ಆ್ಯಪ್ನಗರ

ಸುಳ್ಳು ಬಿತ್ತಿ, ಭಯ ಬೆಳೆಲಾಗುತ್ತಿದೆ : ಪ್ರೊ.ನಾಯಕ್‌

ಜ್ಯೋತಿಷಿಗಳು ಗ್ರಹಣದಿಂದ ಒಳ್ಳೆದಾಗುವುದಿಲ್ಲ ಎಂದು ಹೇಳುತ್ತಾರೆ. ಹಾಗಾದಾರೆ ದೊಡ್ಡ ಯಾಗ ಮಾಡಿ ಗ್ರಹಣ ಆಗದಂತೆ ಮಾಡಲಿ. ಅದು ಸಾಧ್ಯವಿಲ್ಲ. ಅಲ್ಲದೇ, ಕೆಲ ಸ್ವಾಮೀಜಿಗಳು ಗ್ರಹಣ ಸಂದರ್ಭದಲ್ಲಿ ಆಹಾರ ವಿಷವಾಗುತ್ತದೆ ಎಂದು ಹೇಳಿದರು.

Vijaya Karnataka 11 Aug 2018, 5:00 am
ಹೊಸಪೇಟೆ : ಜ್ಯೋತಿಷಿಗಳು ಗ್ರಹಣದಿಂದ ಒಳ್ಳೆದಾಗುವುದಿಲ್ಲ ಎಂದು ಹೇಳುತ್ತಾರೆ. ಹಾಗಾದಾರೆ ದೊಡ್ಡ ಯಾಗ ಮಾಡಿ ಗ್ರಹಣ ಆಗದಂತೆ ಮಾಡಲಿ. ಅದು ಸಾಧ್ಯವಿಲ್ಲ. ಅಲ್ಲದೇ, ಕೆಲ ಸ್ವಾಮೀಜಿಗಳು ಗ್ರಹಣ ಸಂದರ್ಭದಲ್ಲಿ ಆಹಾರ ವಿಷವಾಗುತ್ತದೆ ಎಂದು ಹೇಳಿದರು. ಇದೆಲ್ಲಾ ಶುದ್ಧ ಸುಳ್ಳು. ಗ್ರಹಣ ಎಂಬುದು ಪ್ರಕೃತಿಯ ಸೊಬಗು. ಇತ್ತೀಚೆಗೆ ಕೆಲವರು ಸುಳ್ಳು ಬಿತ್ತಿ, ಭಯ ಬೆಳೆಯುತ್ತಿದ್ದಾರೆ ಎಂದು ವಿಚಾರವಾದಿ ಪ್ರೊ.ನರೇಂದ್ರ ನಾಯಕ್‌ ಕಳವಳ ವ್ಯಕ್ತಪಡಿಸಿದರು.
Vijaya Karnataka Web BLR-BLR10HPT-01


ನಗರದ ಶಂಕರ್‌ ಆನಂದ್‌ ಸಿಂಗ್‌ ಸರಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಭಾರತ ಜ್ಞಾನ ವಿಜ್ಞಾನ ತಾಲೂಕು ಸಮಿತಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯಲ್ಲಿ ಮಾತನಾಡಿದರು. ಗ್ರಹಣದ ಬಗ್ಗೆ ಟಿ.ವಿ.ಮಾಧ್ಯಮಗಳ ಮೂಲಕ ಜನರಲ್ಲಿ ತಪ್ಪು ಮನೋಭಾವನೆ ಮೂಡಿಸಲಾಗುತ್ತಿದೆ. ಅಲ್ಲದೇ, ಜ್ಯೋತಿಷಿಗಳು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಕೆಲವರು ಗ್ರಹಣದ ಮುಂಚೆ ಪ್ರಳಯ, ಭೂಕಂಪ ಮತ್ತು ಅಹಿತಕರ ಘಟನೆಗಳು ಸಂಭವಿಸುತ್ತವೆ ಎಂದು ಹೇಳಿಕೊಂಡಿದ್ದರು. ಆದರೆ, ಅದ್ಯಾವ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಜನರು ಸುಳ್ಳು, ಮೌಢ್ಯ ವಿಚಾರಗಳನ್ನು ಪ್ರಶ್ನಿಸಬೇಕು. ಅಂದಾಗ ಮಾತ್ರ ವದಂತಿ ಹಬ್ಬಿಸುವ, ಶೋಷಣೆ ಮಾಡಿ ಲಾಭ ಮಾಡಿಕೊಳ್ಳುವ ಹಿತಾಸಕ್ತಿಗಳು ಜಾಗ ಕಾಲಿ ಮಾಡುತ್ತವೆ ಎಂದರು. ಸಮಿತಿಯ ತಾಲೂಕು ಘಟಕದ ಅಧ್ಯಕ್ಷೆ ಎಚ್‌.ಸೌಭಾಗ್ಯ, ಪ್ರಾಚಾರ್ಯ ಕನಕೇಶವಮೂರ್ತಿ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ