ಆ್ಯಪ್ನಗರ

ಪೊಲೀಸರೆಂದು ನಂಬಿಸಿ ಚಿನ್ನಾಭರಣ ದೋಚಿ ಪರಾರಿ

ಪೊಲೀಸರೆಂದು ನಂಬಿಸಿದ ಅಪರಿಚಿತರಿಬ್ಬರು, ವ್ಯಕ್ತಿಯ ಬಳಿಯಿದ್ದ 57 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

ವಿಕ ಸುದ್ದಿಲೋಕ 12 Mar 2017, 8:04 am

ಹೊಸಪೇಟೆ: ಪೊಲೀಸರೆಂದು ನಂಬಿಸಿದ ಅಪರಿಚಿತರಿಬ್ಬರು, ವ್ಯಕ್ತಿಯ ಬಳಿಯಿದ್ದ 57 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

ಎಂ.ಜೆ.ನಗರದ ನಿವಾಸಿ ತಾಯಣ್ಣ (64) ಅವರು ವಂಚನೆಗೊಳಗಾದವರು. ತಮ್ಮ ಸಲೂನಿನಿಂದ ಮನೆಯತ್ತ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಾದ ಅಪರಿಚಿತರಿಬ್ಬರು, ತಾವು ಪೊಲೀಸರೆಂದು ನಂಬಿಸಿದ್ದಾರೆ.

Vijaya Karnataka Web fake police looted 57gram gold
ಪೊಲೀಸರೆಂದು ನಂಬಿಸಿ ಚಿನ್ನಾಭರಣ ದೋಚಿ ಪರಾರಿ


ಈ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿದೆ. ತಮ್ಮ ಬಳಿಯಿರುವ ಚಿನ್ನದ ಆಭರಣ ಬಿಚ್ಚಿಕೊಟ್ಟರೆ, ಅವುಗಳನ್ನು ಪೊಟ್ಟಣದಲ್ಲಿ ಹಾಕಿ ಕೊಡುವುದಾಗಿ ತಿಳಿಸಿದ್ದಾರೆ.

ಇದನ್ನು ನಂಬಿದ ತಾಯಣ್ಣ, ತಮ್ಮ ಬಳಿಯಿದ್ದ 1ಲಕ್ಷದ 45 ಸಾವಿರ ರೂ. ಮೌಲ್ಯದ ಚಿನ್ನದ ಉಂಗುರ, ಬ್ರಾಸ್‌ಲೆಟ್‌, ಚಿನ್ನದ ಸರ ಬಿಚ್ಚಿ ಕೊಟ್ಟಿದ್ದಾರೆ.

ಅಪರಿಚಿತರು ಕೊಟ್ಟ ಪೊಟ್ಟಣವನ್ನು ಮನೆಗೆ ತೆರಳಿದ ನಂತರ ಬಿಚ್ಚಿನೋಡಿದಾಗ, ಅದರಲ್ಲಿ ಕಲ್ಲಿನ ಚೂರುಗಳಿದ್ದುದು ಬೆಳಕಿಗೆ ಬಂದಿದೆ. ನಂತರ ಅವರು, ಬಡಾವಣೆ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ಆಧರಿಸಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ