ಆ್ಯಪ್ನಗರ

‘ಕೌಶಲ್ಯ ಜ್ಞಾನ ಬೆಳೆಸಿಕೊಳ್ಳಬೇಕು’

ಉದ್ಯೋಗವಕಾಶಗಳು ಹೆಚ್ಚಿದ್ದರೂ ಸೂಕ್ತ ಕೌಶಲ್ಯ, ಸಂವಹನ ಜ್ಞಾನದ ಕೊರತೆಯಿಂದ ಯುವಜನರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಬೆಳಗಾವಿಯ ತಾಂತ್ರಿಕ ವಿವಿಯ ಕುಲಪತಿ ಡಾ. ಎಚ್. ಮಹೇಶಪ್ಪ ಹೇಳಿದರು.

ವಿಕ ಸುದ್ದಿಲೋಕ 16 Mar 2016, 4:56 am
ಹೊಸಪೇಟೆ; ಉದ್ಯೋಗವಕಾಶಗಳು ಹೆಚ್ಚಿದ್ದರೂ ಸೂಕ್ತ ಕೌಶಲ್ಯ, ಸಂವಹನ ಜ್ಞಾನದ ಕೊರತೆಯಿಂದ ಯುವಜನರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಬೆಳಗಾವಿಯ ತಾಂತ್ರಿಕ ವಿವಿಯ ಕುಲಪತಿ ಡಾ. ಎಚ್. ಮಹೇಶಪ್ಪ ಹೇಳಿದರು.
Vijaya Karnataka Web develop the skills knowledge
‘ಕೌಶಲ್ಯ ಜ್ಞಾನ ಬೆಳೆಸಿಕೊಳ್ಳಬೇಕು’


ನಗರದ ಪ್ರೌಢದೇವರಾಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಮ್ಯಾನೇಜ್‌ಮೆಂಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತ ಾಡಿದರು.ಪದವಿ ಜೊತೆಯಲ್ಲಿ ಕೌಶಲ್ಯ ಕಲೆಗಳನ್ನು ಬೆಳೆಸಿಕೊಳ್ಳಬೇಕು. ಮುಂದಿನ 10 ವರ್ಷಗಳಲ್ಲಿ 10 ಲಕ್ಷ ವತ್ತಿಪರ ಕೌಶಲ್ಯಹೊಂದಿದ ಉದೋಗಿಗಳ ಅಗತ್ಯ ದೇಶಕ್ಕಿದೆ. ಹೀಗಾಗಿ ಅದಕ್ಕೆ ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿ ನಡೆಸಬೇಕು ಎಂದರು.

ಶಾಸಕ ಆನಂದ್ ಸಿಂಗ್ ಮಾತನಾಡಿ, ಪರಿಶ್ರಮದ ಜತೆಗೆ ನೈಪುಣ್ಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ತಮ್ಮ ಗುರಿಯೆಡೆಗೆ ಮುನ್ನಡೆಯಲು ಸಾಧ್ಯ ಎಂದರು.

ಮಹೇಶಪ್ಪರವರ ಪತ್ನಿ ಚೂಡಾಮಣಿ, ಪಿಡಿಐಟಿಯ ಆಡಳಿತ ಮಡಳಿಯ ಅಧ್ಯಕ್ಷ ಗೋನಾಳ ಎಂ.ವಿರೂಪಾಕ್ಷ ಗೌಡ, ಪ್ರಾಂಶುಪಾಲ ಡಾ. ಎಸ್.ಬಿ.ಶಿವಕುಮಾರ, ಎಂ.ಬಿ.ಎ ವಿಭಾಗದ ಮುಖ್ಯಸ್ಥ ಎಸ್.ಪಿ.ರವಿ ಕುಮಾರ್, ಕಾರ್ಯಕ್ರಮದ ಸಂಚಾಲಕ ಎಸ್.ಉದಯ ಶಂಕರ್ ಇದ್ದರು. ಡಾ.ಶರಣಬಸಮ್ಮ ಕಾರ್ಯಕ್ರಮ ನಿರ್ವಹಿಸಿದರು. ಕುಲಪತಿ ದಂಪತಿಯನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ