ಆ್ಯಪ್ನಗರ

ಗಣಿ ನಾಡಲ್ಲಿ 'ತುಂಡಾದ ಕೈ' ಮೂಡಿಸಿದ ಅನುಮಾನ..! ಬಳ್ಳಾರಿ ಜನರನ್ನು ಕೆಲಕಾಲ ಆತಂಕಕ್ಕೆ ತಳ್ಳಿದ ಘಟನೆ

ಗಣಿ ನಾಡಲ್ಲಿ ತುಂಡಾದ ಕೈ ಕೆಲ ಕಾಲ ಜನರನ್ನು ಆತಂಕಕ್ಕೆ ತಳ್ಳಿತ್ತು. ಹೌದು, ವ್ಯಕ್ತಿಯೊಬ್ಬರ ದೇಹದಿಂದ ತುಂಡಾಗಿದ್ದ ಕೈಯನ್ನು ನಾಯಿಗಳು ಎಳೆದಾಡಿದ ಘಟನೆ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.

Vijaya Karnataka Web 25 Jan 2021, 1:41 pm
ಬಳ್ಳಾರಿ: ವ್ಯಕ್ತಿಯೊಬ್ಬರ ದೇಹದಿಂದ ತುಂಡಾಗಿದ್ದ ಕೈ ನಾಯಿಗಳು ಎಳೆದಾಡಿದ ಘಟನೆ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಭಾನುವಾರ ನಡೆದಿದ್ದು, ಅನುಮಾನಕ್ಕೆ ಕಾರಣವಾಯಿತು.
Vijaya Karnataka Web suicide-rep-toi
ಸಾಂದರ್ಭಿಕ ಚಿತ್ರ


ಘಟನೆ ಕೌಲ್‌ಬಜಾರ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೆಲಕಾಲ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ ಪೊಲೀಸರು ತುಂಡಾದ ಕೈ ಬಗ್ಗೆ ತನಿಖೆ ನಡೆಸಿ, ಕಾರಣ ಪತ್ತೆಹಚ್ಚಿದ್ದಾರೆ.

ಘಟನೆ ವಿವರ
ಗುಗ್ಗರಹಟ್ಟಿ ಪ್ರದೇಶದ ನಿವಾಸಿ ದಸ್ತಗಿರ್‌ ಅಹ್ಮದ್‌ ಎಂಬುವವರು ಮುನ್ನಾ ಪ್ಲಾಟ್‌ ಸಮೀಪದಲ್ಲಿ ಜ.21ರಂದು ರಾತ್ರಿ ರೈಲಿನ ಹಳಿಗೆ ಬಿದ್ದಿದ್ದರಿಂದ ಕೈ ತುಂಡಾಗಿದೆ ಎಂದು ಹೇಳಲಾಗಿದೆ. ಆದರೆ, ಇದು ಆತ್ಮಹತ್ಯೆ ಯತ್ನವೋ, ಅಪಘಾತವೋ ತಿಳಿದು ಬಂದಿಲ್ಲ.

ಆನಂತರ ತುಂಡಾಗಿದ್ದ ಕೈ ಸಮೇತ ದಸ್ತಗಿರ್‌ ಅವರನ್ನು ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ವೈದ್ಯರು ಪರಿಶೀಲಿಸಿ, ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಿಸಲು ಸಾಧ್ಯವಿಲ್ಲ ಎಂದು ಮರುದಿನ ಬೆಳಗ್ಗೆ ಖಚಿತಪಡಿಸಿದ್ದರು.
ಆನಂದ್‌ ಸಿಂಗ್‌ ಖಾತೆ ಮತ್ತೆ ಬದಲಾವಣೆ? ಬಳ್ಳಾರಿಯಲ್ಲಿ ಏನು ಹೇಳಿದರು ಸಿಂಗ್‌?ಕೈ ಜೋಡಿಸಲು ಆಗದಿರುವ ಬಗ್ಗೆ ತಿಳಿದುಕೊಂಡ ಬಳಿಕ, ವೈದ್ಯರು ಹೇಳಿದಂತೆ ದಸ್ತಗಿರ್‌ ಅವರ ಸಹೋದರನಿಗೆ ಕೈ ಸ್ಮಶಾನದದಲ್ಲಿ ಹೂಳುವಂತೆ ತಿಳಿಸಿದ್ದರು. ಸಹೋದರ ತುಂಡಾದ ಕೈಯನ್ನು ತಮ್ಮ ಚಾಲಕನಿಗೆ ಕೊಟ್ಟು ಹೂಳಲು ಹೇಳಿದ್ದರು.
ಬಳ್ಳಾರಿ ಎಂದಿಗೂ ಕರ್ನಾಟಕದ್ದೇ, ಇಲ್ಲೇ ಇರಲಿದೆ: ಆಂಧ್ರದ ಗಡಿ ಕ್ಯಾತೆಗೆ ಸೋಮಶೇಖರ್‌ ರೆಡ್ಡಿ ಉತ್ತರಆದರೆ, ಚಾಲಕ ಸ್ಮಶಾನದಲ್ಲಿ ಕೈ ಹೂಳದೇ ಪಕ್ಕದಲ್ಲೇ ಇರುವ ರಾಜಕಾಲುವೆಯಲ್ಲಿ ಬಿಸಾಡಿದ್ದರು. ಮೂರು ದಿನಗಳ ನಂತರ ಕೈ ವಾಸನೆ ಬರಲು ಶುರುವಾಗಿತ್ತು. ತುಂಡಾದ ಕೈಯನ್ನು ನಾಯಿಗಳು ಎಳೆದಾಡಿದಾಗ ಪ್ರಕರಣ ಹೊರಬಿದ್ದಿತ್ತು.
ಗಣಿ ಜಿಲ್ಲೆ ಬಳ್ಳಾರಿಗೆ ಒಲಿದ 'ಪ್ರವಾಸೋದ್ಯಮ'..! ಹಂಪಿ ಅಭಿವೃದ್ಧಿಗೆ ಸಿಗುತ್ತಾ ಹೆಚ್ಚಿನ ಮಾನ್ಯತೆ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ