ಆ್ಯಪ್ನಗರ

‘ಸಾಲ ಮನ್ನಾ ಮಾಡಬೇಕು’

ರೈತರ ಸಾಲ ಮನ್ನಾ ಮಾಡಬೇಕು. ಮಾಡುವುದಿಲ್ಲ ಎಂದಿರುವುದರಿಂದ ಸಿಎಂ ನಡೆ ವಿರೋಧಿಸಿ ಬಿಜೆಪಿ ಮೇ28 ರಂದು ಬಂದ್‌ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲವಿದೆ ಎಂದು ತುಂಗಭದ್ರಾ ರೈತ ಸಂಘದ ಕುರುಗೋಡು ತಾಲೂಕು ಅಧ್ಯಕ್ಷ ಮುಷ್ಟಗಟ್ಟೆ ಭೀಮನಗೌಡ ತಿಳಿಸಿದರು.

Vijaya Karnataka 28 May 2018, 1:22 pm
ಎಮ್ಮಿಗನೂರು: ರೈತರ ಸಾಲ ಮನ್ನಾ ಮಾಡಬೇಕು. ಮಾಡುವುದಿಲ್ಲ ಎಂದಿರುವುದರಿಂದ ಸಿಎಂ ನಡೆ ವಿರೋಧಿಸಿ ಬಿಜೆಪಿ ಮೇ28 ರಂದು ಬಂದ್‌ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲವಿದೆ ಎಂದು ತುಂಗಭದ್ರಾ ರೈತ ಸಂಘದ ಕುರುಗೋಡು ತಾಲೂಕು ಅಧ್ಯಕ್ಷ ಮುಷ್ಟಗಟ್ಟೆ ಭೀಮನಗೌಡ ತಿಳಿಸಿದರು.
Vijaya Karnataka Web debt waiver
‘ಸಾಲ ಮನ್ನಾ ಮಾಡಬೇಕು’


ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲಿ ಸಾಲ ಮನ್ನಾ ಎಂದಿದ್ದರು. ಈಗ ಮಾಡುವುದಿಲ್ಲ ಎಂದು ಕಾರಣ ಹೇಳುತ್ತಿದ್ದಾರೆ. ಅವರ ನಡೆಯನ್ನು ನಾವು ಖಂಡಿಸುತ್ತೇವೆ ಎಂದರು. ಗ್ರಾಮ ಘಟಕದ ಅಧ್ಯಕ್ಷ ಮ್ಯಾಳೂರು ಶರಣಪ್ಪ ಗೌಡ ಮಾತನಾಡಿ, ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದರು. ರೈತ ಮುಖಂಡರಾದ ಪಿ.ಲೋಕನಗೌಡ ಮುಷ್ಟಗಟ್ಟೆ, ಗೆಣಿಕೆಹಾಳ್‌ ಶಾಂತನಗೌಡ, ಮುಷ್ಟಗಟ್ಟೆ ಕೆ.ವೀರಣ್ಣ ನಾಯಕ, ಬೈರಾಪುರ ರುದ್ರಗೌಡ, ಎಸ್‌.ಪ್ರಭುಲಿಂಗನಗೌಡ, ಎಂ.ಸುರೇಶ, ನಾಗಪ್ಪ ನಾಯಕ, ರಂಜಾನ್‌ಸಾಬ್‌, ಕೆರೆಕೆರೆ ಈಶ್ವರ ನಾಯಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ