ಆ್ಯಪ್ನಗರ

ವಿದ್ಯುತ್‌ಗಾಗಿ ರೈತರ ಪ್ರತಿಭಟನೆ

ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್‌ ಸರಬರಾಜಿಗೆ ಒತ್ತಾಯಿಸಿ ತಾಲೂಕಿನ ಕಮಲಾಪುರದ ಜೆಸ್ಕಾಂ ಕಚೇರಿ ಎದುರು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಬಳ್ಳಾರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 6 Jun 2018, 5:00 am
ಹೊಸಪೇಟೆ : ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್‌ ಸರಬರಾಜಿಗೆ ಒತ್ತಾಯಿಸಿ ತಾಲೂಕಿನ ಕಮಲಾಪುರದ ಜೆಸ್ಕಾಂ ಕಚೇರಿ ಎದುರು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಬಳ್ಳಾರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web BLR-BLY5HPT12


ತಾಲೂಕಿನ ಚಿನ್ನಾಪುರ, ಹೊಸ ಚಿನ್ನಾಪುರ, ನಲ್ಲಾಪುರ, ಎನ್‌.ಆರ್‌.ಕ್ಯಾಂಪ್‌, ಸೀತಾರಾಮ ತಾಂಡಾ ಗ್ರಾಮಗಳ ರೈತರ ಜಮೀನುಗಳಿಗೆ ಹಾಗೂ ಗ್ರಾಮಗಳಿಗೆ ಸಮರ್ಪಕ ವಿದ್ಯುತ್‌ ಒದಗಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್‌ ಮಾತನಾಡಿ, ರೈತರಿಗೆ ಸರಿಯಾಗಿ ಸಮರ್ಪಕ ವಿದ್ಯುತ್‌ ನೀಡುತ್ತಿಲ್ಲ. ಟ್ರಾನ್ಸ್‌ಫಾರಂ ಸುಟ್ಟಿದ್ದರಿಂದ 20 ದಿನಗಳಾದರೂ ದಿನಗಳಾದರು ರೈತರಿಗೆ ವಿದ್ಯುತ್‌ ದೊರೆಯದ್ದಾಗಿದೆ. ಟ್ರಾನ್ಸ್‌ಫಾರಂ ಸುಟ್ಟರೆ ರೈತರಿಗೆ 72 ತಾಸುಗಳ ಒಳಗಾಗಿ ಒದಗಿಸಬೇಕು ಎಂದು ಆಗ್ರಹಿಸಿದರು. ಜೆಸ್ಕಾಂ ಅಧಿಕಾರಿ ತೇಜ್ಯಾ ನಾಯ್ಕ ರೈತ ಮುಖಂಡರಿಗೆ ಫೋನಾಯಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ರೈತ ಸಂಘದ ಮುಖಂಡರಾದ ಎಸ್‌.ಎಲ್‌.ರುದ್ರಪ್ಪ, ಶಿವಪ್ಪ, ಮಲ್ಲಪ್ಪ, ಹನುಮಂತಪ್ಪ, ರಮೇಶ್‌, ಮಧುಸೂದನ್‌, ಆಂಜಿನೆಯ, ಮಾರೆಪ್ಪ, ರಾಮಯ್ಯ, ಪೂಜಾರಿ ಅಂಜನಿ, ತಿಪ್ಪೇಸ್ವಾಮಿ, ಶಂಕ್ರಯ್ಯ, ಗಾದೆಪ್ಪ, ಶಿವಲಿಂಗಪ್ಪ, ವಡ್ಡರ ಕೆಂಚಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ