ಮಂಜುನಾಥ ಅಯ್ಯಸ್ವಾಮಿ ಬಳ್ಳಾರಿ
ಬಳ್ಳಾರಿ: ಬಿಸಿಲ ಬೇಗೆ ತಾಳದೇ ಜನ ತತ್ತರಿಸಿದ್ದಾರೆ. ನೀರು, ಮೇವಿಲ್ಲದೇ ಜಾನುವಾರು ಬಳಲಿವೆ. ಆದರೆ, ಇಲ್ಲಿ ಶ್ವಾನದಳಕ್ಕೆ ಮಾತ್ರ ಅಂತಹ ಯಾವುದೇ ಬಿಸಿ ತಾಗಿಲ್ಲ. ಕೂಲಾಗಿಯೇ ಬೇಸಿಗೆ ಕಳೆದಿವೆ...!
ಕಳ್ಳತನ ಸೇರಿದಂತೆ ಇತರ ಸನ್ನಿವೇಶದಲ್ಲಿ ಶೋಧನೆಗೆ ಬಳಕೆಯಾಗುವ ಶ್ವಾನದಳಕ್ಕೆ ಇರುವ ಹೆಚ್ಚಿನ ಸೌಲಭ್ಯ ಈ ಅವಕಾಶ ಒದಗಿಸಿದೆ. ಶ್ವಾನದಳಕ್ಕೆ ಸೇರ್ಪಡೆಯಾದ ನಾಯಿಗಳು ಬಹುತೇಕ ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ಹೆಚ್ಚಿನ ಸೌಲಭ್ಯ ಕಲ್ಪಿಸಿಯೇ ಸಾಕಲಾಗುತ್ತದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40 ಡಿ.ಸೆ.ನಿಂದ 42 ಡಿ.ಸೆ.ಗೆ ತಲುಪಿದ ಸನ್ನಿವೇಶದಲ್ಲಿ ಶ್ವಾನಗಳತ್ತ ಹೆಚ್ಚಿನ ಮುತುರ್ವಜಿ ತೋರಲಾಗಿದೆ.
ಎಳನೀರು, ಏರ್ಕೂಲರ್
ನಗರದ ಡಿಎಆರ್ ಮೈದಾನದಲ್ಲಿರುವ ಶ್ವಾನ ದಳದಲ್ಲಿ ಸದಸ್ಯ ಬಲ 6. ಆದರೆ, ಈ ದಳಕ್ಕಾಗಿಯೇ 8 ಪ್ರತ್ಯೇಕ ಕೊಠಡಿಗಳಿವೆ. ಬೇಸಿಗೆಯಲ್ಲಿ ಶ್ವಾನಗಳಿಗೆ ಬಿಸಿಲ ತಾಪ ತಟ್ಟದಂತೆ ಎಲ್ಲ ಕೊಠಡಿ ತಂಪಾಗಿರಿಸಲು ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ವಿಶ್ವಖ್ಯಾತ ಹಂಪಿ, ದರೋಜಿ ಕರಡಿಧಾಮ, ಟಿಬಿಡ್ಯಾಂ, ಕೇಂದ್ರ ಕಾರಗೃಹ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿವೆ. ಐತಿಹಾಸಿಕ ತಾಣಗಳಲ್ಲಿ ಕಳ್ಳತನ ಇಲ್ಲವೇ ಅಹಿತಕರ ಘಟನೆ ಜರುಗುವ ಸುಳಿವು ದೊರೆತಾಗ ಈ ಶ್ವಾನ ದಳ ಬಳಕೆಯಾಗುತ್ತದೆ.
ಪೊಲೀಸ್ ಇಲಾಖೆ ಯಾವುದೇ ತೊಂದರೆಯಾಗದಂತೆ ಶ್ವಾನದಳವನ್ನು ವಿಶೇಷ ಆರೈಕೆ ಮಾಡಿದೆ. ಪ್ರತಿದಿನ ನಾಯಿಗಳಿಗೆ ಎಳನೀರು ಕೊಡಲಾಗುತ್ತಿದೆ. ಗ್ಲುಕಾನ್ ಡಿ.ಶಕ್ತಿವರ್ಧಕ ಪೇಯ ಒದಗಿಸಲಾಗುತ್ತಿದೆ.
ವಿಶೇಷ ಆರೈಕೆ ದಿನಗಳಿವು
ಮಾರ್ಚ್ ಮಧ್ಯದಿಂದ ಎಳನೀರು ಸೇರಿದಂತೆ ಇತರ ದ್ರವ ಪದಾರ್ಥವನ್ನು ಹೆಚ್ಚುವರಿಯಾಗಿ ಶ್ವಾನದಳಕ್ಕೆ ಕೊಡಲಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ಜುಲೈ ಅಂತ್ಯದವರೆಗೂ ಈ ಸೌಲಭ್ಯ ಮುಂದುವರಿಯುತ್ತದೆ. ಒಂದು ನಾಯಿಯ ಆರೈಕೆಗೆ ಇಬ್ಬರು ಎನ್ನುವಂತೆ, 12 ಸಿಬ್ಬಂದಿಯಿದ್ದಾರೆ. ಅಡುಗೆಯವರು, ಸಹಾಯಕರನ್ನು ಒಳಗೊಂಡಂತೆ. ಶ್ವಾನಗಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಮುಖ್ಯಪೇದೆ ರಮೇಶ್.
ದಿನದ ಖರ್ಚು 300 ರೂ.
ಶ್ವಾನದಳದಲ್ಲಿನ ಪ್ರತಿ ನಾಯಿಯ ಆರೈಕೆಗೆ ಪ್ರತಿ ದಿನ 300 ರೂ.ಖರ್ಚು ಮಾಡಲಾಗುತ್ತದೆ. ಶ್ವಾನದಳಕ್ಕೆ ಮೊಟ್ಟೆ, ಹಾಲು ಬ್ರೇಡ್, ಗಂಜಿ (ರವೆ, ಸಬ್ಬಕ್ಕಿ, ರಾಗಿ) ನೀಡಲಾಗುತ್ತದೆ. ಜತೆಗೆ, ಒಂದು ಕೆಜಿಯಷ್ಟು ಮಾಂಸದ ಆಹಾರ ಕೊಡಲಾಗುತ್ತದೆ.
ಜರ್ಮನಿ, ಕೆನಡಾ ತಳಿಗಳಿವು
ತಂಪು ಹವಮಾನ ಹೊಂದಿರುವ ಕೆನಡಾ ಮತ್ತು ಜರ್ಮನಿ ದೇಶದ ತಳಿಯಾದ ಡಾಬರ್ಮನ್ ಪಿಂಚರ್, ಲ್ಯಾಬ್ರಡಾರ್ ನಾಯಿಗಳಿಗೆ ಬಿಸಿಲು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಸಹಜವಾಗಿಯೇ ಅವುಗಳಿಗೆ ಪೂರಕವೆಂಬಂತೆ ಸೌಲಭ್ಯ ಕಲ್ಪಿಸುವ ಅವಶ್ಯಕತೆಯಿದೆ.
ನಾಮಬಲವೂ ಉಂಟು
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೈದಾನದಲ್ಲಿ ಶ್ವಾನ ದಳಕ್ಕೆ ಪ್ರತ್ಯೇಕ ವಿಭಾಗವಿದೆ. ಪೃಥ್ವಿ ಹೆಸರಿನ ಪೊಲೀಸ್ ಶ್ವಾನಕ್ಕೆ 5 ವರ್ಷ. ಕ್ಯಾಂಡಿ, ರಾಖಿ, ಟೈಸನ್, ಬ್ರೂನೊ, ರಾಣಾ ಹೆಸರಿನ ಶ್ವಾನಗಳು 5.5 ವರ್ಷ ವಯಸ್ಸಿನವು. ಅಪರಾಧ ಮತ್ತು ಸ್ಫೋಟಕ ವಸ್ತು ಪತ್ತೆಗೆ 3 ಶ್ವಾನ ವಿಶೇಷವಾಗಿವೆ.
ಮಾದಕ ವಸ್ತು ಪತ್ತೆಗೆ ಬೇಕು
ಜಿಲ್ಲೆಯಲ್ಲಿ ವಿಶ್ವಖ್ಯಾತ ಹಂಪಿ, ದರೋಜಿ ಕರಡಿಧಾಮ, ಟಿಬಿಡ್ಯಾಂ, ಕೇಂದ್ರ ಕಾರಗೃಹ, ಹಂಪಿ ಸೇರಿದಂತೆ ನಾನಾ ಕಡೆಗಳಲ್ಲಿ ಮಾದಕ ವಸ್ತು ಸಾಗಟದ ದೂರುಗಳಿವೆ. ಆದರೆ, ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ನಾಯಿಗಳು ಇಲ್ಲಿ ಇಲ್ಲ. ಅಂತಹ ಚುರುಕುಮತಿ ನಾಯಿಗಾಗಿ ಬೇಡಿಕೆ ಸಲ್ಲಿಸಲಾಗಿದೆ ಎನ್ನುತ್ತಾರೆ ಪೊಲೀಸರು.
ಒಟ್ಟು ಪ್ರಕರಣಗಳು-334
ಶ್ವಾನ ದಳ ಪತ್ತೆ ಹಚ್ಚಿದ ಪ್ರಕರಣ-92
ಬಳ್ಳಾರಿ: ಬಿಸಿಲ ಬೇಗೆ ತಾಳದೇ ಜನ ತತ್ತರಿಸಿದ್ದಾರೆ. ನೀರು, ಮೇವಿಲ್ಲದೇ ಜಾನುವಾರು ಬಳಲಿವೆ. ಆದರೆ, ಇಲ್ಲಿ ಶ್ವಾನದಳಕ್ಕೆ ಮಾತ್ರ ಅಂತಹ ಯಾವುದೇ ಬಿಸಿ ತಾಗಿಲ್ಲ. ಕೂಲಾಗಿಯೇ ಬೇಸಿಗೆ ಕಳೆದಿವೆ...!
ಕಳ್ಳತನ ಸೇರಿದಂತೆ ಇತರ ಸನ್ನಿವೇಶದಲ್ಲಿ ಶೋಧನೆಗೆ ಬಳಕೆಯಾಗುವ ಶ್ವಾನದಳಕ್ಕೆ ಇರುವ ಹೆಚ್ಚಿನ ಸೌಲಭ್ಯ ಈ ಅವಕಾಶ ಒದಗಿಸಿದೆ. ಶ್ವಾನದಳಕ್ಕೆ ಸೇರ್ಪಡೆಯಾದ ನಾಯಿಗಳು ಬಹುತೇಕ ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ಹೆಚ್ಚಿನ ಸೌಲಭ್ಯ ಕಲ್ಪಿಸಿಯೇ ಸಾಕಲಾಗುತ್ತದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40 ಡಿ.ಸೆ.ನಿಂದ 42 ಡಿ.ಸೆ.ಗೆ ತಲುಪಿದ ಸನ್ನಿವೇಶದಲ್ಲಿ ಶ್ವಾನಗಳತ್ತ ಹೆಚ್ಚಿನ ಮುತುರ್ವಜಿ ತೋರಲಾಗಿದೆ.
ಎಳನೀರು, ಏರ್ಕೂಲರ್
ನಗರದ ಡಿಎಆರ್ ಮೈದಾನದಲ್ಲಿರುವ ಶ್ವಾನ ದಳದಲ್ಲಿ ಸದಸ್ಯ ಬಲ 6. ಆದರೆ, ಈ ದಳಕ್ಕಾಗಿಯೇ 8 ಪ್ರತ್ಯೇಕ ಕೊಠಡಿಗಳಿವೆ. ಬೇಸಿಗೆಯಲ್ಲಿ ಶ್ವಾನಗಳಿಗೆ ಬಿಸಿಲ ತಾಪ ತಟ್ಟದಂತೆ ಎಲ್ಲ ಕೊಠಡಿ ತಂಪಾಗಿರಿಸಲು ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ವಿಶ್ವಖ್ಯಾತ ಹಂಪಿ, ದರೋಜಿ ಕರಡಿಧಾಮ, ಟಿಬಿಡ್ಯಾಂ, ಕೇಂದ್ರ ಕಾರಗೃಹ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿವೆ. ಐತಿಹಾಸಿಕ ತಾಣಗಳಲ್ಲಿ ಕಳ್ಳತನ ಇಲ್ಲವೇ ಅಹಿತಕರ ಘಟನೆ ಜರುಗುವ ಸುಳಿವು ದೊರೆತಾಗ ಈ ಶ್ವಾನ ದಳ ಬಳಕೆಯಾಗುತ್ತದೆ.
ಪೊಲೀಸ್ ಇಲಾಖೆ ಯಾವುದೇ ತೊಂದರೆಯಾಗದಂತೆ ಶ್ವಾನದಳವನ್ನು ವಿಶೇಷ ಆರೈಕೆ ಮಾಡಿದೆ. ಪ್ರತಿದಿನ ನಾಯಿಗಳಿಗೆ ಎಳನೀರು ಕೊಡಲಾಗುತ್ತಿದೆ. ಗ್ಲುಕಾನ್ ಡಿ.ಶಕ್ತಿವರ್ಧಕ ಪೇಯ ಒದಗಿಸಲಾಗುತ್ತಿದೆ.
ವಿಶೇಷ ಆರೈಕೆ ದಿನಗಳಿವು
ಮಾರ್ಚ್ ಮಧ್ಯದಿಂದ ಎಳನೀರು ಸೇರಿದಂತೆ ಇತರ ದ್ರವ ಪದಾರ್ಥವನ್ನು ಹೆಚ್ಚುವರಿಯಾಗಿ ಶ್ವಾನದಳಕ್ಕೆ ಕೊಡಲಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ಜುಲೈ ಅಂತ್ಯದವರೆಗೂ ಈ ಸೌಲಭ್ಯ ಮುಂದುವರಿಯುತ್ತದೆ. ಒಂದು ನಾಯಿಯ ಆರೈಕೆಗೆ ಇಬ್ಬರು ಎನ್ನುವಂತೆ, 12 ಸಿಬ್ಬಂದಿಯಿದ್ದಾರೆ. ಅಡುಗೆಯವರು, ಸಹಾಯಕರನ್ನು ಒಳಗೊಂಡಂತೆ. ಶ್ವಾನಗಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಮುಖ್ಯಪೇದೆ ರಮೇಶ್.
ದಿನದ ಖರ್ಚು 300 ರೂ.
ಶ್ವಾನದಳದಲ್ಲಿನ ಪ್ರತಿ ನಾಯಿಯ ಆರೈಕೆಗೆ ಪ್ರತಿ ದಿನ 300 ರೂ.ಖರ್ಚು ಮಾಡಲಾಗುತ್ತದೆ. ಶ್ವಾನದಳಕ್ಕೆ ಮೊಟ್ಟೆ, ಹಾಲು ಬ್ರೇಡ್, ಗಂಜಿ (ರವೆ, ಸಬ್ಬಕ್ಕಿ, ರಾಗಿ) ನೀಡಲಾಗುತ್ತದೆ. ಜತೆಗೆ, ಒಂದು ಕೆಜಿಯಷ್ಟು ಮಾಂಸದ ಆಹಾರ ಕೊಡಲಾಗುತ್ತದೆ.
ಜರ್ಮನಿ, ಕೆನಡಾ ತಳಿಗಳಿವು
ತಂಪು ಹವಮಾನ ಹೊಂದಿರುವ ಕೆನಡಾ ಮತ್ತು ಜರ್ಮನಿ ದೇಶದ ತಳಿಯಾದ ಡಾಬರ್ಮನ್ ಪಿಂಚರ್, ಲ್ಯಾಬ್ರಡಾರ್ ನಾಯಿಗಳಿಗೆ ಬಿಸಿಲು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಸಹಜವಾಗಿಯೇ ಅವುಗಳಿಗೆ ಪೂರಕವೆಂಬಂತೆ ಸೌಲಭ್ಯ ಕಲ್ಪಿಸುವ ಅವಶ್ಯಕತೆಯಿದೆ.
ನಾಯಿಗಳು ಅನ್ನುವುದಕ್ಕಿಂತ ನಮ್ಮ ಮಕ್ಕಳಂತೆ ಅವುಗಳನ್ನು ಆರೈಕೆ ಮಾಡುತ್ತೆವೆ. ನಾವು ಕಣ್ಣಿಗೆ ಬೀಳದಿದ್ದಾಗ ಊಟ ಮಾಡದೇ ರೋದಿಸುತ್ತವೆ. ನಾಯಿಗಳು ಪ್ರಕರಣ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ನಿವೃತ್ತಿಯಾದಾಗ ತುಂಬಾ ನೋವಾಗುತ್ತದೆ.
ನಾಮಬಲವೂ ಉಂಟು
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೈದಾನದಲ್ಲಿ ಶ್ವಾನ ದಳಕ್ಕೆ ಪ್ರತ್ಯೇಕ ವಿಭಾಗವಿದೆ. ಪೃಥ್ವಿ ಹೆಸರಿನ ಪೊಲೀಸ್ ಶ್ವಾನಕ್ಕೆ 5 ವರ್ಷ. ಕ್ಯಾಂಡಿ, ರಾಖಿ, ಟೈಸನ್, ಬ್ರೂನೊ, ರಾಣಾ ಹೆಸರಿನ ಶ್ವಾನಗಳು 5.5 ವರ್ಷ ವಯಸ್ಸಿನವು. ಅಪರಾಧ ಮತ್ತು ಸ್ಫೋಟಕ ವಸ್ತು ಪತ್ತೆಗೆ 3 ಶ್ವಾನ ವಿಶೇಷವಾಗಿವೆ.
ನಗರ ಹಾಗೂ ಜಿಲ್ಲೆಯಲ್ಲಿ ಹಂಪಿ ಸೇರಿ ಇತರ ಕಡೆ ಮಾದಕ ವಸ್ತು ಸಾಗಾಟದ ಬಗ್ಗೆ ಆಗಾಗ ದೂರುಗಳು ಬಂದಿವೆ. ಇಲಾಖೆ ಅಗತ್ಯಕ್ಕೆ ತಕ್ಕಂತೆ ಮಾದಕ ವಸ್ತು ಪತ್ತೆ ಹಚ್ಚುವ ಕೆಲಸಕ್ಕಾಗಿ ಇನ್ನೊಂದು ನಾಯಿಗಾಗಿ ಬೇಡಿಕೆ ಸಲ್ಲಿಸಲಾಗುತ್ತಿದೆ.
ಮಾದಕ ವಸ್ತು ಪತ್ತೆಗೆ ಬೇಕು
ಜಿಲ್ಲೆಯಲ್ಲಿ ವಿಶ್ವಖ್ಯಾತ ಹಂಪಿ, ದರೋಜಿ ಕರಡಿಧಾಮ, ಟಿಬಿಡ್ಯಾಂ, ಕೇಂದ್ರ ಕಾರಗೃಹ, ಹಂಪಿ ಸೇರಿದಂತೆ ನಾನಾ ಕಡೆಗಳಲ್ಲಿ ಮಾದಕ ವಸ್ತು ಸಾಗಟದ ದೂರುಗಳಿವೆ. ಆದರೆ, ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ನಾಯಿಗಳು ಇಲ್ಲಿ ಇಲ್ಲ. ಅಂತಹ ಚುರುಕುಮತಿ ನಾಯಿಗಾಗಿ ಬೇಡಿಕೆ ಸಲ್ಲಿಸಲಾಗಿದೆ ಎನ್ನುತ್ತಾರೆ ಪೊಲೀಸರು.
ಒಟ್ಟು ಪ್ರಕರಣಗಳು-334
ಶ್ವಾನ ದಳ ಪತ್ತೆ ಹಚ್ಚಿದ ಪ್ರಕರಣ-92