ಆ್ಯಪ್ನಗರ

ಉದ್ಯೋಗ ನೀಡಲು ಆಗ್ರಹಿಸಿ ಧರಣಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಕೆಂಚನಗುಡ್ಡ ಗ್ರಾಮದ ನೂರಾರು ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

Vijaya Karnataka 3 Jul 2018, 5:00 am
ಸಿರುಗುಪ್ಪ : ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಕೆಂಚನಗುಡ್ಡ ಗ್ರಾಮದ ನೂರಾರು ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
Vijaya Karnataka Web BLR-BLY2SGP1


ಗ್ರಾಮದ ಮಹಿಳೆ ಮಲ್ಲಮ್ಮ ಮಾತನಾಡಿ, ಸಮರ್ಪಕ ಮಳೆ ಇಲ್ಲ. ನದಿಯಲ್ಲಿ ನೀರಿಲ್ಲ. ಕೃಷಿ ಕಾರ್ಯವೂ ನಿಂತಿದೆ. ಕೂಲಿ ದೊರೆಯದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಗ್ರಾಮ ಪಂಚಾಯಿತಿಯಿಂದ ಗ್ರಾಮದಲ್ಲಿಯೇ ಉದ್ಯೋಗ ಖಾತರಿ ಯೋಜನೆಯಡಿ ಒಂದು ಕುಟುಂಬಕ್ಕೆ 100 ದಿನ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೇವಲ 5ದಿನ ಮಾತ್ರ ಕೆಲಸ ನೀಡಿದರೆ, ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು. ಭತ್ತ ನಾಟಿ ಮಾಡುವವರೆಗೂ ಕೃಷಿ ಕೂಲಿ ಸಿಗುತ್ತಿಲ್ಲ. ನದಿಯಲ್ಲಿ ನೀರು ಇಲ್ಲದ ಪರಿಣಾಮ ಕೃಷಿ ಚಟುವಟಿಕೆಗಳು ನಿಂತಿವೆ. ಕೃಷಿಯನ್ನೇ ನಂಬಿದ ಕುಟುಂಬಗಳು ಕಷ್ಟ ಅನುಭವಿಸುತ್ತಿವೆ. ಗ್ರಾಮಸ್ಥರು ಕೂಲಿ ಕೆಲಸವಿಲ್ಲದೆ ಸಂಷ್ಟದಲ್ಲಿದ್ದು, ಕುಟುಂಬಗಳಿಗೆ ಉದ್ಯೋಗ ನೀಡಬೇಕು. ಕೇವಲ 10ರಿಂದ 17ದಿನ ಮಾತ್ರ ಕೂಲಿ ನೀಡಿದ್ದು, 2019 ಮಾರ್ಚ್‌ ಒಳಗಾಗಿ ಎಲ್ಲ ಕುಟುಂಬಳಿಗೆ ಕೆಲಸ ನೀಡಬೇಕು. ಸಹಾಯ ನಿಧಿ, ಗುರುತಿನ ಚೀಟಿ ನೀಡಬೇಕು, ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಕೂಲಿ ಕೆಲಸಕ್ಕೆ ಮೀಸಲಿಡಬೇಕು, ಯಂತ್ರಗಳನ್ನು ಬಳಸಿ ಸಿಸಿ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ವಿಷಯ ತಿಳಿದು ಧರಣಿ ಸ್ಥಳಕ್ಕೆ ಪಿಡಿಒ ರಾಜೇಶ್ವರಿ ಮಾತನಾಡಿ, ಗ್ರಾಮದಲ್ಲಿ ರೈತರ ಕಾಲುವೆ ಹಾಗೂ ಸರಕಾರಿ ಜಾಗದಲ್ಲಿ ಕಾಮಗಾರಿಯಲ್ಲಿ ಕೈಲಸ ನೀಡಲಾಗಿದೆ. ಗ್ರಾಮದಲ್ಲಿ ಚರಂಡಿ, ಚೆಕ್‌ ಡ್ಯಾಂ, ಸಿಸಿ ರಸ್ತೆ, ಬದುಗಳ ನಿರ್ಮಾಣ, ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪಿಡಿಒ ನೀಡಿದ ಭರವಸೆಯಿಂದ ಮಹಿಳೆಯರು ಧರಣಿ ಕೈ ಬಿಟ್ಟರು. ಈ ಸಂದರ್ಭದಲ್ಲಿ

ಪ್ರಾಂತ ರೈತ ಸಂಘದ ಸುರೇಶ್‌, ಕಾರ್ಮಿಕ ಸಂಘಟನೆಗಳ ಮುಖಂಡರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ