ರೇಡಿಯೋಲಜಿ ಟೆಕ್ನಾಲಜಿಸ್ಟ್ ಸಂಘದ ಜಿಲ್ಲಾ ಮಟ್ಟದ ಸಭೆ
ನಗರದ ಸರಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾಜ್ಯ ವೈದ್ಯಕೀಯ ರೇಡಿಯೋಲಜಿ ಟೆಕ್ನಾಲಜಿಸ್ಟ್ ಸಂಘದ ಜಿಲ್ಲಾ ಮಟ್ಟದ ಸಭೆ ನಡೆಯಿತು.
Vijaya Karnataka 5 Mar 2019, 5:20 pm
ಸಿರುಗುಪ್ಪ : ನಗರದ ಸರಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾಜ್ಯ ವೈದ್ಯಕೀಯ ರೇಡಿಯೋಲಜಿ ಟೆಕ್ನಾಲಜಿಸ್ಟ್ ಸಂಘದ ಜಿಲ್ಲಾ ಮಟ್ಟದ ಸಭೆ ನಡೆಯಿತು.
ರಾಜ್ಯ ಉಪಾಧ್ಯಾಕ್ಷ ಕಿಶೋರ್ ಕೊಟ್ಟೂರು ಮಾತನಾಡಿ, ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ತಂತ್ರಜ್ಞರು ಸಂಘದಲ್ಲಿ ನೋಂದಾಯಿಸಿ ಕೊಂಡಿದ್ದು, ಸಂಘವು ತನ್ನ ಸದಸ್ಯರ ಹಕ್ಕುಗಳಿಗಾಗಿ ಹೋರಾಡುವುದರ ಜತೆಗೆ, ಪ್ರಾಥಮಿಕ ಕೇಂದ್ರಗಳಲ್ಲಿ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಕ್ಷ ಕಿರಣ ಚಿತ್ರಗಳನ್ನು ತೆಗೆದು ಕೊಡಲಾಗುತ್ತಿದ್ದು 24 ಗಂಟೆಗಳ ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವ ತಂತ್ರಜ್ಞರಿಗೆ ಆಸ್ಪತ್ರೆ ಆವರಣದಲ್ಲಿ ವಸತಿ ಗೃಹಗಳನ್ನು ಪ್ರತ್ಯೇಕವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ರೇಡಿಯೋಲಜಿ ವಿಭಾಗದಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿಮಾಡಬೇಕು, ಮಾಸಿಕವಾಗಿ ವೇತನ ನಿಗದಿತ ದಿನಾಂಕದಂದು ನೀಡಬೇಕು, ಎನ್.ಪಿ.ಎಸ್.ರದ್ದು ಪಡಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಇಟಗಿಯ ನಿವೃತ್ತ ವೈದ್ಯಕೀಯ ರೇಡಿಯೋಲಜಿ ಟೆಕ್ನಾಲಾಜಿಸ್ಟ್ ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಮೃತ್, ಸಂಘದ ಹಿರಿಯ ಸದಸ್ಯರಾದ ಚಿತ್ರಶೇಖರ, ಯಲ್ಲಪ್ಪ, ಶೇಕ್ಷಾವಲಿ, ಮಧು, ನಿಜಲಿಂಗಪ್ಪ, ನೀಲಮ್ಮ, ಬಸವರಾಜ ಸೇರಿದಂತೆ ಇತರರು ಇದ್ದರು.