ಹೊಸಪೇಟೆ (ಬಳ್ಳಾರಿ): ಜ. 10 ಹಾಗೂ 11 ರಂದು ನಡೆಯಲಿರುವ ಐತಿಹಾಸಿಕ ಹಂಪಿ ಉತ್ಸವದಲ್ಲಿ ಮೊದಲ ಬಾರಿ ಮತ್ಸ್ಯ ಮೇಳ ಆಯೋಜಿಸಲಾಗುತ್ತಿದ್ದು, ಉತ್ಸವಕ್ಕೆ ಮತ್ತಷ್ಟು ಮೆರುಗು ತುಂಬಲಿದೆ.
ಹಂಪಿಯ ಎದುರು ಬಸವಣ್ಣ ಮಂಟಪ ಪಕ್ಕದಲ್ಲಿ ನಡೆಯಲಿರುವ ಮೇಳದಲ್ಲಿ ಅಲಂಕಾರಿಕ ಮೀನುಗಳು ಸೇರಿ 100 ಬಗೆಯ ಮೀನುಗಳನ್ನು ಪ್ರದರ್ಶಿಸಲಾಗುತ್ತದೆ. ತುಂಗಭದ್ರಾ ಜಲಾಶಯ, ಈ ಭಾಗದ ಜನರ ಜೀವನಾಡಿಯಾಗಿದೆ. ಮೀನುಗಾರಿಕೆ ಉತ್ತೇಜಿಸಲು ಮತ್ಸ್ಯ ಮೇಳ ಸಹಕಾರಿಯಾಗಲಿದೆ ಎಂಬ ಮಾತು ಕೇಳಿಬಂದಿದೆ.
ಟನೆಲ್ ಅಕ್ವೇರಿಯಂ ಮಾದರಿಯನ್ನು ಹಂಪಿ ಉತ್ಸವದಲ್ಲಿ ತಯಾರಿಸುತ್ತಿರುವುದು ವಿಶೇಷ. ಮೈಸೂರು ದಸರಾದಲ್ಲಿಇಂತಹ ಮಾದರಿ ನೋಡುಗರ ಕಣ್ಮನ ಸೆಳೆಯುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಮೀನುಗಳ ಪ್ರದರ್ಶನ
ಉಪ್ಪು ಹಾಗೂ ಶುದ್ಧ ನೀರಿನಲ್ಲಿ ಜೀವಿಸುವ ಮೀನುಗಳು ಈ ಮೇಳದಲ್ಲಿ ಇರಲಿವೆ. ಫಿರಾನ್ ಫಿಶ್, ಏಂಜೆಲ್ ಫಿಶ್, ಲಯನ್ ಹೆಡ್ ಸೇರಿ ಹಲವು ಪ್ರಬೇಧದ ಮೀನುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಮತ್ಸ್ಯಪ್ರಿಯರ ಕುತೂಹಲ ತಣಿಸಲು ಜಿಲ್ಲಾಡಳಿತ ಮುಂದಾಗಿದೆ.
ಮಂಗಳೂರು, ಕಾರವಾರದಿಂದ ಉಪ್ಪು ನೀರಿನ ಮೀನುಗಳು, ಬೆಂಗಳೂರು, ಚೆನ್ನೈ ಭಾಗದಿಂದ ಸಿಹಿನೀರಿನ ಮೀನುಗಳನ್ನು ತರಿಸಲಾಗುತ್ತಿದೆ. ಮತ್ಸ್ಯ ಮೇಳದಲ್ಲಿ ಮೀನುಗಾರಿಕೆ ಪ್ರೋತ್ಸಾಹಿಸಲು ಸರಕಾರಿ ಸೌಲಭ್ಯಗಳ ಮಾಹಿತಿಯನ್ನೂ ಪ್ರದರ್ಶಿಸಲಾಗುತ್ತದೆ.
ಹಂಪಿ ಉತ್ಸವದಲ್ಲಿ ಮೊದಲ ಬಾರಿ ಮತ್ಸ್ಯ ಮೇಳ ಆಯೋಜಿಸಲಾಗಿದೆ. 100 ಬಗೆಯ ಮೀನುಗಳನ್ನು ಮೇಳದಲ್ಲಿ ಕಾಣಬಹುದು. ಮತ್ಸ್ಯ ಮೇಳವು ಮೀನುಗಾರಿಕೆಯ ಉದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬುದಾಗಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್ಎಸ್ ನಕುಲ್ ಹೇಳಿದ್ದಾರೆ.
ಹಂಪಿಯ ಎದುರು ಬಸವಣ್ಣ ಮಂಟಪ ಪಕ್ಕದಲ್ಲಿ ನಡೆಯಲಿರುವ ಮೇಳದಲ್ಲಿ ಅಲಂಕಾರಿಕ ಮೀನುಗಳು ಸೇರಿ 100 ಬಗೆಯ ಮೀನುಗಳನ್ನು ಪ್ರದರ್ಶಿಸಲಾಗುತ್ತದೆ. ತುಂಗಭದ್ರಾ ಜಲಾಶಯ, ಈ ಭಾಗದ ಜನರ ಜೀವನಾಡಿಯಾಗಿದೆ. ಮೀನುಗಾರಿಕೆ ಉತ್ತೇಜಿಸಲು ಮತ್ಸ್ಯ ಮೇಳ ಸಹಕಾರಿಯಾಗಲಿದೆ ಎಂಬ ಮಾತು ಕೇಳಿಬಂದಿದೆ.
ಟನೆಲ್ ಅಕ್ವೇರಿಯಂ ಮಾದರಿಯನ್ನು ಹಂಪಿ ಉತ್ಸವದಲ್ಲಿ ತಯಾರಿಸುತ್ತಿರುವುದು ವಿಶೇಷ. ಮೈಸೂರು ದಸರಾದಲ್ಲಿಇಂತಹ ಮಾದರಿ ನೋಡುಗರ ಕಣ್ಮನ ಸೆಳೆಯುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಮೀನುಗಳ ಪ್ರದರ್ಶನ
ಉಪ್ಪು ಹಾಗೂ ಶುದ್ಧ ನೀರಿನಲ್ಲಿ ಜೀವಿಸುವ ಮೀನುಗಳು ಈ ಮೇಳದಲ್ಲಿ ಇರಲಿವೆ. ಫಿರಾನ್ ಫಿಶ್, ಏಂಜೆಲ್ ಫಿಶ್, ಲಯನ್ ಹೆಡ್ ಸೇರಿ ಹಲವು ಪ್ರಬೇಧದ ಮೀನುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಮತ್ಸ್ಯಪ್ರಿಯರ ಕುತೂಹಲ ತಣಿಸಲು ಜಿಲ್ಲಾಡಳಿತ ಮುಂದಾಗಿದೆ.
ಮಂಗಳೂರು, ಕಾರವಾರದಿಂದ ಉಪ್ಪು ನೀರಿನ ಮೀನುಗಳು, ಬೆಂಗಳೂರು, ಚೆನ್ನೈ ಭಾಗದಿಂದ ಸಿಹಿನೀರಿನ ಮೀನುಗಳನ್ನು ತರಿಸಲಾಗುತ್ತಿದೆ. ಮತ್ಸ್ಯ ಮೇಳದಲ್ಲಿ ಮೀನುಗಾರಿಕೆ ಪ್ರೋತ್ಸಾಹಿಸಲು ಸರಕಾರಿ ಸೌಲಭ್ಯಗಳ ಮಾಹಿತಿಯನ್ನೂ ಪ್ರದರ್ಶಿಸಲಾಗುತ್ತದೆ.
ಹಂಪಿ ಉತ್ಸವದಲ್ಲಿ ಮೊದಲ ಬಾರಿ ಮತ್ಸ್ಯ ಮೇಳ ಆಯೋಜಿಸಲಾಗಿದೆ. 100 ಬಗೆಯ ಮೀನುಗಳನ್ನು ಮೇಳದಲ್ಲಿ ಕಾಣಬಹುದು. ಮತ್ಸ್ಯ ಮೇಳವು ಮೀನುಗಾರಿಕೆಯ ಉದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬುದಾಗಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್ಎಸ್ ನಕುಲ್ ಹೇಳಿದ್ದಾರೆ.