ರದಲ್ಲಿನ ನಾರಾಯಣ ಪರ್ವತದಲ್ಲಿ ನಿವೇಶನ ಖರೀದಿಸಿದ್ದು, ಅಲ್ಲಿ ನಾರಾಯಣ ದೇವಸ್ಥಾನ , ಛತ್ರ ನಿರ್ಮಾಣ ಮಾಡಲಾಗುವುದು. ಮಧ್ವರ ಜನ್ಮಸ್ಥಳದಲ್ಲಿ 3.5 ಕೋಟಿ ರೂ.ವೆಚ್ಚದಲ್ಲಿ ನಿವೇಶನ ಖರೀದಿಸಿದ್ದು, ಅಲ್ಲಿ ವದ್ಧಾಶ್ರಮ, ಪಾಠಶಾಲೆ ನಿರ್ಮಿಸಲಾಗುವುದು. ಕಂಪ್ಲಿ, ಚಳ್ಳಕೆರೆಯಲ್ಲಿ ಮಠಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಮಾನ್ವಿಯ ಜಗನ್ನಾಥ ದಾಸರ ಸನ್ನಿಧಾನದಲ್ಲಿ 2 ಕೋಟಿ ರೂ.ವೆಚ್ಚದ ನವೀಕೃತ ಕಟ್ಟಡ, ಪಾಕ ಶಾಲೆ, ದ್ವಾರಗಳಿಗೆ ರಜತ ಫಲಕ ಉದ್ಘಾಟನೆ ಕಾರ್ಯಕ್ರಮ ನ.23 ರಿಂದ ನ.25ರವರೆಗೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ