ಆ್ಯಪ್ನಗರ

ಅರಣ್ಯ ಜಂಟಿ ಸಮೀಕ್ಷೆ ಚುರುಕಿಗೆ ಆಗ್ರಹ

ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ ರೈತರ ಜಮೀನುಗಳ ಜಂಟಿ ಸಮೀಕ್ಷೆ ವಿಳಂಬ ಖಂಡಿಸಿ ಅಖಿಲ ಭಾರತ ಕಿಸಾನ್‌ ಸಭಾದ (ಎಐಕೆಎಸ್‌)ಪದಾಧಿಕಾರಿಗಳು ಗುರುವಾರ ಪಟ್ಟಣದ ತಹಸಿಲ್‌ ಕಚೇರಿ ಎದುರು ಧರಣಿ ನಡೆಸಿದರು.

Vijaya Karnataka 15 Jun 2018, 5:00 am
ಸಂಡೂರು : ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ ರೈತರ ಜಮೀನುಗಳ ಜಂಟಿ ಸಮೀಕ್ಷೆ ವಿಳಂಬ ಖಂಡಿಸಿ ಅಖಿಲ ಭಾರತ ಕಿಸಾನ್‌ ಸಭಾದ (ಎಐಕೆಎಸ್‌)ಪದಾಧಿಕಾರಿಗಳು ಗುರುವಾರ ಪಟ್ಟಣದ ತಹಸಿಲ್‌ ಕಚೇರಿ ಎದುರು ಧರಣಿ ನಡೆಸಿದರು.
Vijaya Karnataka Web BLR-BLY 14 SDR 1


ಎಐಕೆಎಸ್‌ ತಾಲೂಕು ಪ್ರ.ಕಾರ್ಯದರ್ಶಿ ಆರ್‌.ಸ್ವಾಮಿ ಮಾತನಾಡಿ, ಕಡಿಮೆ ಉಳುಮೆ ಭೂಮಿ ಹೊಂದಿದ ತಾಲೂಕಿನಲ್ಲಿ ಭೂ ರಹಿತ ಬಡ ರೈತರು ಅರಣ್ಯದಲ್ಲಿ 4-5 ದಶಕಗಳಿಂದ ಉಳುಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇಂತಹ, ರೈತರು ಅರಣ್ಯ ಹಕ್ಕು ಕಾಯಿದೆಯಡಿ ಜಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿ ಹಕ್ಕು ಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈವರೆಗೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅರಣ್ಯದಲ್ಲಿ ಉಳುಮೆ ಮಾಡಿದ ರೈತರ ಜಮೀನುಗಳನ್ನು ಜಂಟಿ ಸರ್ವೆ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ಸಮೀಕ್ಷೆ ವಿಳಂಬದ ಕುರಿತು ಸಹಾಯಕ ಆಯುಕ್ತರ ಗಮನಕ್ಕೆ ತರಲಾಗಿದೆ. ಆದರೆ, ಈವರೆಗೆ ಸಮೀಕ್ಷೆ ಕಾರ್ಯ ಚುರುಕುಗೊಂಡಿಲ್ಲ ಎಂದು ದೂರಿದರು. ದಕ್ಷಿಣ ವಲಯದ ಅರಣ್ಯಾಧಿಕಾರಿಗಳು ಅಂಕಮ್ಮನಾಳ ಸೇರಿ ಕೆಲವೆಡೆ ಅರಣ್ಯ ಜಮೀನುಗಳಲ್ಲಿ ಸಾಕಷ್ಟು ಮಳೆ ಸುರಿದರೂ ಬಿತ್ತನೆಗೆ ಅವಕಾಶ ನೀಡದೆ ರೈತರಿಗೆ ಅಡ್ಡಿ ಪಡಿಸುತ್ತಿರುವುದು ಅನ್ಯಾಯ. ಕೂಡಲೇ, ಸರಕಾರ ಮಧ್ಯ ಪ್ರವೇಶಿಸಿ ಅರಣ್ಯ ಜಮೀನುಗಳಲ್ಲಿ ರೈತರಿಗೆ ಉಳುಮೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್‌ ಎಚ್‌.ಎಂ.ರಮೇಶರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಎಂ.ತಿಮ್ಮೋಜಿರಾವ್‌, ಮುಖಂಡರಾದ ಕೆ.ನಿಂಗಪ್ಪ, ಚೌಡಪ್ಪ, ಭರಮಪ್ಪ, ಚಾಂದ್‌ ಹುಸೇನ್‌, ಪಂಪಣ್ಣ, ವಹಾಬ್‌, ಸಿದ್ದಪ್ಪ, ಅಂಜೀನಮ್ಮ, ಲಕ್ಷ್ಮಿ, ಮಾರೆಮ್ಮ, ಯಂಕಮ್ಮ, ಓಬಮ್ಮ, ನಿಂಗಮ್ಮ. ರತ್ನಮ್ಮ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ