ಆ್ಯಪ್ನಗರ

ಕಣ್ಣು ದಾನದ ಘೋಷಣೆ ಮಾಡಿದ ಜಿಲ್ಲಾಧಿಕಾರಿ

ಕಣ್ಣುದಾನ ಶ್ರೇಷ್ಠದಾನವಾಗಿದೆ. ಎಲ್ಲರೂ ಕಣ್ಣುದಾನ ಮಾಡಬೇಕು. ನಾನು ಕೂಡ ಸಂಗ್ರಹಣ ಕೇಂದ್ರಕ್ಕೆ ಕಣ್ಣುದಾನ ಮಾಡುವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಡಾ. ವಿ.ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

Vijaya Karnataka 15 Jun 2018, 5:00 am
ಹೊಸಪೇಟೆ : ಕಣ್ಣುದಾನ ಶ್ರೇಷ್ಠದಾನವಾಗಿದೆ. ಎಲ್ಲರೂ ಕಣ್ಣುದಾನ ಮಾಡಬೇಕು. ನಾನು ಕೂಡ ಸಂಗ್ರಹಣ ಕೇಂದ್ರಕ್ಕೆ ಕಣ್ಣುದಾನ ಮಾಡುವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಡಾ. ವಿ.ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.
Vijaya Karnataka Web BLR-BLY14HPT2


ಸ್ಥಳೀಯ ರೋಟರಿ ಕ್ಲಬ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕೋರಿಶೆಟ್ಟಿ ಲಿಂಗಪ್ಪ ರೋಟರಿ ಕಣ್ಣಿನ ಸಂಗ್ರಹಣ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಈ ಕೇಂದ್ರ ಬರೀ ಕಣ್ಣಿನ ಸಂಗ್ರಹ ಕೇಂದ್ರವಾಗದೇ, ಕಣ್ಣಿನ ಬ್ಯಾಂಕ್‌ ಕೂಡ ಆಗಬೇಕು. ಇದಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಜಗತ್ತನ್ನು ನೋಡುವ ಸೌಭಾಗ್ಯ ಎಲ್ಲರಿಗೂ ದೊರೆಯಬೇಕು. ಹೀಗಾಗಿ ನಾನು ಕೂಡ ಕಣ್ಣುದಾನ ಮಾಡುತ್ತಿರುವೆ. ಎಲ್ಲರೂ ಈ ಕಾರ್ಯ ಮಾಡಬೇಕು. ಸಮಾಜ ಸೇವೆ ಮಾಡುವ ಗುಣ ಎಲ್ಲರಲ್ಲೂ ಬೆಳೆಯಬೇಕು. ಸಮಾಜದಲ್ಲಿ ಮಾನವೀಯತೆ ನೆಲೆಗೊಳ್ಳಬೇಕು. ಈ ಮೂಲಕ ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕಟಿಬದ್ಧರಾಗಬೇಕು. ರೋಟರಿ ಕ್ಲಬ್‌ ಉತ್ತಮ ಕೆಲಸ ಮಾಡುತ್ತಿದೆ. ಕಣ್ಣಿನ ಆಸ್ಪತ್ರೆ ಸೇರಿದಂತೆ ನಾನಾ ಸೇವೆಯಲ್ಲಿ ತೊಡಗಿದೆ. ಇಂಥ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. ಸಮಾಜ ಸೇವಕ ಕೋರಿಶೆಟ್ಟಿ ಲಿಂಗಪ್ಪ, ರೋಟರಿ ಕ್ಲಬ್‌ನ ಅಧ್ಯಕ್ಷ ಟಿ.ಗುರುನಾಥ್‌, ಕಾರ್ಯದರ್ಶಿ ಕೆ.ರಾಜೇಶ್‌, ರೋಟರಿ ಕಣ್ಣಿನ ಸಂಗ್ರಹಣ ಕೇಂದ್ರದ ಮುಖ್ಯಸ್ಥ ಅಶ್ವಿನ್‌ ಕೊತ್ತಂಬರಿ, ಕಾರ್ಯದರ್ಶಿ ಬಿ.ಹರ್ಷ ಮತ್ತಿತರರಿದ್ದರು. ರೋಟರಿ ಕ್ಲಬ್‌ನ ಅಬ್ದುಲ್‌ಹಕ್‌ಶೇಠ್‌ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ