ಆ್ಯಪ್ನಗರ

ಗಣೇಶ ಹಬ್ಬ : ಬಡಾವಣೆಗಳಲ್ಲಿ ಸಂಭ್ರಮಾಚರಣೆ

ಪಟ್ಟಣದಲ್ಲಿ ನಾಗರಿಕರು, ಸಂಘಟನೆಯವರು ಗಣೇಶ ಹಬ್ಬವನ್ನು ಸಂಭ್ರಮದಿಂದ ಗುರುವಾರ ಆಚರಿಸಿದರು.

Vijaya Karnataka 15 Sep 2018, 5:00 am
ಕೊಟ್ಟೂರು ; ಪಟ್ಟಣದಲ್ಲಿ ನಾಗರಿಕರು, ಸಂಘಟನೆಯವರು ಗಣೇಶ ಹಬ್ಬವನ್ನು ಸಂಭ್ರಮದಿಂದ ಗುರುವಾರ ಆಚರಿಸಿದರು.
Vijaya Karnataka Web BLR-BLY14KTR1


ಹಬ್ಬದ ದಿನದಂದು ಬೆಳಗಿನಿಂದಲೇ ಎಲ್ಲರಲ್ಲೂ ಸಡಗರ ಮೂಡಿತ್ತು. ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ನಿಮಿತ್ತ ವಿದ್ಯಾರ್ಥಿಗಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ವರ್ತಕರು ಮೂರ್ತಿ ಪ್ರತಿಷ್ಠಾಪಿಸಿದ್ದರು. ಬರಗಾಲ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಅಚರಿಸಿದರು. ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯಲ್ಲಿ, ಅರ್ಚಕ ಚಿದಂಬರ ಭಟ್‌ ಪೌರೋಹಿತ್ಯದಲ್ಲಿ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ವರ್ತಕರಾದ ಪತ್ತಿಕೊಂಡ ಗಣೇಶಪ್ಪ, ಎಸ್‌.ಮಹೇಂದ್ರಕುಮಾರ್‌, ಚಾಪಿ ಚಂದ್ರಪ್ಪ, ಕೆಸಿಟಿ ಕೊಟ್ರಯ್ಯ, ಗುರುಬಸವರಾಜ, ವಿವೇಕಾನಂದ, ಬಿಎಸ್‌ ವೀರೇಶ, ಜನಾರ್ಧನಶೆಟ್ಟಿ, ಪ್ರಕಾಶ ಬಾಚೇನಹಳ್ಳಿ, ಚಂದ್ರಯ್ಯ, ಗುಮಾಸ್ತರ ಸಂಘದ ಪದಾಧಿಕಾರಿಗಳಾದ ಎಂ.ಮಂಜುನಾಥ, ಸಿ.ಪೋರಜ್ಜ, ಕೆ.ವಿಜಯಕುಮಾರ್‌, ಗಂಜಿ ವೀರೇಶ, ಶಾಂತಪ್ಪ, ಅರಮನಿ ಮಹೇಶ, ಎಚ್‌.ಕೊಟ್ರೇಶ, ಎಂ. ಕೊಟ್ರೇಶ ಸೇರಿ ಅನೇಕರಿದ್ದರು.

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಸಂಜೆ ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸಲಾಯಿತು. ಸಂಜೆ ಮೆರವಣಿಗೆ ಮೂಲಕ ಆಯಗಾರರ ಮನೆಗೆ ತೆರಳಿ ಮಣ್ಣಿನಿಂದ ತಯಾರಿಸಿದ, ಬಣ್ಣ ರಹಿತ ಮೂರ್ತಿಯನ್ನು ಅರ್ಚಕ ಬಳಗದವರು ತಂದರು. ನಂತರ ದೇವಸ್ಥಾನದಲ್ಲಿ ಮಂಟಪದಲ್ಲಿ ಮೂರ್ತಿಯನ್ನು ಕೂರಿಸಿ ಪೂಜಿಸಲಾಯಿತು. ಶ್ರೀ ಪ್ರಕಾಶದೇವರು, ಧರ್ಮಕರ್ತ ಸಿ.ಎಚ್‌.ಎಂ.ಗಂಗಾಧರಯ್ಯ, ನಾಗರಾಜ ಸೇರಿ ಅನೇಕರಿದ್ದರು.

ಸಸಿ ವಿತರಣೆ: ತೇರು ಬಯಲು ಬಸವೇಶ್ವರ ಯುವಕ ಮಂಡಳಿಯವರು 31ನೇ ವರ್ಷದ ಗಣೇಶ ಹಬ್ಬದ ನಿಮಿತ್ತ, ನೆರೆ ಹಾವಳಿಯಿಂದ ತತ್ತರಿಸಿರುವ ಕೊಡಗು, ಕೇರಳದ ಸನ್ನಿವೇಶಗಳ, ಪರಿಸರ ಜಾಗೃತಿ ಮೂಡಿಸುವ ಗಣೇಶನ ಧ್ವನಿ ಮತ್ತು ಬೆಳಕು ಸಂಯೋಜನೆ ದೃಶ್ಯ ಪ್ರದರ್ಶಿಸಿದರು. ನಂತರ ದರ್ಶನಕ್ಕೆ ಬಂದ ಭಕ್ತರಿಗೆ ಸಸಿಗಳನ್ನು ವಿತರಿಸಿದರು. ಐದು ದಿನಗಳ ಕಾಲ 5 ಸಾವಿರ ಸಸಿಗಳನ್ನು ನೀಡುವ ಗುರಿ ಹೊಂದಿದ್ದಾರೆ. ಅಕ್ಕಮಹಾದೇವಿ ದೇವಸ್ಥಾನದ ಯುವ ಬಳಗದವರು ಸಹ ಗಣೇಶ ಮೂರ್ತಿ ಪ್ರತಿಷ್ಠಾಪಸಿದ್ದರು. ಪಟ್ಟಣದ ನಾನಾ ಬಡಾವಣೆಗಳಲ್ಲಿ ಗಣೇಶ ಹಬ್ಬವನ್ನು ಯುವಕರು ಅಚರಿಸಿದರು. ಸಂಜೆ ದೇವಸ್ಥಾನ ಸೇರಿ ಬಡಾವಣೆಗಳ ಗಣೇಶ ಮೂರ್ತಿಗಳ ದರ್ಶನವನ್ನು ನಾಗರೀಕರು ಪಡದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ