ಆ್ಯಪ್ನಗರ

ಸೆಪ್ಟೆಂಬರ್ 21ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತಸಂಘದಿಂದ ನಿರ್ಧಾರ

ಸೆಪ್ಟೆಂಬರ್ 22ರಿಂದ ಅಧಿವೇಶನ ಮುಗಿಯುವವರೆಗೂ ಬೆಂಗಳೂರಿನಲ್ಲಿ ಕಂಪ್ಲಿಸಕ್ಕರೆ ಕಾರ್ಖಾನೆ 176 ಎಕರೆ ಭೂಮಿ ಪರಭಾರೆ ಕುರಿತು, ರಸಗೊಬ್ಬರ ಅಭಾವ, ಕಾಯಂ ಭತ್ತ ಖರೀದಿ ಕೇಂದ್ರ ತೆರೆಯುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

Vijaya Karnataka Web 12 Sep 2020, 4:51 pm
ಕಂಪ್ಲಿ: ಭೂ ಸುಧಾರಣೆ, ಎಪಿಎಂಸಿ ಕಾಯಿದೆ ಸೇರಿ ಹಲವು ಕಾಯಿದೆಗಳನ್ನು ಸುಗ್ರೀವಾಜ್ಞೆ ಮೂಲಕ ತಂದಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 21ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.
Vijaya Karnataka Web Kodihalli


ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿ ವಿರುದ್ಧ ನೌಕರನೊಬ್ಬನ ಏಕಾಂಗಿ ಹೋರಾಟ..!

ಇಲ್ಲಿನ ಎಪಿಎಂಸಿ ಆವರಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಏರ್ಪಡಿಸಿದ್ದ ರೈತರ ಬೃಹತ್‌ ಸಮಾವೇಶ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಬಳಿಕ ಸೆಪ್ಟೆಂಬರ್ 22ರಿಂದ ಅಧಿವೇಶನ ಮುಗಿಯುವವರೆಗೂ ಬೆಂಗಳೂರಿನಲ್ಲಿ ಕಂಪ್ಲಿಸಕ್ಕರೆ ಕಾರ್ಖಾನೆ 176 ಎಕರೆ ಭೂಮಿ ಪರಭಾರೆ ಕುರಿತು, ರಸಗೊಬ್ಬರ ಅಭಾವ, ಕಾಯಂ ಭತ್ತ ಖರೀದಿ ಕೇಂದ್ರ ತೆರೆಯುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ವಿವರಿಸಿದರು.

ಕೊರೊನಾ‌ ನೆಪ ಮಾಡಿ ಜವಾಬ್ದಾರಿಯಿಂದ‌‌ ನುಣುಚಿಕೊಳ್ಳದಿರಿ: ಅಧಿಕಾರಿಗಳಿಗೆ

ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್‌, ಪ್ರಮುಖರಾದ ಖಾಸಿಂಸಾಬ್‌, ಕೊಟ್ಟೂರು ರಮೇಶ್‌, ಚೆಲ್ಲಾವೆಂಕಟನಾಯುಡು, ಎಚ್‌.ಶಿವಶಂಕರಗೌಡ, ಜಿ.ಲಿಂಗನಗೌಡ, ಬಿ.ವಿ.ಗೌಡ, ಬಿ.ನಾರಾಯಣಪ್ಪ, ಬೈರೇಗೌಡ, ಭರಮಪ್ಪ, ವಿ.ಟಿ.ನಾಗರಾಜ, ಡಿ.ಮುರಾರಿ, ಕೆ.ಸುದರ್ಶನ, ಮಲ್ಲನಗೌಡ, ಕುರಿ ಹುಸೇನಪ್ಪ, ವೆಂಕೋಬಣ್ಣ ಉಪಸ್ಥಿತರಿದ್ದರು.

ಕೊರೊನಾರ್ಭಟದ ನಡುವಲ್ಲೂ ತೀರ್ಥಯಾತ್ರೆ ಭರಾಟೆ: ಬಳ್ಳಾರಿ ದೇಗುಲಗಳಲ್ಲಿ ಜನವೋ ಜನ..!

ಇದಕ್ಕೂ ಮೊದಲು ಕಲ್ಮಠದ ಬಳಿಯಿಂದ ಚಕ್ಕಡಿಯಲ್ಲಿ ಮೆರವಣಿಗೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ