ಆ್ಯಪ್ನಗರ

‘ಗಾಂಧೀಜಿ ತತ್ತ್ವಾದರ್ಶಗಳು ವಿಶ್ವಮಾನ್ಯ: ಡಿಸಿ

ಗಾಂಧೀಜಿಯವರ ಸತ್ಯನಿಷ್ಠೆ, ಅಹಿಂಸೆ ಹಾಗೂ ಸತ್ಯಾಗ್ರಹ ಮತ್ತಿತರೆ ಆದರ್ಶಗಳು ವಿಶ್ವಮಾನ್ಯವಾಗಿವೆ. ಅಂಥವರ ವಿಚಾರಧಾರೆ ಮತ್ತು ಸಂದೇಶಗಳ ಸಾರ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ… ಪ್ರಸಾತ್‌ ಮನೋಹರ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Vijaya Karnataka 14 Oct 2018, 5:00 am
ಬಳ್ಳಾರಿ : ಗಾಂಧೀಜಿಯವರ ಸತ್ಯನಿಷ್ಠೆ, ಅಹಿಂಸೆ ಹಾಗೂ ಸತ್ಯಾಗ್ರಹ ಮತ್ತಿತರೆ ಆದರ್ಶಗಳು ವಿಶ್ವಮಾನ್ಯವಾಗಿವೆ. ಅಂಥವರ ವಿಚಾರಧಾರೆ ಮತ್ತು ಸಂದೇಶಗಳ ಸಾರ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ… ಪ್ರಸಾತ್‌ ಮನೋಹರ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
Vijaya Karnataka Web BLR-BLY 13 MANJU 01


ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಯನ್ನು, ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಶನಿವಾರ ಅದ್ಧೂರಿಯಾಗಿ ಸ್ವಾಗತಿಸಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆ ಹೊತ್ತಿನಲ್ಲಿ ಅವರ ವಿಚಾರಧಾರೆಗಳು ಮತ್ತು ಸಂದೇಶ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದೆ. ಶಾಂತಿಮಾರ್ಗ ಎನ್ನುವ ಸ್ತಬ್ಧಚಿತ್ರ ರಥಯಾತ್ರೆ ನಮ್ಮ ಜಿಲ್ಲೆಗೆ ಬಂದಿರುವುದು ಖುಷಿಯ ಸಂಗತಿ ಎಂದರು.

ನಂತರ ಜಿಲ್ಲಾಧಿಕಾರಿಗಳು ಗಾಂಧೀಜಿಯವರ ಪ್ರತಿಮೆಗೆ ಹೂವಿನ ಹಾಕುವುದರ ಮೂಲಕ ನಮಿಸಿದರು. ಈ ಸಂದರ್ಭದಲ್ಲಿ 'ರಘುಪತಿ ರಾಘವ ರಾಜಾರಾಮ' ಸೇರಿದಂತೆ ನಾನಾ ಹಾಡುಗಳನ್ನು ಹಾಡಿದರು. ಜಯಘೋಷ ಕೂಗುವುದರ ಮೂಲಕ ನೆರೆದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ರಥಯಾತ್ರೆ ಸ್ತಬ್ಧಚಿತ್ರದಲ್ಲಿ ಎದುರುಗಡೆ ಮಹಾತ್ಮ ಗಾಂಧೀಜಿ ಅವರು ವಿಶ್ರಾಂತ ಭಂಗಿಯಲ್ಲಿ ಕುಳಿತಿರುವ ಪ್ರತಿಮೆ, ದಂಡಿ ಸತ್ಯಾಗ್ರಹ ನಡೆಸಿರುವುದು ಮತ್ತು ಅವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಹೆಜ್ಜೆ ಹಾಕಿರುವುದು, ಗಾಂಧೀಜಿಯವರ ಬಾಲ್ಯ ಜೀವನದಿಂದಿಡಿದು ಸ್ವಾತಂತ್ರ್ಯ ಹೋರಾಟದ ರೇಖಾಚಿತ್ರಗಳು ಹಾಗೂ ವೈವಿಧ್ಯಮಯ ಚಿತ್ರಗಳು ರಥಯಾತ್ರೆಯಲ್ಲಿವೆ.ರಥಯಾತ್ರೆಯಲ್ಲಿ ಅಳವಡಿಸಲಾಗಿರುವ ಎಲ್‌ಇಡಿಯಲ್ಲಿ ಮಹಾತ್ಮರ ಸಂದೇಶಗಳು ಭಿತ್ತರವಾಗುತ್ತಿರುವುದನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ನಂತರ ಸ್ತಬ್ಧಚಿತ್ರ ರಥಯಾತ್ರೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್‌.ಜೆ.ಸೋಮಶೇಖರ, ತಹಸೀಲ್ದಾರ್‌ ನಾಗರಾಜ, ವಿಶ್ವಜೀತ್‌ ಮೆಹತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಆರೋಗ್ಯ ಶಿಕ್ಷ ಣಾಧಿಕಾರಿ ಈಶ್ವರ್‌ ದಾಸಪ್ಪನವರ್‌, ಪದವೀ ಪೂರ್ವ ಬಾಲಕಿಯರ ಕಾಲೇಜು ಪ್ರಾಂಶುಪಾಲ ಮಹಾಲಿಂಗ ಗೌಡ ಮತ್ತಿತರರಿದ್ದರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ