ಬಳ್ಳಾರಿ: ಸ್ಥಳೀಯ ಡಾ.ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಇತ್ತೀಚೆಗೆ ನೂಪುರ ಲಲಿತಾ ಕಲಾ ಟ್ರಸ್ಟ್, ಶಿವಮೊಗ್ಗದ ಪುಷ್ಪ ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೃತ್ಯೋಲ್ಲಾಸ, ಭರತ ನಾಟ್ಯ ಮತ್ತು ನೃತ್ಯ ರೂಪಕ ಹಮ್ಮಿಕೊಳ್ಳಲಾಗಿತ್ತು. ಮಹಾನಗರ ಪಾಲಿಕೆ ಮೇಯರ್ ಜೆ. ಜಯಲಲಿತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಪಮೇಯರ್ ಬೆಣಕಲ್ ಬಸವರಾಜಗೌಡ, ನೂಪುರ ಲಲಿತಾ ಕಲಾ ಟ್ರಸ್ಟ್ ಅಧ್ಯಕ್ಷ ಕೆ. ಉಜ್ಜನಪ್ಪ, ಕಾರ್ಯದರ್ಶಿ ಡಾ.ವೀಣಾ ಕೆ, ಕಲಾವಿದ ಜಿಲಾನಿ ಬಾಷಾ, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ನಿಷ್ಠಿರುದ್ರಪ್ಪ ಇದ್ದರು. ವಿದೂಷಿ ಪುಷ್ಪಾ ಕೃಷ್ಣಮೂರ್ತಿ, ವಿದ್ವಾನ್ ಗಣೇಶ್ ಮತ್ತು ತಂಡದವರಿಂದ ಭರತನಾಟ್ಯ, ನೃತ್ಯ ರೂಪಕ ಪ್ರದರ್ಶನ ನಡೆಯಿತು.
ಭರತನಾಟ್ಯ, ನೃತ್ಯ ರೂಪಕ ಪ್ರದರ್ಶನ
ಸ್ಥಳೀಯ ಡಾ.ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಇತ್ತೀಚೆಗೆ ನೂಪುರ ಲಲಿತಾ ಕಲಾ ಟ್ರಸ್ಟ್, ಶಿವಮೊಗ್ಗದ ಪುಷ್ಪ ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೃತ್ಯೋಲ್ಲಾಸ, ಭರತ ನಾಟ್ಯ ಮತ್ತು ನೃತ್ಯ ರೂಪಕ ಹಮ್ಮಿಕೊಳ್ಳಲಾಗಿತ್ತು.
ವಿಕ ಸುದ್ದಿಲೋಕ 23 Sep 2016, 9:00 am