ಆ್ಯಪ್ನಗರ

‘ಮತದಾನದಿಂದ ತಪ್ಪಿಸಿಕೊಳ್ಳಬೇಡಿ’

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬರ ಕರ್ತವ್ಯ.ಯಾವುದೇ ಕಾರಣಕ್ಕೂ ಮೇ12ರಂದು ಮತ ಹಾಕದೇ ಹೊರಗೆ ಉಳಿಯಬಾರದು. ಕರ್ತವ್ಯ ಪಾಲನೆ ಮಾಡಬೇಕು ಎಂದು ಸ್ವೀಪ್‌ ಸಮಿತಿ ಮುಖ್ಯಸ್ಥ ಶಿವಪ್ಪ ಸುಬೇದಾರ್‌ ಹೇಳಿದರು.

Vijaya Karnataka 9 May 2018, 5:00 am
ಸಿರುಗುಪ್ಪ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬರ ಕರ್ತವ್ಯ.ಯಾವುದೇ ಕಾರಣಕ್ಕೂ ಮೇ12ರಂದು ಮತ ಹಾಕದೇ ಹೊರಗೆ ಉಳಿಯಬಾರದು. ಕರ್ತವ್ಯ ಪಾಲನೆ ಮಾಡಬೇಕು ಎಂದು ಸ್ವೀಪ್‌ ಸಮಿತಿ ಮುಖ್ಯಸ್ಥ ಶಿವಪ್ಪ ಸುಬೇದಾರ್‌ ಹೇಳಿದರು.
Vijaya Karnataka Web do not miss out on voting
‘ಮತದಾನದಿಂದ ತಪ್ಪಿಸಿಕೊಳ್ಳಬೇಡಿ’


ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಕಾರ್ಯಾಂಗದ ಪರಿಶ್ರಮ ಅತ್ಯವಶ್ಯ. ಅಂತಹ ಕಾರ್ಯಾಂಗವನ್ನು ಸದೃಢಗೊಳಿಸಲು ತಪ್ಪದೇ ಮತ ಚಲಾಯಿಸಬೇಕು. ಆಮಿಷಗಳಿಗೆ ಮಾರು ಹೋಗಬಾರದು. ಬಿಡಿಗಾಸಿಗೆ ಆಸೆ ಬೀಳದೇ ಮತ ಮೌಲ್ಯವನ್ನು ಅರಿತು ಚಲಾಯಿಸಬೇಕು ಎಂದರು. ಗ್ರಾ.ಪಂ.ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲೂ ಮತದಾನ ಜಾಗೃತಿ ಮೂಡಿಸುವ ಜಾಥಾ ನಡೆಸಲಾಗುತ್ತಿದೆ ಎಂದರು. ಸ್ವೀಪ್‌ ಸಮಿತಿ ಸದಸ್ಯ ವಿಜಯರಂಗಾರೆಡ್ಡಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ