ಆ್ಯಪ್ನಗರ

ಕಾಂಗ್ರೆಸ್‌ನಲ್ಲಿ ದಂಡನಾಯಕರಿದ್ದರೆ, ಬಿಜೆಪಿಯಲ್ಲಿ ದಂಡು ಇದೆ: 'ಕೈ'ಪಡೆ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ನಲ್ಲಿ ದಂಡನಾಯಕರಿದ್ದಾರೆ. ಆದರೆ, ಬಿಜೆಪಿಯಲ್ಲಿ ದಂಡು ಇದೆ. ಬದುಕು ಬದಲಾಯಿಸಲು ರಾಜಕಾರಣ ಮಾಡಬೇಕೇ ಹೊರತು, ಬದುಕುವುದಕ್ಕೆ ರಾಜಕಾರಣ ಮಾಡಬಾರದು ಎಂದು ಕಿಡಿಕಾರಿದರು.

Vijaya Karnataka Web 21 Oct 2020, 6:54 pm
ಬಳ್ಳಾರಿ: ಕಾಂಗ್ರೆಸ್‌ನಲ್ಲಿ ದಂಡನಾಯಕರಿದ್ದಾರೆ. ಆದರೆ, ಬಿಜೆಪಿಯಲ್ಲಿ ದಂಡು ಇದೆ.ಬದುಕು ಬದಲಾಯಿಸಲು ರಾಜಕಾರಣ ಮಾಡಬೇಕೇ ಹೊರತು, ಬದುಕುವುದಕ್ಕೆ ರಾಜಕಾರಣ ಮಾಡಬಾರದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.
Vijaya Karnataka Web ct ravi slams congress leaders over family politics
ಕಾಂಗ್ರೆಸ್‌ನಲ್ಲಿ ದಂಡನಾಯಕರಿದ್ದರೆ, ಬಿಜೆಪಿಯಲ್ಲಿ ದಂಡು ಇದೆ: 'ಕೈ'ಪಡೆ ವಿರುದ್ಧ ಸಿ.ಟಿ.ರವಿ ವಾಗ್ದಾಳಿ


ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ ಪ್ರಜಾಪ್ರಭುತ್ವದ ಹೆಸರಲ್ಲಿ ಕುಟುಂಬ ರಾಜಕಾರಣ ಮಾಡುತ್ತಿದೆ, ರಾಹುಲ್‌ ಗಾಂಧಿ ಹೋದರೆ ಅವರ ಮಕ್ಕಳು ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್, ಎನ್‌ಸಿಪಿ ಸೇರಿ ನಾನಾ ಪ್ರಾದೇಶಿಕ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ತನ್ನದೇ ಪಕ್ಷದ ದಲಿತ ಶಾಸಕನ ಮನೆ ಸುಟ್ಟು, ವಾಹನಗಳನ್ನು ಸುಡುವ ಹಗಲು ನಾಟಕ ಕಾಂಗ್ರೆಸ್ ಪಕ್ಷದಲ್ಲಿದೆ. ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರೇ ಮಾಲೀಕರು ಆಗಿದ್ದಾರೆ. ಬದುಕನ್ನು ಬದಲಾಯಿಸಲು ರಾಜಕಾರಣ ಮಾಡಬೇಕೇ ಹೊರತು, ಬದುಕುವುದಕ್ಕಾಗಿ ರಾಜಕಾರಣ ಮಾಡಬಾರದು ಎಂದರು.

ಸ್ವರ್ಗದಲ್ಲಿರುವ ಇಂದಿರಾ, ರಾಜೀವ್‌ ಗಾಂಧಿ ಬಂದರೂ ಬಿಜೆಪಿ ಸರಕಾರ ಬೀಳಲ್ಲ: ಈಶ್ವರಪ್ಪ

ಶಿರಾ, ಆರ್‌ಆರ್ ನಗರ ಉಪಚುನಾವಣೆ ಮತ್ತು ಎರಡು ಶಿಕ್ಷಕರ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್‌ಗೆ ಒಂದೂ ಸ್ಥಾನವೂ ಸಿಗಲ್ಲ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಸ್‌ವೈ ನೇತೃತ್ವದಲ್ಲಿಯೇ ಮುಂದಿನ ಎಲೆಕ್ಷನ್..!‌‌ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಕಟೀಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ