ಆ್ಯಪ್ನಗರ

ವಿದ್ಯುತ್ ಕಳವು: ಜೆಸ್ಕಾಂನಿಂದ ಶಾಕ್

ತಾಲೂಕಿನ ದೂಪದಹಳ್ಳಿ ತಾಂಡಾದಲ್ಲಿ ಕಳ್ಳತನದಿಂದ ಮನೆಗಳಿಗೆ ವಿದ್ಯುತ್ ಬಳಕೆ ಮಾಡಿಕೊಂಡಿದ್ದ 221 ಜನರ ವಿರುದ್ದ ಜೆಸ್ಕಾಂನ ಜಿಲ್ಲಾ ಜಾಗತ ದಳದ ಪೊಲೀಸರು 3 ವರ್ಷದ ನಂತರ ಬಂಧನದ ವಾರೆಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕದ್ದವರಲ್ಲಿ ಭೀತಿ ಮೂಡಿದೆ.

Vijaya Karnataka 30 Jun 2018, 12:00 am
ಕೊಟ್ಟೂರು (ಬಳ್ಳಾರಿ): ತಾಲೂಕಿನ ದೂಪದಹಳ್ಳಿ ತಾಂಡಾದಲ್ಲಿ ಕಳ್ಳತನದಿಂದ ಮನೆಗಳಿಗೆ ವಿದ್ಯುತ್ ಬಳಕೆ ಮಾಡಿಕೊಂಡಿದ್ದ 221 ಜನರ ವಿರುದ್ದ ಜೆಸ್ಕಾಂನ ಜಿಲ್ಲಾ ಜಾಗತ ದಳದ ಪೊಲೀಸರು 3 ವರ್ಷದ ನಂತರ ಬಂಧನದ ವಾರೆಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕದ್ದವರಲ್ಲಿ ಭೀತಿ ಮೂಡಿದೆ.
Vijaya Karnataka Web electricity stolen shock from jesscom
ವಿದ್ಯುತ್ ಕಳವು: ಜೆಸ್ಕಾಂನಿಂದ ಶಾಕ್


ತಾಂಡಾಕ್ಕೆ 2015ರ ಆಗಸ್ಟ್‌ನಲ್ಲಿ ಭೇಟಿ ನೀಡಿದ್ದ ಜಿಲ್ಲಾ ಜೆಸ್ಕಾಂ ಜಾಗತ ದಳದ ಪೊಲೀಸರು, ವಿದ್ಯುತ್ ಕಂಬಕ್ಕೆ ಕೊಕ್ಕೆ ಹಾಕಿ ಕಳ್ಳತನದಿಂದ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿದ್ದ 221 ಜನರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಕಳವು ಮಾಡಿದ್ದಕ್ಕಾಗಿ ಪ್ರತಿಯೊಬ್ಬರಿಗೆ 14,491 ರೂ.ಗಳ ದಂಡ ವಿಧಿಸಿ, 15 ದಿನದಲ್ಲಿ ಪಾವತಿಸಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ಜಾರಿ ಮಾಡಿದ್ದರು. ಜನ ಕ್ಯಾರೆ ಎಂದಿರಲಿಲ್ಲ. ಆದರೆ, ಈಗ 3 ವರ್ಷಗಳ ನಂತರ ಜೆಸ್ಕಾಂ ಜಾಗೃತ ದಳ, ದಂಡ ಕಟ್ಟದವರ ಬೆನ್ನು ಬಿದ್ದಿದೆ.

ಜೆಸ್ಕಾಂ ಪೊಲೀಸ್ ಜಾಗತ ದಳ ಎಲ್ಲರಿಗೂ ಬಂಧನದ ವಾರೆಂಟ್ ಜಾರಿ ಮಾಡಿದೆ. ನೋಟಿಸ್‌ಗೆ ಬೆದರಿರುವ ಜನರ ಪೈಕಿ ಕೆಲವರು ಇಲ್ಲಿನ ಜೆಸ್ಕಾಂ ಕಚೇರಿಗೆ ಬಂದು ದಂಡದ ಹಣ ಪಾವತಿಸುತ್ತಿದ್ದಾರೆ. ಇದೀಗ 221 ಜನರ ಪೈಕಿ ಅಂದಾಜು 40 ಜನರು ದಂಡ ಮೊತ್ತ ಪಾವತಿಸಿ ರಸೀದಿಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ಬಂಧನದಿಂದ ಪಾರಾಗಿದ್ದಾರೆ.

.............

ದೂಪದಹಳ್ಳಿ ತಾಂಡಾದಲ್ಲಿ ವಿದ್ಯುತ್ ಕಳ್ಳತನ ಮಾಡುತ್ತಿದ್ದ 221 ಜನರ ವಿರುದ್ಧ 2015ರ ಆಗಸ್ಟ್‌ನಲ್ಲಿ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿಕೊಂಡಿದ್ದ ಜಿಲ್ಲಾ ಜೆಸ್ಕಾಂ ಜಾಗತ ದಳದ ಪೊಲೀಸರು, ದಂಡ ಪಾವತಿಸಲು ಹೇಳಿದ್ದರು. ಇನ್ನೂ ಅನೇಕರು ದಂಡ ಪಾವತಿಸುತ್ತಿದ್ದಾರೆ.

-ಜಿ.ಕೊಟ್ರಪ್ಪ, ಎಇ, ಜೆಸ್ಕಾಂ, ಕೊಟ್ಟೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ