ಆ್ಯಪ್ನಗರ

ಹಂಪಿ ಉಪವಿಭಾಗ ಬಳ್ಳಾರಿ ಜಿಲ್ಲೆಗೆ ಸ್ಥಳಾಂತರ, ಅವಳಿ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆ, ವೃತ್ತ ಪುನಾರಚನೆ

ಕಂಪ್ಲಿ ವೃತ್ತ ಕಚೇರಿ ವ್ಯಾಪ್ತಿಗೆ ಒಳಪಡುವ ಕಮಲಾಪುರ ಠಾಣೆ ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಸೇರಿರುವುದರಿಂದ ಕಂಪ್ಲಿ ವೃತ್ತ ರದ್ದಾಗಲಿದ್ದು, ಠಾಣೆ ಮಾತ್ರ ಉಳಿಯಲಿದೆ. ಇಲ್ಲಿನ ಸಿಪಿಐ ಹುದ್ದೆಯನ್ನು ಬಳಸಿಕೊಂಡು ಕಂಪ್ಲಿ ಪೊಲೀಸ್ ಠಾಣೆಯನ್ನು ಪಿಐ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.

Vijaya Karnataka Web 26 Nov 2021, 9:36 pm
ವಿಜಯನಗರ (ಹೊಸಪೇಟೆ): ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಪೊಲೀಸ್ ವ್ಯವ್ಥೆಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಪೊಲೀಸ್ ಉಪ ವಿಭಾಗ, ವೃತ್ತ, ಪೊಲೀಸ್ ಠಾಣೆ ಮತ್ತು ಪೊಲೀಸ್ ಹೊರಠಾಣೆಗಳನ್ನು ಪುನರಚಿಸಿ ಮರು ನಾಮಕರಣಗೊಳಿಸಲು ಸರಕಾರ ಆದೇಶ ಹೊರಡಿಸಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ವಿಜಯನಗರ ಜಿಲ್ಲೆಯಲ್ಲಿರುವ ಹಂಪಿ ಉಪ ವಿಭಾಗದ ಡಿವೈಎಸ್ಪಿ ಹುದ್ದೆ ಮತ್ತು ಸಿಬ್ಬಂದಿಯನ್ನು ಬಳ್ಳಾರಿ ಜಿಲ್ಲೆಗೆ ಸ್ಥಳಾಂತರಿಸಿ, ತೋರಣಗಲ್ಲು ಉಪ ವಿಭಾಗ ರಚಿಸಿ ಸದರಿ ಉಪ ವಿಭಾಗಕ್ಕೆ ಪ್ರಸ್ತುತ ಸಂಡೂರು ವೃತ್ತ ಮತ್ತು ವೃತ್ತದಲ್ಲಿರುವ ಸಂಡೂರು ಠಾಣೆ, ತೋರಣಗಲ್ಲು ಪೊಲೀಸ್ ಠಾಣೆ ಮತ್ತು ಪ್ರಾಸ್ತಾಪಿತ ಚೋರನೂರು ಪೊಲೀಸ್ ಠಾಣೆಗಳನ್ನು ಮತ್ತು ಹಾಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮೀಣ ಉಪ ವಿಭಾಗದಲ್ಲಿರುವ ಕುರುಗೋಡು ವೃತ್ತ ಮತ್ತು ವೃತ್ತದಲ್ಲಿರುವ ಕುರುಗೋಡು ಪೊಲೀಸ್ ಠಾಣೆ ಹಾಗೂ ಕುಡತಿನಿ ಪೊಲೀಸ್ ಠಾಣೆಗಳನ್ನು ಸೇರಿಸಲು ಆದೇಶಿಸಲಾಗಿದೆ.

ವರ್ಷಧಾರೆಗೆ ಬಳ್ಳಾರಿ ಜಿಲ್ಲೆ ತತ್ತರ, ಅಕ್ಷರಶಃ ಮಳೆನಾಡಾದ ಗಣಿನಾಡು

ಗಾದಿಗನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ 10 ಗ್ರಾಮಗಳನ್ನು ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಗುಡೇಕೋಟೆ ಪೊಲೀಸ್ ಠಾಣೆ ಅಧೀನದ ಚೋರನೂರು ಪೊಲೀಸ್ ಉಪ ಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಚೋರನೂರು ಪೊಲೀಸ್ ಠಾಣೆಗೆ ಈಗಾಗಲೇ ಇರುವ ಹಳ್ಳಿಗಳಲ್ಲದೇ ಕೂಡ್ಲಿಗಿ ಮತ್ತು ಗುಡೇಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಒಟ್ಟು 57 ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗುತ್ತದೆ.

ಕಂಪ್ಲಿ ವೃತ್ತ ಕಚೇರಿ ವ್ಯಾಪ್ತಿಗೆ ಒಳಪಡುವ ಕಮಲಾಪುರ ಠಾಣೆ ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಸೇರಿರುವುದರಿಂದ ಕಂಪ್ಲಿ ವೃತ್ತ ರದ್ದಾಗಲಿದ್ದು, ಠಾಣೆ ಮಾತ್ರ ಉಳಿಯಲಿದೆ. ಇಲ್ಲಿನ ಸಿಪಿಐ ಹುದ್ದೆಯನ್ನು ಬಳಸಿಕೊಂಡು ಕಂಪ್ಲಿ ಪೊಲೀಸ್ ಠಾಣೆಯನ್ನು ಪಿಐ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.

ಗಾದಿಗನೂರು ಪೊಲೀಸ್ ಠಾಣೆಯನ್ನು ಗಾದಿಗನೂರು ಪೊಲೀಸ್ ಹೊರ ಠಾಣೆಯನ್ನಾಗ ಮಾರ್ಪಡಿಸಿ, ಹೊಸಪೇಟೆ ಗ್ರಾಮೀಣ ಠಾಣೆ ವ್ಯಾಪ್ತಿಗೆ ಮತ್ತು ಸಂಡೂರು ವೃತ್ತದಲ್ಲಿದ್ದ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಠಾಣೆಯನ್ನು ಕೂಡ್ಲಿಗಿ ಉಪ ವಿಭಾಗದ ಎಚ್.ಬಿ.ಹಳ್ಳಿ ವೃತ್ತಕ್ಕೆ ಸೇರಿಸಲು ಆದೇಶಿಸಲಾಗಿದೆ.

ಹೊಸಪೇಟೆ ಉಪ ವಿಭಾಗದಲ್ಲಿದ್ದ ಹಗರಿಬೊಮ್ಮನಹಳ್ಳಿ ವೃತ್ತ, ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ ಪೊಲೀಸ್ ಠಾಣೆ, ಹಂಪಸಾಗರ ಉಪ ಠಾಣೆ ಕೂಡ್ಲಿಗಿ ಉಪ ವಿಭಾಗ ವ್ಯಾಪ್ತಿಗೆ ಒಳಪಡಲಿವೆ. ಕೊಟ್ಟೂರು ವೃತ್ತ, ಕೊಟ್ಟೂರು ಪೊಲೀಸ್ ಠಾಣೆ, ಹೊಸಳ್ಳಿ ಠಾಣೆ, ಉಜ್ಜಿನಿ ಪೊಲೀಸ್ ಹೊರ ಠಾಣೆಯನ್ನು ಹರಪನಹಳ್ಳಿ ಉಪ ಉಭಾಗದಿಂದ ಬೇರ್ಪಡಿಸಿ ಕೂಡ್ಲಿಗಿ ಉಪ
ವಿಭಾಗಕ್ಕೆ ಸೇರಿಸಲಾಗುತ್ತದೆ.

ಬಳ್ಳಾರಿಯಲ್ಲಿ ನಿರಂತರ ಮಳೆ, ಬೆಳೆ ರಕ್ಷಣೆಗೆ ಪರದಾಡುತ್ತಿರುವ ರೈತರು!

ಹಂಪಿ ಡಿವೈಎಸ್ಪಿ ಕಚೇರಿಯನ್ನು ಹೊಸದಾಗಿ ಪ್ರಾಸ್ತಾಪಿಸಿರುವ ತೋರಣಗಲ್ಲು ಉಪ‌ ವಿಭಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇದರ ವ್ಯಾಪ್ತಿಗೆ ಒಳಪಟ್ಟಿದ್ದ ಹಂಪಿ ವೃತ್ತ, ಹಂಪಿ ಪ್ರವಾಸ, ಸಂಚಾರ ಪೊಲೀಸ್ ಠಾಣೆ ಮತ್ತು ಕಮಲಾಪುರ ಠಾಣೆ ಹಂಪಿ ವೃತ್ತ, ಹೊಸಪೇಟೆ ಉಪ ವಿಭಾಗಕ್ಕೆ ಸೇರ್ಪಡೆಗೊಳ್ಳಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ