ಆ್ಯಪ್ನಗರ

ಪುರಾತತ್ವ ಇಲಾಖೆಯಿಂದ ಸರ್ವೆ

ಹಂಪಿ ಸ್ಮಾರಕಗಳ ಸಮೀಪದ ಖಾಲಿ ಜಾಗ ಅತಿಕ್ರಮಣ ತಡೆಗೆ ಮುಂದಾಗಿರುವ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ಸರ್ವೆ ನಡೆಸುತ್ತಿದೆ.

ವಿಕ ಸುದ್ದಿಲೋಕ 21 Dec 2016, 8:08 am
ಹೊಸಪೇಟೆ: ಹಂಪಿ ಸ್ಮಾರಕಗಳ ಸಮೀಪದ ಖಾಲಿ ಜಾಗ ಅತಿಕ್ರಮಣ ತಡೆಗೆ ಮುಂದಾಗಿರುವ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ಸರ್ವೆ ನಡೆಸುತ್ತಿದೆ.
Vijaya Karnataka Web department of archaeological survey
ಪುರಾತತ್ವ ಇಲಾಖೆಯಿಂದ ಸರ್ವೆ


ಹೊಸದಿಲ್ಲಿ ಮೂಲದ ಸಂಸ್ಥೆ ಸರ್ವೆ ಹೊಣೆ ಹೊತ್ತಿದೆ. ಪಟ್ಟಾಭಿರಾಮ ದೇಗುಲ, ಪುಷ್ಕರಣಿ, ಆನೆಸಾಲು-ಒಂಟೆಸಾಲು ಹಿಂಬದಿ ಪ್ರದೇಶ ಸೇರಿ ನಾನಾ ಕಡೆ ಈಗಾಗಲೇ ಸರ್ವೆ ಮಾಡಲಾಗಿದೆ. ಸ್ಮಾರಕಗಳ ಬಳಿಯ ಖಾಲಿ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಕೆಲವರಿಂದ ಬೇಡಿಕೆ ಬಂದಿದೆ. ಇನ್ನೂ ಕೆಲವರು ಅತಿಕ್ರಮಣಕ್ಕೂ ಕೈಹಾಕಿದ್ದಾರೆ. ಸ್ಮಾರಕಗಳ ಸಂರಕ್ಷಣೆಗೆ ರಕ್ಷಣಾ ಗೋಡೆ ನಿರ್ಮಿಸಲು ಪುರಾತತ್ವ ಇಲಾಖೆ ಮುಂದಾಗಿದೆ.

ಇಲ್ಲಿನ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ 1986ರಲ್ಲೆ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಮತ್ತೊಂದೆಡೆ ಈ ಪ್ರದೇಶವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೋರ್ ಹಾಗೂ ಬಫರ್ ಝೋನ್ ಎಂದು ವಿಂಗಡಿಸಿದೆ. ಈ ಝೋನ್‌ಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಕಡಿವಾಣ ಹಾಕಲು ಪ್ರಾಧಿಕಾರ ಕೂಡ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದೆ. ಆದರೆ, ಇತ್ತೀಚೆಗೆ ಖಾಲಿ ಜಾಗದಲ್ಲಿ ಕಿರು ಹೋಟೆಲ್‌ಗಳನ್ನು ತೆರೆಯಲಾಗುತ್ತಿದೆ. ಈ ಅತಿಕ್ರಮಣ ತಡೆಗೆ ತನ್ನ ವ್ಯಾಪ್ತಿಯ ಖಾಲಿ ಜಾಗದಲ್ಲಿ ಗೋಡೆ ನಿರ್ಮಿಸಲು ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ಕ್ರಮಕೈಗೊಂಡಿದೆ.

.............
ಹಂಪಿ ಸ್ಮಾರಕಗಳ ಬಳಿಯ ಖಾಲಿ ಜಾಗದ ಸರ್ವೆ ನಡೆಸಲು ಹೊಸದಿಲ್ಲಿ ಮೂಲದ ಸಂಸ್ಥೆಯೊಂದಕ್ಕೆ ಉಸ್ತುವಾರಿ ವಹಿಸಲಾಗಿದೆ. ಸರ್ವೆ ಬಳಿಕ ಜಾಗದ ಸುತ್ತಲೂ ಗೋಡೆ ನಿರ್ಮಿಸಲಾಗುವುದು.

-ರವೀಂದ್ರ, ಭಾರತೀಯ ಪುರಾತತ್ವ ಸರ್ವೆಕ್ಞಣಾ ಇಲಾಖೆಯ ಅಧಿಕಾರಿ, ಹಂಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ