ಆ್ಯಪ್ನಗರ

ಯುವಕನೊಂದಿಗೆ ಮಾಜಿ ಶಾಸಕರ ವಾಗ್ವಾದ: ವೈರಲ್‌

ನಗರದ ಚಿತ್ತವಾಡ್ಗಿ ಪ್ರದೇಶದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಮಾಜಿ ಶಾಸಕ ಆನಂದಸಿಂಗ್‌ ಹಾಗೂ ಸ್ಥಳೀಯ ಯುವಕರ ಮಧ್ಯೆ ಶನಿವಾರ ವಾಗ್ವಾದ ಉಂಟಾಗಿದೆ.

Vijaya Karnataka Web 30 Apr 2018, 3:37 pm
ಹೊಸಪೇಟೆ : ನಗರದ ಚಿತ್ತವಾಡ್ಗಿ ಪ್ರದೇಶದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಮಾಜಿ ಶಾಸಕ ಆನಂದಸಿಂಗ್‌ ಹಾಗೂ ಸ್ಥಳೀಯ ಯುವಕರ ಮಧ್ಯೆ ಶನಿವಾರ ವಾಗ್ವಾದ ಉಂಟಾಗಿದೆ.
Vijaya Karnataka Web former mlas clash with youth viral
ಯುವಕನೊಂದಿಗೆ ಮಾಜಿ ಶಾಸಕರ ವಾಗ್ವಾದ: ವೈರಲ್‌


ಚಿತ್ತವಾಡ್ಗಿ ಪ್ರದೇಶದ ದೇವಸ್ಥಾನದ ಅಭಿವೃದ್ಧಿ ವಿಷಯವಾಗಿ ಸ್ಥಳೀಯ ನಿವಾಸಿ ನಾಗರಾಜ್‌ ಎನ್ನುವವರು ಪ್ರಶ್ನಿಸಿದ್ದಾರೆ. ಆಗ ಪ್ರತಿಕ್ರಿಯಿಸಿದ ಆನಂದ್‌ ಸಿಂಗ್‌ ಅವರು, ರಸ್ತೆ ಸೇರಿದಂತೆ ಅಭಿವೃದ್ಧಿಯ ಕುರಿತು ಕೇಳು ಎಂದಿದ್ದಾರೆ. ಆ ನಂತರವೂ ಪರಸ್ಪರ ವಾಗ್ವಾದವಾಗಿದೆ. ಜತೆಗಿದ್ದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಮಾಮ್‌ ನಿಯಾಜಿ ಮತ್ತಿತರರು, ಯುವಕನನ್ನು ಸಮಾಧಾನಪಡಿಸಿದ್ದಾರೆ. ಜತೆಗೆ, ಸ್ಥಳದಿಂದ ಆನಂದಸಿಂಗ್‌ ಅವರನ್ನು ಕರೆದೊಯ್ದಿದ್ದಾರೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ