ಮಲ್ಲಿಕಾರ್ಜುನ ಚಿಲ್ಕರಾಗಿ, ಬಳ್ಳಾರಿ
ವಿಧಾನಸಭೆ ಚುನಾವಣೆ ಪ್ರಕ್ರಿಯೆ ವೇಳೆ ನಾನಾ ಕಾರಣಕ್ಕೆ ಸ್ಥಗಿತವಾಗಿದ್ದ ವಸತಿ ಯೋಜನೆಗಳ ಮನೆ ನಿರ್ಮಾಣ, ಸರಕಾರ ರಚನೆಯಾಗಿ ಮೂರು ತಿಂಗಳು ಕಳೆಯುತ್ತಿದ್ದರೂ ಪುನಾರಂಭವಾಗಿಲ್ಲ. ಇದರ ಪರಿಣಾಮ ಯೋಜನೆಗೆ ಆಯ್ಕೆಯಾದ ರಾಜ್ಯದ ಮೂರು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಅತಂತ್ರಕ್ಕೆ ಸಿಲುಕಿದ್ದಾರೆ.
ಬಸವ ವಸತಿ, ಇಂದಿರಾ ಆವಾಸ್, ಅಂಬೇಡ್ಕರ್ ಸೇರಿ ನಾನಾ ವಸತಿ ಯೋಜನೆಗಳಿಗೆ ಇಂತಹ ಪರಿಸ್ಥಿತಿ ಬಂದಿದೆ. ರಾಜೀವ್ಗಾಂಧಿ ವಸತಿ ನಿಗಮದ ಅಧಿಕಾರಿಗಳು, ವಸತಿ ಯೋಜನೆಯ ಮನೆಗಳ ನಿರ್ಮಾಣ ಕಾರ್ಯ ಮರು ಆರಂಭಕ್ಕೆ ಸತತ ಯತ್ನದಲ್ಲಿದ್ದರೂ ಅಗತ್ಯ ಅನುದಾನ, ಸಚಿವರು ಹಾಗೂ ಶಾಸಕರ ಒಪ್ಪಿಗೆ ದೊರೆಯದ್ದರಿಂದ ಇದುವರೆಗೂ 3 ಲಕ್ಷ ಮನೆಗಳು ಆರೇಳು ತಿಂಗಳಿಂದ ಹಿಂದಿನ ಸ್ಥಿತಿಯಲ್ಲೇ ಉಳಿದಿವೆ.
ಶೇ.24ರಷ್ಟೇ ಪ್ರಗತಿ: 2018-19ನೇ ಸಾಲಿನ ನಾನಾ ವಸತಿ ಯೋಜನೆಗಳಡಿ 30 ಜಿಲ್ಲೆಗಳಿಗೆ ಒಟ್ಟು 3 ಲಕ್ಷ 18ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಮೂಲಕ ಆಯ್ಕೆಮಾಡಿದ ಫಲಾನುಭವಿಗಳ ಪಟ್ಟಿಗೆ ರಾಜ್ಯದ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆಡಳಿತ ಅನುಮೋದನೆ ನೀಡಿದೆ. ಕೆಲವೆಡೆ ಕಾಮಗಾರಿ ಆರಂಭಕ್ಕೆ ಆದೇಶ ನೀಡಲಾಗಿದ್ದು, ಚುನಾವಣೆ ಘೋಷಣೆಯಾಗಿದ್ದರಿಂದ ಕೆಲವು ಫಲಾನುಭವಿಗಳಿಗೆ ಇದುವರೆಗೂ ಕಾಮಗಾರಿ ಆದೇಶ ಕೈಸೇರಿಲ್ಲ. ಇದರ ಪರಿಣಾಮ ಕಾಮಗಾರಿ ಆದೇಶ ಪಡೆದವರು ಮನೆ ನಿರ್ಮಿಸಿಕೊಂಡರೂ ಮೊದಲ ಕಂತಿನ ಹಣವಿಲ್ಲದೇ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಇನ್ನೂ ಕೆಲವರಿಗೆ ಕಾಮಗಾರಿ ಆದೇಶ ದೊರೆಯದ ಕಾರಣ ಮನೆಗಳ ನಿರ್ಮಾಣಕ್ಕೆ ಮನಸ್ಸುಮಾಡುತ್ತಿಲ್ಲ. ಒಟ್ಟು ಹಂಚಿಕೆಯಾದ ಮನೆಗಳ ಪೈಕಿ ಜು.29ರ ದಾಖಲೆಗಳ ಪ್ರಕಾರ 76,716 ಮನೆಗಳು ಪೂರ್ಣಗೊಂಡಿವೆ. ಗುರಿಯ ಪೈಕಿ ಕೇವಲ ಶೇ.24ರಷ್ಟು ಪೂರ್ಣವಾಗಿದ್ದು, 2 ಲಕ್ಷ 60ಸಾವಿರಕ್ಕೂ ಹೆಚ್ಚು ಮನೆಗಳು ನಾನಾ ಹಂತಗಳಲ್ಲಿವೆ.
ಬೇಸತ್ತ ಫಲಾನುಭವಿಗಳು:ಹಂಚಿಕೆಯಾದ 3,18,000 ಮನೆಗಳ ಪೈಕಿ 2,46,595 ಮನೆಗಳು ಬುನಾದಿ ಹಂತದಲ್ಲಿದ್ದರೆ, 1,40,219 ಮನೆಗಳು ಚಾವಣಿ ಮಟ್ಟದಲ್ಲೇ ಸ್ಥಗಿತವಾಗಿವೆ. ಇನ್ನುಳಿದ 1,33,955 ಮನೆಗಳು ರೂಫ್ ಹಂತದಲ್ಲಿವೆ. ಈ ಎಲ್ಲ ಮನೆಗಳು ಮೊದಲ, ಎರಡು ಹಾಗೂ ಮೂರನೇ ಕಂತಿನ ಹಣ ಬಿಡುಗಡೆಯಾಗದ್ದರಿಂದ ಕಳೆದ ಐದಾರು ತಿಂಗಳಿಂದ ಸಂಪೂರ್ಣವಾಗಿ ಸ್ಥಗಿತವಾಗಿವೆ. ಮನೆ ಹಣ ಮಂಜೂರು ಮಾಡುವಂತೆ ಫಲಾನುಭವಿಗಳು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕಚೇರಿಗಳಿಗೆ ನಿರಂತರ ಅಲೆದಾಡುತ್ತಿದ್ದಾರೆ.
ಆದರೆ, ನಿಗಮದಿಂದಲೇ ನೇರವಾಗಿ ಹಣ ಬಿಡುಗಡೆಯಾಗುತ್ತದೆ ಎನ್ನುವ ಉತ್ತರವನ್ನು ಅಲ್ಲಿನ ಅಧಿಕಾರಿಗಳು ನೀಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಇದೇ ಉತ್ತರಕ್ಕೆ ಫಲಾನುಭವಿಗಳು ಬೇಸತ್ತಿದ್ದು, ನಿರ್ಮಾಣ ಹಂತದ ಮನೆಗಳು ಬಳಕೆಗೂ ಮುನ್ನವೇ ಪಾಳು ಬೀಳುವ ಆತಂಕ ಮೂಡಿದೆ.
ಚುನಾವಣೆ ಪೂರ್ವ ಮೂರ್ನಾಲ್ಕು ತಿಂಗಳು, ವಸತಿ ಯೋಜನೆಯ ಪ್ರಗತಿಯನ್ನು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕೈಬಿಟ್ಟಿದ್ದರು. ಚುನಾವಣೆ ಪ್ರಕ್ರಿಯೆ ಪೂರ್ಣವಾದ ಬಳಿಕವೂ ಒಂದೂ ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ವಸತಿ ಯೋಜನೆ ಅಧೋಗತಿಗೆ ತಲುಪಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕಳೆದ 2017-18ನೇ ಸಾಲಿನ ಹಳೆಯ ಬಾಕಿ ಸೇರಿ ಪ್ರಸಕ್ತ ವರ್ಷ 3,10,620 ಮನೆಗಳು ಇನ್ನೂ ಆರಂಭವಾಗದೇ ಉಳಿದಿವೆ.
..............
ಕೆಲವೆಡೆ ತಾಂತ್ರಿಕ ತೊಂದರೆ, ಅನುದಾನ ಬಿಡುಗಡೆ ವಿಳಂಬದಿಂದಾಗಿ ಮನೆಗಳ ನಿರ್ಮಾಣ ಕುಂಠಿತವಾಗಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಪ್ರಗತಿ ಹೆಚ್ಚಿಸಲಾಗುತ್ತದೆ. ತಾಂತ್ರಿಕ ಸಮಸ್ಯೆ ಇದ್ದರೆ ಕೂಡಲೇ ಪರಿಹರಿಸಲಾಗುತ್ತದೆ.
-ಮುನೀಷ್ ಮೌದ್ಗಿಲ್, ಪ್ರಭಾರ ಎಂ.ಡಿ. ರಾಜೀವ್ಗಾಂಧಿ ವಸತಿ ನಿಗಮ, ಬೆಂಗಳೂರು
ವಿಧಾನಸಭೆ ಚುನಾವಣೆ ಪ್ರಕ್ರಿಯೆ ವೇಳೆ ನಾನಾ ಕಾರಣಕ್ಕೆ ಸ್ಥಗಿತವಾಗಿದ್ದ ವಸತಿ ಯೋಜನೆಗಳ ಮನೆ ನಿರ್ಮಾಣ, ಸರಕಾರ ರಚನೆಯಾಗಿ ಮೂರು ತಿಂಗಳು ಕಳೆಯುತ್ತಿದ್ದರೂ ಪುನಾರಂಭವಾಗಿಲ್ಲ. ಇದರ ಪರಿಣಾಮ ಯೋಜನೆಗೆ ಆಯ್ಕೆಯಾದ ರಾಜ್ಯದ ಮೂರು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಅತಂತ್ರಕ್ಕೆ ಸಿಲುಕಿದ್ದಾರೆ.
ಬಸವ ವಸತಿ, ಇಂದಿರಾ ಆವಾಸ್, ಅಂಬೇಡ್ಕರ್ ಸೇರಿ ನಾನಾ ವಸತಿ ಯೋಜನೆಗಳಿಗೆ ಇಂತಹ ಪರಿಸ್ಥಿತಿ ಬಂದಿದೆ. ರಾಜೀವ್ಗಾಂಧಿ ವಸತಿ ನಿಗಮದ ಅಧಿಕಾರಿಗಳು, ವಸತಿ ಯೋಜನೆಯ ಮನೆಗಳ ನಿರ್ಮಾಣ ಕಾರ್ಯ ಮರು ಆರಂಭಕ್ಕೆ ಸತತ ಯತ್ನದಲ್ಲಿದ್ದರೂ ಅಗತ್ಯ ಅನುದಾನ, ಸಚಿವರು ಹಾಗೂ ಶಾಸಕರ ಒಪ್ಪಿಗೆ ದೊರೆಯದ್ದರಿಂದ ಇದುವರೆಗೂ 3 ಲಕ್ಷ ಮನೆಗಳು ಆರೇಳು ತಿಂಗಳಿಂದ ಹಿಂದಿನ ಸ್ಥಿತಿಯಲ್ಲೇ ಉಳಿದಿವೆ.
ಶೇ.24ರಷ್ಟೇ ಪ್ರಗತಿ: 2018-19ನೇ ಸಾಲಿನ ನಾನಾ ವಸತಿ ಯೋಜನೆಗಳಡಿ 30 ಜಿಲ್ಲೆಗಳಿಗೆ ಒಟ್ಟು 3 ಲಕ್ಷ 18ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಮೂಲಕ ಆಯ್ಕೆಮಾಡಿದ ಫಲಾನುಭವಿಗಳ ಪಟ್ಟಿಗೆ ರಾಜ್ಯದ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆಡಳಿತ ಅನುಮೋದನೆ ನೀಡಿದೆ. ಕೆಲವೆಡೆ ಕಾಮಗಾರಿ ಆರಂಭಕ್ಕೆ ಆದೇಶ ನೀಡಲಾಗಿದ್ದು, ಚುನಾವಣೆ ಘೋಷಣೆಯಾಗಿದ್ದರಿಂದ ಕೆಲವು ಫಲಾನುಭವಿಗಳಿಗೆ ಇದುವರೆಗೂ ಕಾಮಗಾರಿ ಆದೇಶ ಕೈಸೇರಿಲ್ಲ. ಇದರ ಪರಿಣಾಮ ಕಾಮಗಾರಿ ಆದೇಶ ಪಡೆದವರು ಮನೆ ನಿರ್ಮಿಸಿಕೊಂಡರೂ ಮೊದಲ ಕಂತಿನ ಹಣವಿಲ್ಲದೇ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಇನ್ನೂ ಕೆಲವರಿಗೆ ಕಾಮಗಾರಿ ಆದೇಶ ದೊರೆಯದ ಕಾರಣ ಮನೆಗಳ ನಿರ್ಮಾಣಕ್ಕೆ ಮನಸ್ಸುಮಾಡುತ್ತಿಲ್ಲ. ಒಟ್ಟು ಹಂಚಿಕೆಯಾದ ಮನೆಗಳ ಪೈಕಿ ಜು.29ರ ದಾಖಲೆಗಳ ಪ್ರಕಾರ 76,716 ಮನೆಗಳು ಪೂರ್ಣಗೊಂಡಿವೆ. ಗುರಿಯ ಪೈಕಿ ಕೇವಲ ಶೇ.24ರಷ್ಟು ಪೂರ್ಣವಾಗಿದ್ದು, 2 ಲಕ್ಷ 60ಸಾವಿರಕ್ಕೂ ಹೆಚ್ಚು ಮನೆಗಳು ನಾನಾ ಹಂತಗಳಲ್ಲಿವೆ.
ಬೇಸತ್ತ ಫಲಾನುಭವಿಗಳು:ಹಂಚಿಕೆಯಾದ 3,18,000 ಮನೆಗಳ ಪೈಕಿ 2,46,595 ಮನೆಗಳು ಬುನಾದಿ ಹಂತದಲ್ಲಿದ್ದರೆ, 1,40,219 ಮನೆಗಳು ಚಾವಣಿ ಮಟ್ಟದಲ್ಲೇ ಸ್ಥಗಿತವಾಗಿವೆ. ಇನ್ನುಳಿದ 1,33,955 ಮನೆಗಳು ರೂಫ್ ಹಂತದಲ್ಲಿವೆ. ಈ ಎಲ್ಲ ಮನೆಗಳು ಮೊದಲ, ಎರಡು ಹಾಗೂ ಮೂರನೇ ಕಂತಿನ ಹಣ ಬಿಡುಗಡೆಯಾಗದ್ದರಿಂದ ಕಳೆದ ಐದಾರು ತಿಂಗಳಿಂದ ಸಂಪೂರ್ಣವಾಗಿ ಸ್ಥಗಿತವಾಗಿವೆ. ಮನೆ ಹಣ ಮಂಜೂರು ಮಾಡುವಂತೆ ಫಲಾನುಭವಿಗಳು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕಚೇರಿಗಳಿಗೆ ನಿರಂತರ ಅಲೆದಾಡುತ್ತಿದ್ದಾರೆ.
ಆದರೆ, ನಿಗಮದಿಂದಲೇ ನೇರವಾಗಿ ಹಣ ಬಿಡುಗಡೆಯಾಗುತ್ತದೆ ಎನ್ನುವ ಉತ್ತರವನ್ನು ಅಲ್ಲಿನ ಅಧಿಕಾರಿಗಳು ನೀಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಇದೇ ಉತ್ತರಕ್ಕೆ ಫಲಾನುಭವಿಗಳು ಬೇಸತ್ತಿದ್ದು, ನಿರ್ಮಾಣ ಹಂತದ ಮನೆಗಳು ಬಳಕೆಗೂ ಮುನ್ನವೇ ಪಾಳು ಬೀಳುವ ಆತಂಕ ಮೂಡಿದೆ.
ಚುನಾವಣೆ ಪೂರ್ವ ಮೂರ್ನಾಲ್ಕು ತಿಂಗಳು, ವಸತಿ ಯೋಜನೆಯ ಪ್ರಗತಿಯನ್ನು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕೈಬಿಟ್ಟಿದ್ದರು. ಚುನಾವಣೆ ಪ್ರಕ್ರಿಯೆ ಪೂರ್ಣವಾದ ಬಳಿಕವೂ ಒಂದೂ ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ವಸತಿ ಯೋಜನೆ ಅಧೋಗತಿಗೆ ತಲುಪಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕಳೆದ 2017-18ನೇ ಸಾಲಿನ ಹಳೆಯ ಬಾಕಿ ಸೇರಿ ಪ್ರಸಕ್ತ ವರ್ಷ 3,10,620 ಮನೆಗಳು ಇನ್ನೂ ಆರಂಭವಾಗದೇ ಉಳಿದಿವೆ.
..............
ಕೆಲವೆಡೆ ತಾಂತ್ರಿಕ ತೊಂದರೆ, ಅನುದಾನ ಬಿಡುಗಡೆ ವಿಳಂಬದಿಂದಾಗಿ ಮನೆಗಳ ನಿರ್ಮಾಣ ಕುಂಠಿತವಾಗಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಪ್ರಗತಿ ಹೆಚ್ಚಿಸಲಾಗುತ್ತದೆ. ತಾಂತ್ರಿಕ ಸಮಸ್ಯೆ ಇದ್ದರೆ ಕೂಡಲೇ ಪರಿಹರಿಸಲಾಗುತ್ತದೆ.
-ಮುನೀಷ್ ಮೌದ್ಗಿಲ್, ಪ್ರಭಾರ ಎಂ.ಡಿ. ರಾಜೀವ್ಗಾಂಧಿ ವಸತಿ ನಿಗಮ, ಬೆಂಗಳೂರು